ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಆದರೆ ಬಿತ್ತನೆ ಬೀಜ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಇನ್ನೆರಡು ದಿನದಲ್ಲಿ ಇಫ್ಕೋ ಆರ್ಸಿಎಫ್ ಕಂಪನಿಯಿಂದ ರಸಗೊಬ್ಬರ ಪೂರೈಕೆಯಾಗಲಿದೆ
ಕೆ.ಎಚ್.ರವಿ ಕೃಷಿ ಜಂಟಿ ನಿರ್ದೇಶಕ
ಮುಂಗಾರು ಹಂಗಾಮಿನ ಹೆಸರು ಬೆಳೆಗೆ ವಿವಿಧ ರೋಗಗಳು ಬರುತ್ತಿವೆ. ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಬೇಕು
ಉಮೇಶ ಕೆ ಮುದ್ನಾಳ ಸಾಮಾಜಿಕ ಹೋರಾಟಗಾರ
ಕಾಲುವೆ ಜಾಲದಲ್ಲಿ ಪ್ರಗತಿ
ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆ ಕಾಯಿ ಬಲಿಯುವ ಹಂತ ಹಾಗೂ ಕೆಲವೆಡೆ ಹೂವಾಡುವ ಹಂತಕ್ಕೆ ಬಂದಿದೆ. ಹತ್ತಿ ಬೆಳೆಯಲ್ಲಿ ಎಡೆ ಹೊಡೆಯುತ್ತಿರುವುದು ಕಂಡು ಬರುತ್ತಿದೆ. ಯಾದಗಿರಿ ಗುರುಮಠಕಲ್ ತಾಲ್ಲೂಕಿನಲ್ಲಿ ಭತ್ತ ನಾಟಿ ಮುಗಿದಿದ್ದು ಶಹಾಪುರ ಸುರಪುರ ವಡಗೇರಾ ಹುಣಸಗಿ ತಾಲ್ಲೂಕಿನಲ್ಲಿ ಭತ್ತ ನಾಟಿ ಪ್ರಗತಿಯಲ್ಲಿದೆ. ಕಾಲುವೆ ಜಾಲದಲ್ಲಿ ನೀರು ಹರಿಸುತ್ತಿದ್ದರಿಂದ ಭತ್ತಕ್ಕೆ ಭರದ ಸಿದ್ಧತೆ ನಡೆದಿದೆ.