ಯಾದಗಿರಿ: ಕಳೆದ ವಾರಕ್ಕಿಂತ ಈ ವಾರಟೊಮೆಟೊ ದರ ಕೇಜಿಗೆ ₹10 ಹೆಚ್ಚಳವಾಗಿದ್ದು, ಈರುಳ್ಳಿ ಬೆಲೆ ₹10 ಇಳಿಕೆಯಾಗಿದೆ.ಟೊಮೆಟೊ ಆವಕ ಮಾರುಕಟ್ಟೆಗೆ ಬಾರದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಗೆಟೊಮೆಟೊ ಕಾಯಿಗಳು ಹಾಳಾಗಿದ್ದವು. ಈಗ ಅದರ ಪರಿಣಾಮ ಕಾಣುತ್ತಿದೆ.
ದೊಣ್ಣೆಮೆಣಸಿನಕಾಯಿ ಕಳೆದ ವಾರ₹80 ಬೆಲೆ ಇದ್ದರೆ ಈ ವಾರ ₹60 ಕೇಜಿಗೆ ಮಾರಾಟವಾಗುತ್ತಿದೆ.
ಚವಳೆಕಾಯಿ ಕಳೆದ ವಾರ ₹80 ಇತ್ತು. ಈ ವಾರ ₹60 ಇದೆ. ಕಳೆದ ವಾರ ಬೀನ್ಸ್ ಕೆಜಿಗೆ ₹120 ಇತ್ತು. ಈ ವಾರ ₹80ಕ್ಕೆ ಮಾರಾಟವಾಗುತ್ತಿದೆ. ಇನ್ನುಳಿದಂತೆಹೀರೆಕಾಯಿ, ತೊಂಡೆಕಾಯಿ,ಎಲೆಕೋಸು, ಗಜ್ಜರಿ, ಬದನೆಕಾಯಿ, ಸೋರೆಕಾಯಿ, ಮೂಲಂಗಿ, ಮೆಣಸಿನಕಾಯಿ, ಸೌತೆಕಾಯಿ ದರ ಕಳೆದ ವಾರದಿಂದಸ್ಥಿರವಾಗಿದೆ.
ಸೊಪ್ಪುಗಳ ದರ: ಕಳೆದ ವಾರದಂತೆ ಈ ವಾರವೂ ಸೊಪ್ಪುಗಳ ಬೆಲೆಯಲ್ಲಿ ಹೆಚ್ಚಿನ ದರ ಏರಿಕೆಯಾಗಿಲ್ಲ.ಪಾಲಕ್ ₹20ಕ್ಕೆ ಮೂರು ಕಟ್ಟು,ಸಬ್ಬಸಿಗೆ₹10 ಒಂದು ಕಟ್ಟು,ಮೆಂತೆ ₹20ಕ್ಕೆ ಒಂದು ಕಟ್ಟು,ರಾಜಗಿರಿ ₹20ಕ್ಕೆ ಮೂರು 3 ಕಟ್ಟು,ಪುಂಡಿ ಪಲ್ಯೆ ₹20ಕ್ಕೆ4 ಕಟ್ಟು,ಕೋತಂಬರಿ ₹30ಕ್ಕೆ ಒಂದು ಕಟ್ಟು,ಪುದೀನಾ ₹25ಕ್ಕೆ ಒಂದು ಕಟ್ಟು ದರವಿದೆ. ಎರಡು ವಾರಗಳಿಂದ ಮೊಹರಂ ಹಬ್ಬದ ಅಂಗವಾಗಿ ಕೋತಂಬರಿ, ಪುದೀನಾ ಬೆಲೆ ಗಣನೀಯವಾಗಿ ಹೆಚ್ಚಳವಾಗಿತ್ತು.
ಸೌತೆಕಾಯಿ ಸಿಗುತ್ತಿಲ್ಲ: ‘ಮುಖ್ಯ ಮಾರುಕಟ್ಟೆಯಲ್ಲಿಯೇ ಕಳೆದ ಮೂರು ದಿನದಿಂದಸೌತೆಕಾಯಿ ಸಿಗುತ್ತಿಲ್ಲ.ಈರುಳ್ಳಿ ಸೊಪ್ಪು ₹120 ಕೇಜಿಇದೆ.ಬೆಳ್ಳುಳ್ಳಿ ₹120,ಶುಂಠಿ ₹120 ಕೇಜಿ ಇದೆ. ₹160ಗೆ ಕೇಜಿನುಗ್ಗೆಕಾಯಿ ಇದೆ. ಮಳೆ ಹೆಚ್ಚಾದ ಕಾರಣ ಇವುಗಳ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ವ್ಯಾಪಾರಿ ಸಿದ್ದು ಪೂಜಾರಿ.
‘ವಾರದಿಂದ ತರಕಾರಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಆದರೆ, ಮೆಣಸಿನಕಾಯಿ, ಆಲೂಗಡ್ಡೆ, ಪಾಲಕ್ ಮುಂತಾದ ತರಕಾರಿಗಳ ಬೆಲೆ ಸ್ಥಿರವಾಗಿದೆ’ ಎನ್ನುತ್ತಾರೆಗ್ರಾಹಕಶ್ರವಣಕುಮಾರ ಅವರು.