<p><strong>ಕೆಂಭಾವಿ:</strong> ಪಟ್ಟಣದಲ್ಲಿ ಬುಧವಾರ ರಾತ್ರಿ ಎಡೆಬಿಡದೆ ಸುರಿದ ಭಾರಿ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ. ಕೆಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.</p>.<p>ಬುಧವಾರ ರಾತ್ರಿ ಶುರುವಾದ ಮಳೆ ಮಧ್ಯರಾತ್ರಿ 2ರವರೆಗೆ ನಿರಂತರ ಸುರಿದಿದೆ. ಪಟ್ಟಣದ ಸಂಜೀವ ನಗರ ಬಡಾವಣೆ, ಆಶ್ರಯ ಕಾಲೋನಿ, ಕೆಳಗೇರಿ, ಹಿಂದಿನ ಬಜಾರ ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ನೀರು ಹೊರಹಾಕುಲು ಬೆಳಗಿನ ಜಾವದವರೆಗೂ ಹೈರಾಣಾದರು.</p>.<p>ಮಳೆಗೆ ಬ್ರಾಹ್ಮಣ ಸಮಾಜದ ಸ್ಮಶಾನ ಮತ್ತೆ ಕೆರೆಯಂತಾಗಿದ್ದು, ಕೆಂಗೇರಿಯಿಂದ ಬರುವ ನೀರು ಮತ್ತು ಪಟ್ಟಣದ ಪ್ರಮುಖ ರಸ್ತೆಯ ನೀರು ಇದೇ ಸ್ಮಶಾನಕ್ಕೆ ನುಗ್ಗುತ್ತಿರುವುದರಿಂದ ಅವಾಂತರ ಸೃಷ್ಟಿಯಾಗುತ್ತಿದೆ.</p>.<p>ಈಗಾಗಲೆ ಪುರಸಭೆ ಆಡಳಿತ ಚರಂಡಿಗಳ ಮೇಲಿದ್ದ ಹಲವು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಚರಂಡಿಗಳನ್ನು ಸ್ವಚ್ಚಗೊಳಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಹಲವು ಅನಾಹುತಗಳು ತಪ್ಪಿವೆ.</p>.<p>ಮಳೆಯಿಂದಸರ್ಕಾರಿ ಕಚೇರಿಗೂ ಬಿಸಿ ಮುಟ್ಟಿದ್ದು, ಕೆಂಗೇರಿ ಬಡಾವಣೆಯಲ್ಲಿರುವ ಉಪ ತಹಶೀಲ್ದಾರ್ ಕಚೇರಿ ಹಾಗೂ ಅಲ್ಲಿ ತೆರಳುವ ರಸ್ತೆಗಳು ಸಂಪೂರ್ಣ ಜಲಾವೃತ್ತವಾಗಿ ಕೆರೆಯಂತಾಗಿದೆ, ಕಚೇರಿಯ ನೀರನ್ನು ಹೊರಹಾಕುವುದೆ ಪುರಸಭೆ ಮತ್ತು ಕಂದಾಯ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.</p>.<p>ಒಟ್ಟಾರೆ ಬುಧವಾರ ಸುರಿದ ಮಳೆ ಮನೆ ಮತ್ತು ಬೆಳೆಗಳಿಗೂ ಹಾನಿ ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಚಿಂತಾಜನಕರಾಗಿದ್ದಾರೆ. ಒಟ್ಟು 90.2 ಮಿ.ಮೀಮಳೆ ಪ್ರಮಾಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ:</strong> ಪಟ್ಟಣದಲ್ಲಿ ಬುಧವಾರ ರಾತ್ರಿ ಎಡೆಬಿಡದೆ ಸುರಿದ ಭಾರಿ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ. ಕೆಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.</p>.<p>ಬುಧವಾರ ರಾತ್ರಿ ಶುರುವಾದ ಮಳೆ ಮಧ್ಯರಾತ್ರಿ 2ರವರೆಗೆ ನಿರಂತರ ಸುರಿದಿದೆ. ಪಟ್ಟಣದ ಸಂಜೀವ ನಗರ ಬಡಾವಣೆ, ಆಶ್ರಯ ಕಾಲೋನಿ, ಕೆಳಗೇರಿ, ಹಿಂದಿನ ಬಜಾರ ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ನೀರು ಹೊರಹಾಕುಲು ಬೆಳಗಿನ ಜಾವದವರೆಗೂ ಹೈರಾಣಾದರು.</p>.<p>ಮಳೆಗೆ ಬ್ರಾಹ್ಮಣ ಸಮಾಜದ ಸ್ಮಶಾನ ಮತ್ತೆ ಕೆರೆಯಂತಾಗಿದ್ದು, ಕೆಂಗೇರಿಯಿಂದ ಬರುವ ನೀರು ಮತ್ತು ಪಟ್ಟಣದ ಪ್ರಮುಖ ರಸ್ತೆಯ ನೀರು ಇದೇ ಸ್ಮಶಾನಕ್ಕೆ ನುಗ್ಗುತ್ತಿರುವುದರಿಂದ ಅವಾಂತರ ಸೃಷ್ಟಿಯಾಗುತ್ತಿದೆ.</p>.<p>ಈಗಾಗಲೆ ಪುರಸಭೆ ಆಡಳಿತ ಚರಂಡಿಗಳ ಮೇಲಿದ್ದ ಹಲವು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಚರಂಡಿಗಳನ್ನು ಸ್ವಚ್ಚಗೊಳಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಹಲವು ಅನಾಹುತಗಳು ತಪ್ಪಿವೆ.</p>.<p>ಮಳೆಯಿಂದಸರ್ಕಾರಿ ಕಚೇರಿಗೂ ಬಿಸಿ ಮುಟ್ಟಿದ್ದು, ಕೆಂಗೇರಿ ಬಡಾವಣೆಯಲ್ಲಿರುವ ಉಪ ತಹಶೀಲ್ದಾರ್ ಕಚೇರಿ ಹಾಗೂ ಅಲ್ಲಿ ತೆರಳುವ ರಸ್ತೆಗಳು ಸಂಪೂರ್ಣ ಜಲಾವೃತ್ತವಾಗಿ ಕೆರೆಯಂತಾಗಿದೆ, ಕಚೇರಿಯ ನೀರನ್ನು ಹೊರಹಾಕುವುದೆ ಪುರಸಭೆ ಮತ್ತು ಕಂದಾಯ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.</p>.<p>ಒಟ್ಟಾರೆ ಬುಧವಾರ ಸುರಿದ ಮಳೆ ಮನೆ ಮತ್ತು ಬೆಳೆಗಳಿಗೂ ಹಾನಿ ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಚಿಂತಾಜನಕರಾಗಿದ್ದಾರೆ. ಒಟ್ಟು 90.2 ಮಿ.ಮೀಮಳೆ ಪ್ರಮಾಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>