ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬರೇ ಶಾಸಕರಿದ್ದರೂ ಕೆಲವೇ ಮತಗಳ ಅಂತರದಿಂದ ಸೋತಿದ್ದೇವೆ. ಬಿಜೆಪಿಯವರು ಹಣಬಲದಿಂದ ಗೆದ್ದಿದ್ದಾರೆ. ಕಳೆದ ಆರು ವರ್ಷದಲ್ಲಿ ಬಿ.ಜಿ.ಪಾಟೀಲ, ಮತ ಹಾಕಿದವ ರನ್ನು ಭೇಟಿಯಾಗದೆ ಇದ್ದರು. ನಮ್ಮ ಅಭ್ಯರ್ಥಿ ಶಿವಾ ನಂದ ಪಾಟೀಲ ಮ ರತೂರ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಗೆದ್ದು ಸದಸ್ಯರ ಬಗ್ಗೆ ಅನುಭವ ಹೊಂದಿದ್ದರು. ಆದರೆ, ಮತದಾರರು ನಮ್ಮ ಅಭ್ಯರ್ಥಿಗೆ ಕೈ ಹಿಡಿದಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಕಡೆ ಜಯ ಸಿಕ್ಕಿದೆ. ಇದು ಮತ್ತಷ್ಟು ಹುರುಪು ತಂದಿದೆ. ಮುಂದಿನ ದಿನಗಳಲ್ಲಿ ಉತ್ಸಾಹದಿಂದ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.