ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ತಹಶೀಲ್ದಾರ್ ಸಂಗಮೇಶ ಜಿಡಗಿ ಕಚೇರಿಯಲ್ಲಿ ₹5 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ಪಡೆಯ (ಎಸಿಬಿ) ಬಲೆಗೆ ಸೋಮವಾರ ಬಿದ್ದಿದ್ದಾರೆ.
‘ದೂರುದಾರ ದೊಡ್ಡ ಬನ್ನಪ್ಪ ಅವರ ತಂದೆಯ ಹೆಸರಿನಲ್ಲಿದ್ದ ಹೊಲವನ್ನು ಮಗನ ಹೆಸರಿಗೆ ವರ್ಗಾವಣೆ ಮಾಡಲು ತಹಶೀಲ್ದಾರ್ ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ಸೋಮವಾರ ₹5 ಸಾವಿರ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ’ ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಎಸಿಬಿ ಎಸ್ಪಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಉಮಾಶಂಕರ, ಇನ್ಸ್ಪೆಕ್ಟರ್ ಗುರುಪಾದ ಬಿರಾದಾರ, ಸಿಬ್ಬಂದಿ ಶರಣ ಬಸವ, ಗುತ್ತಪ್ಪಗೌಡ, ಮರೆಪ್ಪ, ವಿಜಯಕುಮಾರ, ಅಮರನಾಥ, ರವಿ, ಈರಣ್ಣ, ಸಾಬಣ್ಣ ದಾಳಿ ವೇಳೆ ಇದ್ದರು.