<p><strong>ಗುರುಮಠಕಲ್</strong>: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ (ಎಸ್ಸಿ ಹಾಸ್ಟೆಲ್) ಸಮಸ್ಯೆಗಳನ್ನು ಪರಿಹರಿಸುವಂತೆ ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ಮೇಲ್ವಿಚಾರಕರನ್ನು ಆಗ್ರಹಿಸಿದರು.</p>.<p>‘ಮಧ್ಯಾಹ್ನದ ಊಟದ ವೇಳೆ ಅಡುಗೆ ಸಾಲುತ್ತಿಲ್ಲ, ಅಡುಗೆ ಮಾಡುವಾಗ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬಿಸಿ ನೀರಿನ ವ್ಯವಸ್ಥೆ ಮಾಡಬೇಕು, ಅಡುಗೆ ಕೋಣೆಯಲ್ಲಿ ರೊಟ್ಟಿ ಮಾಡುವ ಪ್ರದೇಶದ ಸ್ವಚ್ಛತೆಗೆ ಕ್ರಮವಹಿಸಬೇಕು’ ವಿದ್ಯಾರ್ಥಿಗಳು ಕೋರಿದರು.</p>.<p>ಹಾಸ್ಟೆಲ್ನಲ್ಲಿ ಕೆಲ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಬಳಕೆ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದವು.</p>.<p>‘ಕೆಲವೊಮ್ಮೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರುಪೇರಾದ ವೇಳೆ ಅಡುಗೆ ಸಾಲದಂತಾಗುತ್ತಿದೆ. ಆದರೆ, ಮತ್ತೆ ಅಡುಗೆ ಮಾಡಿ ಕೊಡುತ್ತೇವೆ’ ಎಂದು ಅಡುಗೆ ಸಿಬ್ಬಂದಿ ತಿಳಿಸಿದರು.</p>.<p>‘ಅಡುಗೆಯ ವೇಳೆ ಕಡ್ಡಾಯವಾಗಿ ಅಡುಗೆ ಮನೆಯ ವಸ್ತ್ರಗಳನ್ನು ಧರಿಸಿ, ರೊಟ್ಟಿ ಮಾಡುವ ಸ್ಥಳ ಸೇರಿದಂತೆ ಅಡುಗೆಯ ಶುಚಿತ್ವದತ್ತ ಮುತುವರ್ಜಿ ವಹಿಸಬೇಕು. ಜತೆಗೆ ಯಾವುದೇ ಕಾರಣಕ್ಕೂ ಅಡುಗೆ ಕಡಿಮೆಯಾಗದಂತೆ ಕಾಳಜಿವಹಿಸಬೇಕು’ ಎಂದು ಅಡುಗೆ ಸಿಬ್ಬಂದಿಗೆ ವಸತಿ ನಿಲಯದ ಮೇಲ್ವಿಚಾರಕ ವೇಣುಗೋಪಾಲ ಮನ್ನೆ ಸೂಚಿಸಿದರು.</p>.<p>‘ನಾನು ಈಚೆಗೆ ಇಲ್ಲಿಗೆ ನಿಯುಕ್ತನಾಗಿದ್ದು, ಬಂದಾಗಿನಿಂದ ಗುಣಮಟ್ಟದ ತರಕಾರಿ ಬಳಸಲು ಆಧ್ಯತೆ ನೀಡುತ್ತಿರುವೆ. ಈಗಿನಿಂದ ನಾನೇ ವೈಯಕ್ತಿಕ ಮುತುವರ್ಜಿ ಮಾಡುವೆ’ ಎಂದು ಭರವಸೆ ನೀಡಿದರು.</p>.<p>‘ಸೋಲಾರ್ ವ್ಯವಸ್ಥೆ ಕೆಟ್ಟಿದು, ಅದನ್ನು ಸರಿಪಡಿಸಲು ಬುಧವಾರ ಮೆಕ್ಯಾನಿಕ್ ತಂಡ ಬರಲಿದೆ. ಇದರಿಂದ ಬಿಸಿ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಮಾಹಿತಿ ನೀಡಿದರು.</p>.<p>‘ಮುಂದಿನ ದಿನಗಳಲ್ಲಿ ತಂಬಾಕು ಸೇರಿದಂತೆ ಯಾವುದೇ ರೀತಿಯ ನಶಾಯುಕ್ತ ಪದಾರ್ಥಗಳು ಬಳಸುವುದು ಗೊತ್ತಾದರೆ, ಅಂತವರ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವೆ ಮತ್ತು ಕ್ರಮಕ್ಕೆ ಶಿಫಾರಸ್ಸು ಮಾಡುವೆ’ ಎಂದು ಎಚ್ಚರಿಸಿದರು.</p>.