<p><strong>ಹುಣಸಗಿ</strong>: ‘ಮಹಾತ್ಮ ಗಾಂಧೀಜಿ ದೇವಸ್ಥಾನ ಬಲಶೆಟ್ಟಿಹಾಳಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ನಿವೃತ್ತ ಶಿಕ್ಷಕ ಅಯ್ಯಣ್ಣಸ್ವಾಮಿ ಹಿರೇಮಠ ಹೇಳಿದರು.</p>.<p>ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ ಅಂಗವಾಗಿ ನೂತನ ಮೂರ್ತಿ ಮೆರವಣಿಗೆ ಬಳಿಕ ಅವರು ಮಾತನಾಡಿ,‘ಗ್ರಾಮದ ಅಪ್ಪಟ ಗಾಂಧಿವಾದಿ ಹಂಪಣ್ಣ ಸಾಹುಕಾರ ಅವರು ತಂಡದೊಂದಿಗೆ ದೇವಸ್ಥಾನ ನಿರ್ಮಿಸಿದ್ದರಿಂದ ಗ್ರಾಮದ ಹೆಸರು ಎಲ್ಲೆಡೆ ಬರುವಂತಾಗಿದೆ’ ಎಂದರು.</p>.<p>ಶಿಕ್ಷಕ ವೀರಣ್ಣ ಬೆಳ್ಳುಬ್ಬಿ ಮಾತನಾಡಿ,‘ಗ್ರಾಮದ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಇಂದಿಗೂ ಕೂಡಾ ಗಾಂಧಿಜಯಂತಿ ದಿನ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸುವುದು ಹೆಚ್ಚು ಮಹತ್ವದ್ದಾಗಿದೆ’ ಎಂದರು.</p>.<p>ಹಂಪಣ್ಣ ಸಾಹುಕಾರ ಪುತ್ರ ಬಸವರಾಜ ಚಿಂಚೋಳಿ, ಗ್ರಾಮದ ತಿಪ್ಪಣ್ಣಗೌಡ ಬಿರಾದಾರ, ಎಂ.ಆರ್.ಖಾಜಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕಾಳಜಿವಹಿಸಿ ಮಹಾತ್ಮ ಗಾಂಧೀಜಿ ಅವರ ದೇವಸ್ಥಾನ ನವೀಕರಿಸಬೇಕು’ ಎಂದು ಒತ್ತಾಯಿಸಿದರು.</p>.<p>ಗ್ರಾಮದ ಬಸಲಿಂಗ ಮಠದ ಸಿದ್ದಲಿಂಗಯ್ಯಶಾಸ್ತ್ರಿ, ಶಾಂತಗೌಡ ಚನ್ನಪಟ್ಟಣ, ಹಿರಿಯರಾದ ತಿಪ್ಪಣ್ಣಗೌಡ ಬಿರಾದಾರ, ಟಿಪ್ಪುಸುಲ್ತಾನ ಅವರಾದಿ, ಸಾಯಬಣ್ಣ ಕ್ಯಾತನಾಳ, ರಾಯಪ್ಪ ಜೋಗಿನ್, ರಾಚಯ್ಯ ಹತ್ತಿ, ಸಂಗಯ್ಯ ಬಾಚ್ಯಾಳ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ‘ಮಹಾತ್ಮ ಗಾಂಧೀಜಿ ದೇವಸ್ಥಾನ ಬಲಶೆಟ್ಟಿಹಾಳಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ನಿವೃತ್ತ ಶಿಕ್ಷಕ ಅಯ್ಯಣ್ಣಸ್ವಾಮಿ ಹಿರೇಮಠ ಹೇಳಿದರು.</p>.<p>ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ ಅಂಗವಾಗಿ ನೂತನ ಮೂರ್ತಿ ಮೆರವಣಿಗೆ ಬಳಿಕ ಅವರು ಮಾತನಾಡಿ,‘ಗ್ರಾಮದ ಅಪ್ಪಟ ಗಾಂಧಿವಾದಿ ಹಂಪಣ್ಣ ಸಾಹುಕಾರ ಅವರು ತಂಡದೊಂದಿಗೆ ದೇವಸ್ಥಾನ ನಿರ್ಮಿಸಿದ್ದರಿಂದ ಗ್ರಾಮದ ಹೆಸರು ಎಲ್ಲೆಡೆ ಬರುವಂತಾಗಿದೆ’ ಎಂದರು.</p>.<p>ಶಿಕ್ಷಕ ವೀರಣ್ಣ ಬೆಳ್ಳುಬ್ಬಿ ಮಾತನಾಡಿ,‘ಗ್ರಾಮದ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಇಂದಿಗೂ ಕೂಡಾ ಗಾಂಧಿಜಯಂತಿ ದಿನ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸುವುದು ಹೆಚ್ಚು ಮಹತ್ವದ್ದಾಗಿದೆ’ ಎಂದರು.</p>.<p>ಹಂಪಣ್ಣ ಸಾಹುಕಾರ ಪುತ್ರ ಬಸವರಾಜ ಚಿಂಚೋಳಿ, ಗ್ರಾಮದ ತಿಪ್ಪಣ್ಣಗೌಡ ಬಿರಾದಾರ, ಎಂ.ಆರ್.ಖಾಜಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕಾಳಜಿವಹಿಸಿ ಮಹಾತ್ಮ ಗಾಂಧೀಜಿ ಅವರ ದೇವಸ್ಥಾನ ನವೀಕರಿಸಬೇಕು’ ಎಂದು ಒತ್ತಾಯಿಸಿದರು.</p>.<p>ಗ್ರಾಮದ ಬಸಲಿಂಗ ಮಠದ ಸಿದ್ದಲಿಂಗಯ್ಯಶಾಸ್ತ್ರಿ, ಶಾಂತಗೌಡ ಚನ್ನಪಟ್ಟಣ, ಹಿರಿಯರಾದ ತಿಪ್ಪಣ್ಣಗೌಡ ಬಿರಾದಾರ, ಟಿಪ್ಪುಸುಲ್ತಾನ ಅವರಾದಿ, ಸಾಯಬಣ್ಣ ಕ್ಯಾತನಾಳ, ರಾಯಪ್ಪ ಜೋಗಿನ್, ರಾಚಯ್ಯ ಹತ್ತಿ, ಸಂಗಯ್ಯ ಬಾಚ್ಯಾಳ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>