<p><strong>ಹುಣಸಗಿ</strong>: ಉತ್ತರ ಕರ್ನಾಟಕ ಭಾಗದಲ್ಲಿ ಕಾಲಜ್ಞಾನದ ಸಾಹಿತ್ಯದ ಮೂಲಕ ಸಮಾಜವನ್ನು ಎಚ್ಚರಿಸಿ ಸರಿದಾರಿಯಲ್ಲಿ ನಡೆಯುವಂತೆ ಮಾಡಿದವರು ಕೊಡೇಕಲ್ಲ ಬಸವೇಶ್ವರರು.</p>.<p>ಹಲವಾರು ವಿಶಿಷ್ಟ ಸಂಪ್ರದಾಯ ಪದ್ಧತಿಗಳ ಮೂಲಕ ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವವರು ಕೊಡೇಕಲ್ಲ ಬಸವೇಶ್ವರರು. ಅಂತಹ ಸಮಾನತೆಗೆ ಭದ್ರ ಬುನಾದಿ ಹಾಕಿದ ಕೊಡೇಕಲ್ಲ ಬಸವೇಶ್ವರ ಜಾತ್ರೆಯು ಇಂದು ಭಾನುವಾರ ಶ್ರದ್ಧಾ ಭಕ್ತಿಯಿಂದ ಆರಂಭವಾಯಿತು.</p>.<p>ಬೆಳಿಗ್ಗೆ ನಗಾರಿ ಪೂಜೆ ರಾತ್ರಿ ಜೋಡು ಪಲ್ಲಕ್ಕಿಗಳಿಗೆ ಚಿನ್ನದ ಕಳಸಾರೋಹಣ ಹಾಗೂ ಅಷ್ಟವಿಧಾರ್ಚನೆ ಪೂಜಾ ಕಾರ್ಯಕ್ರಮ ಮಹಲಿನ ಮಠದ ವೃಷಬೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ನಡೆಯಿತು.</p>.<p>ಗ್ರಾಮದ ಬಾರಾ ಬಲೂತಿ ವತದಾರರ ಸಮ್ಮುಖದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಹಿಂದು ಮುಸ್ಲಿಂ ಸೇರಿದಂತೆ ಅಪಾರ ಭಕ್ತರ ಸಮ್ಮುಖದಲ್ಲಿ ಜೋಡು ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಜಿಲ್ಲೆ ಸೇರಿದಂತೆ ಸುತ್ತಮುಲಿನ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ ರಾಯಚೂರು ಸೇರಿದಂತೆ ಸಹಸ್ರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ಬಸವೇಶ್ವರದ ದರ್ಶನ ಪಡೆದು ಭಕ್ತಿ ಸಮರ್ಪಿಸುತ್ತಾರೆ.</p>.<p>ವರ್ಷದಲ್ಲಿ ಎರಡು ಬಾರಿ ಯುಗಾದಿಯಾದ 16 ನೇ ದಿನ ಹಾಗೂ ದೀಪಾವಳಿಯಾದ 16 ದಿನಕ್ಕೆ ನಡೆಯುವ ಈ ಜಾತ್ರೆಯು ಹಲವಾರು ವಿಶೇಷತೆಗಳಿಂದ ಕೂಡಿದ್ದು, ಮುಸ್ಲಿಂ ಸಮುದಾಯದ ನಿರ್ದಿಷ್ಟ ಮನೆತನದವರು ಪಲ್ಲಕ್ಕಿ ಉತಸವದಲ್ಲಿ ಪಾಲ್ಗೊಂಡು ದೇವಸ್ಥಾನದ ಆವರಣದಲ್ಲಿ ಖುರಾನ್ ಪಠಿಸಿದ ಬಳಿಕ ಸಿಡಿಗಾಯಿ ಒಡೆಯಲಾಗುತ್ತದೆ. ಅಸಂಖ್ಯಾತ ಭಕ್ತರು ಪಾಲ್ಗೊಂಡು ದರ್ಶನ ಪಡೆಯುತ್ತಾರೆ.</p>.<p>ಈ ಜಾತ್ರೆಯ ಬಳಿಕ ಮಂಗಳವಾರದಿಂದ ಶುಕ್ರವಾರದವರೆಗೆ ಜಾನುವಾರುಗಳ ಜಾತ್ರೆಯೂ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.</p>.<div><blockquote>ವರ್ಷದಲ್ಲಿ ಎರಡು ಬಾರಿ ನಡೆಯುವ ಕೊಡೇಕಲ್ಲ ಬಸವೇಶ್ವರ ಜಾತ್ರೆ ಅಸಂಖ್ಯಾತ ಭಕ್ತರ ಶ್ರದ್ಧಾಕೇಂದ್ರವಾಗಿದೆ. ತನ್ನದೇ ವಿಶೇಷತೆಗಳನ್ನು ಹೊಂದಿದೆ.