<p>ಸಾಮಾಜಿಕ ಕಾರ್ಯಕರ್ತರಾದ ನಾಗೇಶ, ರಾಮುಲು, ನರಸಿಂಹುಲು ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್</strong>: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ (ಎಸ್ಸಿ ಹಾಸ್ಟೆಲ್) ಸಮಸ್ಯೆಗಳನ್ನು ಪರಿಹರಿಸುವಂತೆ ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ಮೇಲ್ವಿಚಾರಕರನ್ನು ಆಗ್ರಹಿಸಿದರು.</p>.<p>‘ಮಧ್ಯಾಹ್ನದ ಊಟದ ವೇಳೆ ಅಡುಗೆ ಸಾಲುತ್ತಿಲ್ಲ, ಅಡುಗೆ ಮಾಡುವಾಗ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬಿಸಿ ನೀರಿನ ವ್ಯವಸ್ಥೆ ಮಾಡಬೇಕು, ಅಡುಗೆ ಕೋಣೆಯಲ್ಲಿ ರೊಟ್ಟಿ ಮಾಡುವ ಪ್ರದೇಶದ ಸ್ವಚ್ಛತೆಗೆ ಕ್ರಮವಹಿಸಬೇಕು’ ವಿದ್ಯಾರ್ಥಿಗಳು ಕೋರಿದರು.</p>.<p>ಹಾಸ್ಟೆಲ್ನಲ್ಲಿ ಕೆಲ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಬಳಕೆ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದವು.</p>.<p>‘ಕೆಲವೊಮ್ಮೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರುಪೇರಾದ ವೇಳೆ ಅಡುಗೆ ಸಾಲದಂತಾಗುತ್ತಿದೆ. ಆದರೆ, ಮತ್ತೆ ಅಡುಗೆ ಮಾಡಿ ಕೊಡುತ್ತೇವೆ’ ಎಂದು ಅಡುಗೆ ಸಿಬ್ಬಂದಿ ತಿಳಿಸಿದರು.</p>.<p>‘ಅಡುಗೆಯ ವೇಳೆ ಕಡ್ಡಾಯವಾಗಿ ಅಡುಗೆ ಮನೆಯ ವಸ್ತ್ರಗಳನ್ನು ಧರಿಸಿ, ರೊಟ್ಟಿ ಮಾಡುವ ಸ್ಥಳ ಸೇರಿದಂತೆ ಅಡುಗೆಯ ಶುಚಿತ್ವದತ್ತ ಮುತುವರ್ಜಿ ವಹಿಸಬೇಕು. ಜತೆಗೆ ಯಾವುದೇ ಕಾರಣಕ್ಕೂ ಅಡುಗೆ ಕಡಿಮೆಯಾಗದಂತೆ ಕಾಳಜಿವಹಿಸಬೇಕು’ ಎಂದು ಅಡುಗೆ ಸಿಬ್ಬಂದಿಗೆ ವಸತಿ ನಿಲಯದ ಮೇಲ್ವಿಚಾರಕ ವೇಣುಗೋಪಾಲ ಮನ್ನೆ ಸೂಚಿಸಿದರು.</p>.<p>‘ನಾನು ಈಚೆಗೆ ಇಲ್ಲಿಗೆ ನಿಯುಕ್ತನಾಗಿದ್ದು, ಬಂದಾಗಿನಿಂದ ಗುಣಮಟ್ಟದ ತರಕಾರಿ ಬಳಸಲು ಆಧ್ಯತೆ ನೀಡುತ್ತಿರುವೆ. ಈಗಿನಿಂದ ನಾನೇ ವೈಯಕ್ತಿಕ ಮುತುವರ್ಜಿ ಮಾಡುವೆ’ ಎಂದು ಭರವಸೆ ನೀಡಿದರು.</p>.<p>‘ಸೋಲಾರ್ ವ್ಯವಸ್ಥೆ ಕೆಟ್ಟಿದು, ಅದನ್ನು ಸರಿಪಡಿಸಲು ಬುಧವಾರ ಮೆಕ್ಯಾನಿಕ್ ತಂಡ ಬರಲಿದೆ. ಇದರಿಂದ ಬಿಸಿ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಮಾಹಿತಿ ನೀಡಿದರು.</p>.<p>‘ಮುಂದಿನ ದಿನಗಳಲ್ಲಿ ತಂಬಾಕು ಸೇರಿದಂತೆ ಯಾವುದೇ ರೀತಿಯ ನಶಾಯುಕ್ತ ಪದಾರ್ಥಗಳು ಬಳಸುವುದು ಗೊತ್ತಾದರೆ, ಅಂತವರ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವೆ ಮತ್ತು ಕ್ರಮಕ್ಕೆ ಶಿಫಾರಸ್ಸು ಮಾಡುವೆ’ ಎಂದು ಎಚ್ಚರಿಸಿದರು.</p>.<p>ಸಾಮಾಜಿಕ ಕಾರ್ಯಕರ್ತರಾದ ನಾಗೇಶ, ರಾಮುಲು, ನರಸಿಂಹುಲು ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>