‘ಮುತ್ತಾತನ ಕಾಲದಿಂದ ಅವರ ಕುಟುಂಬ ಗಿಡ ಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ. ಈತನಿಗೂ ಗಿಡ ಮೂಲಿಕೆಗಳ ಜ್ಞಾನವಿದ್ದು, ಗಿಡ ಮೂಲಿಕೆಯ ಔಷಧವನ್ನು ಕುಂಕುಮ, ಭಂಡಾರ ಹಾಗೂ ಬೂದಿಯಲ್ಲಿ ಬೆರೆಸಿ ತಾನು ಮಂತ್ರಗಳಿಂದ ರೋಗಗಳನ್ನು ಗುಣಮಾಡುವುದಾಗಿ ಜನರನ್ನು ನಂಬಿಸುತ್ತಾನೆ. ಪೂಜೆಗಳ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಯಾಮಾರಿಸುತ್ತಿರುವುದು ತಿಳಿದ ಕೂಡಲೇ ಆತನ ವಿರುದ್ಧ ವರಂಗಲ್ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ’ ಎಂದು ಕವಿತಾ ವಿವರಿಸಿದರು.