</blockquote><span class="attribution">ವೃಷಬೇಂದ್ರ ಅಪ್ಪನವರು ಮಹಲಿನಮಠ ಕೊಡೇಕಲ್ಲ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ಉತ್ತರ ಕರ್ನಾಟಕ ಭಾಗದಲ್ಲಿ ಕಾಲಜ್ಞಾನದ ಸಾಹಿತ್ಯದ ಮೂಲಕ ಸಮಾಜವನ್ನು ಎಚ್ಚರಿಸಿ ಸರಿದಾರಿಯಲ್ಲಿ ನಡೆಯುವಂತೆ ಮಾಡಿದವರು ಕೊಡೇಕಲ್ಲ ಬಸವೇಶ್ವರರು.</p>.<p>ಹಲವಾರು ವಿಶಿಷ್ಟ ಸಂಪ್ರದಾಯ ಪದ್ಧತಿಗಳ ಮೂಲಕ ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವವರು ಕೊಡೇಕಲ್ಲ ಬಸವೇಶ್ವರರು. ಅಂತಹ ಸಮಾನತೆಗೆ ಭದ್ರ ಬುನಾದಿ ಹಾಕಿದ ಕೊಡೇಕಲ್ಲ ಬಸವೇಶ್ವರ ಜಾತ್ರೆಯು ಇಂದು ಭಾನುವಾರ ಶ್ರದ್ಧಾ ಭಕ್ತಿಯಿಂದ ಆರಂಭವಾಯಿತು.</p>.<p>ಬೆಳಿಗ್ಗೆ ನಗಾರಿ ಪೂಜೆ ರಾತ್ರಿ ಜೋಡು ಪಲ್ಲಕ್ಕಿಗಳಿಗೆ ಚಿನ್ನದ ಕಳಸಾರೋಹಣ ಹಾಗೂ ಅಷ್ಟವಿಧಾರ್ಚನೆ ಪೂಜಾ ಕಾರ್ಯಕ್ರಮ ಮಹಲಿನ ಮಠದ ವೃಷಬೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ನಡೆಯಿತು.</p>.<p>ಗ್ರಾಮದ ಬಾರಾ ಬಲೂತಿ ವತದಾರರ ಸಮ್ಮುಖದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಹಿಂದು ಮುಸ್ಲಿಂ ಸೇರಿದಂತೆ ಅಪಾರ ಭಕ್ತರ ಸಮ್ಮುಖದಲ್ಲಿ ಜೋಡು ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಜಿಲ್ಲೆ ಸೇರಿದಂತೆ ಸುತ್ತಮುಲಿನ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ ರಾಯಚೂರು ಸೇರಿದಂತೆ ಸಹಸ್ರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ಬಸವೇಶ್ವರದ ದರ್ಶನ ಪಡೆದು ಭಕ್ತಿ ಸಮರ್ಪಿಸುತ್ತಾರೆ.</p>.<p>ವರ್ಷದಲ್ಲಿ ಎರಡು ಬಾರಿ ಯುಗಾದಿಯಾದ 16 ನೇ ದಿನ ಹಾಗೂ ದೀಪಾವಳಿಯಾದ 16 ದಿನಕ್ಕೆ ನಡೆಯುವ ಈ ಜಾತ್ರೆಯು ಹಲವಾರು ವಿಶೇಷತೆಗಳಿಂದ ಕೂಡಿದ್ದು, ಮುಸ್ಲಿಂ ಸಮುದಾಯದ ನಿರ್ದಿಷ್ಟ ಮನೆತನದವರು ಪಲ್ಲಕ್ಕಿ ಉತಸವದಲ್ಲಿ ಪಾಲ್ಗೊಂಡು ದೇವಸ್ಥಾನದ ಆವರಣದಲ್ಲಿ ಖುರಾನ್ ಪಠಿಸಿದ ಬಳಿಕ ಸಿಡಿಗಾಯಿ ಒಡೆಯಲಾಗುತ್ತದೆ. ಅಸಂಖ್ಯಾತ ಭಕ್ತರು ಪಾಲ್ಗೊಂಡು ದರ್ಶನ ಪಡೆಯುತ್ತಾರೆ.</p>.<p>ಈ ಜಾತ್ರೆಯ ಬಳಿಕ ಮಂಗಳವಾರದಿಂದ ಶುಕ್ರವಾರದವರೆಗೆ ಜಾನುವಾರುಗಳ ಜಾತ್ರೆಯೂ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.</p>.<div><blockquote>ವರ್ಷದಲ್ಲಿ ಎರಡು ಬಾರಿ ನಡೆಯುವ ಕೊಡೇಕಲ್ಲ ಬಸವೇಶ್ವರ ಜಾತ್ರೆ ಅಸಂಖ್ಯಾತ ಭಕ್ತರ ಶ್ರದ್ಧಾಕೇಂದ್ರವಾಗಿದೆ. ತನ್ನದೇ ವಿಶೇಷತೆಗಳನ್ನು ಹೊಂದಿದೆ.</blockquote><span class="attribution">ವೃಷಬೇಂದ್ರ ಅಪ್ಪನವರು ಮಹಲಿನಮಠ ಕೊಡೇಕಲ್ಲ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>