<p><strong>ಹುಣಸಗಿ:</strong> ‘ಡೊಳ್ಳು ಕುಣಿತ ಜಾನಪದ ಕಲೆಗಳಲ್ಲಿಯೇ ವಿಶಿಷ್ಟವಾದದ್ದು’ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ ಅಭಿಪ್ರಾಯಪಟ್ಟರು.</p>.<p>ಹುಣಸಗಿ ಸಮೀಪದ ದೇವತಕಲ್ಲ ಗ್ರಾಮದ ಕುವೆಂಪು ಶಾಲಾ ಆವರಣದಲ್ಲಿ ಆಯೋಜಿಸಲಾಗಿರುವ ಡೊಳ್ಳು ಕುಣಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ನಮ್ಮ ಹಿರಿಯರು ಕೃಷಿ ಚಟುವಟಿಕೆ ಜತೆಗೆ ಜಾನಪದ ಕ್ರೀಡೆ ಹಾಗೂ ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದರು. ಅಲ್ಲದೆ, ಅವರು ನಿತ್ಯದ ಕೆಲಸದಲ್ಲಿ ಶ್ರಮವನ್ನು ಆರಿಸಿಕೊಳ್ಳಲು ಹಲವು ಕಲೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರು ಎಂದರು.</p>.<p>ಇಂದಿನ ಯುವ ಜನಾಂಗ ನಮ್ಮ ಮೂಲ ಜನಪದ ಕಲೆಗಳನ್ನು ಕಲಿಯುವ ಮೂಲಕ ನಮ್ಮತನವನ್ನು ಎತ್ತಿ ಹಿಡಿಯಬೇಕು ಎಂದು ಕಿವಿ ಮಾತು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ,‘ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಯುವ ಜನಪದ ಕಲಾವಿದರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಈ ನಿಟ್ಟಿನಲ್ಲಿ ಯುವಕರಿಗೆ ತರಬೇತಿ ನೀಡುವುದರ ಮೂಲಕ ಯಾದಗಿರಿ ಜಿಲ್ಲೆಯಲ್ಲಿ 10 ಹೊಸ ತಂಡಗಳನ್ನು ರಚಿಸುವ ಉದ್ದೇಶವಿದೆ. ಆದ್ದರಿಂದ ದೇವತಲ್ಲ ಗ್ರಾಮದಲ್ಲಿ ಡೊಳ್ಳಿನ ತರಬೇತಿ ಶಿಬಿರ ಆಯೋಜಿಸಲಾಗಿದೆ.</p>.<p>ಮುಂದಿನ ದಿನಗಳಲ್ಲಿ ಹಲಗೆ ತರಬೇತಿ, ಕಣಿ ಹಲಗೆ, ಸಂಬಾಳ, ಕಂಸಾಳೆ ಮತ್ತಿತರ ಜಾನಪದ ಗೀತ ಪ್ರಕಾರ ಹಾಗೂ ಸಂಪ್ರದಾಯ ಹಾಡುಗಳ ತರಬೇತಿ ನೀಡುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.</p>.<p>ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಹೇಡಿಗಿನಾಳ ಮಾತನಾಡಿದರು. ಉಪನ್ಯಾಸಕ ಬಿರೇಶ ಕುಮಾರ ದೇವತಕಲ್ಲ, ತರಬೇತುದಾರ ಬಸಪ್ಪ ಹನುಮಸಾಗರ ವೇದಿಕೆಯಲ್ಲಿದ್ದರು. ಲಂಕೇಶ ನಿರೂಪಿಸಿದರು. ಶ್ರೇಯಣ್ಣ ಸ್ವಾಗತಿಸಿದರು. ಸಂತೋಷ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ‘ಡೊಳ್ಳು ಕುಣಿತ ಜಾನಪದ ಕಲೆಗಳಲ್ಲಿಯೇ ವಿಶಿಷ್ಟವಾದದ್ದು’ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ ಅಭಿಪ್ರಾಯಪಟ್ಟರು.</p>.<p>ಹುಣಸಗಿ ಸಮೀಪದ ದೇವತಕಲ್ಲ ಗ್ರಾಮದ ಕುವೆಂಪು ಶಾಲಾ ಆವರಣದಲ್ಲಿ ಆಯೋಜಿಸಲಾಗಿರುವ ಡೊಳ್ಳು ಕುಣಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ನಮ್ಮ ಹಿರಿಯರು ಕೃಷಿ ಚಟುವಟಿಕೆ ಜತೆಗೆ ಜಾನಪದ ಕ್ರೀಡೆ ಹಾಗೂ ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದರು. ಅಲ್ಲದೆ, ಅವರು ನಿತ್ಯದ ಕೆಲಸದಲ್ಲಿ ಶ್ರಮವನ್ನು ಆರಿಸಿಕೊಳ್ಳಲು ಹಲವು ಕಲೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರು ಎಂದರು.</p>.<p>ಇಂದಿನ ಯುವ ಜನಾಂಗ ನಮ್ಮ ಮೂಲ ಜನಪದ ಕಲೆಗಳನ್ನು ಕಲಿಯುವ ಮೂಲಕ ನಮ್ಮತನವನ್ನು ಎತ್ತಿ ಹಿಡಿಯಬೇಕು ಎಂದು ಕಿವಿ ಮಾತು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ,‘ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಯುವ ಜನಪದ ಕಲಾವಿದರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಈ ನಿಟ್ಟಿನಲ್ಲಿ ಯುವಕರಿಗೆ ತರಬೇತಿ ನೀಡುವುದರ ಮೂಲಕ ಯಾದಗಿರಿ ಜಿಲ್ಲೆಯಲ್ಲಿ 10 ಹೊಸ ತಂಡಗಳನ್ನು ರಚಿಸುವ ಉದ್ದೇಶವಿದೆ. ಆದ್ದರಿಂದ ದೇವತಲ್ಲ ಗ್ರಾಮದಲ್ಲಿ ಡೊಳ್ಳಿನ ತರಬೇತಿ ಶಿಬಿರ ಆಯೋಜಿಸಲಾಗಿದೆ.</p>.<p>ಮುಂದಿನ ದಿನಗಳಲ್ಲಿ ಹಲಗೆ ತರಬೇತಿ, ಕಣಿ ಹಲಗೆ, ಸಂಬಾಳ, ಕಂಸಾಳೆ ಮತ್ತಿತರ ಜಾನಪದ ಗೀತ ಪ್ರಕಾರ ಹಾಗೂ ಸಂಪ್ರದಾಯ ಹಾಡುಗಳ ತರಬೇತಿ ನೀಡುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.</p>.<p>ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಹೇಡಿಗಿನಾಳ ಮಾತನಾಡಿದರು. ಉಪನ್ಯಾಸಕ ಬಿರೇಶ ಕುಮಾರ ದೇವತಕಲ್ಲ, ತರಬೇತುದಾರ ಬಸಪ್ಪ ಹನುಮಸಾಗರ ವೇದಿಕೆಯಲ್ಲಿದ್ದರು. ಲಂಕೇಶ ನಿರೂಪಿಸಿದರು. ಶ್ರೇಯಣ್ಣ ಸ್ವಾಗತಿಸಿದರು. ಸಂತೋಷ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>