‘ರಸಗೊಬ್ಬರದ ಬಳಕೆ ಮಿತವಾಗಿರಲಿ’
ಹುಣಸಗಿ: ತಾಲ್ಲೂಕಿನಲ್ಲಿ ಭತ್ತ ನಾಟಿ ಕಾರ್ಯ ಆರಂಭವಾಗಿದ್ದು ರೈತರು ರಸಗೊಬ್ಬರವನ್ನು ಹಿತ ಮತ್ತು ಮಿತವಾಗಿ ಬಳಸಬೇಕು ಎಂದು ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ತಿಳಿಸಿದ್ದಾರೆ. ಅತಿಯಾದ ಗೊಬ್ಬರ ಹಾಗೂ ನೀರು ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮಣ್ಣಿನ ಗುಣಧರ್ಮಕ್ಕೆ ತಕ್ಕಂತೆ ಗೊಬ್ಬರ ಮಿತಬಳಕೆ ಮಾಡಬೇಕು. ನ್ಯಾನೊ ಯೂರಿಯಾ ಹಾಗೂ ಡಿಎಪಿ ಗೊಬ್ಬರ ಬಳಸುವುದರಿಂದ ಬೆಳಗಳಿಗೂ ಹೆಚ್ಚು ಶಕ್ತಿ ನೀಡುತ್ತವೆ. ಈ ನ್ಯಾನೊ ಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕು ಎಂದು ರೈತರಿಗೆ ಕಿವಿಮಾತು ಹೇಳಿದ್ದಾರೆ.