ತಾಪಮಾನ ಕಡಿಮೆಯಾಗಿ ಉಸ್ಸಪ್ಪಾ ಎನ್ನುತ್ತಿದ್ದಂತೆ ಧಗೆಯ ಬೇಗುದಿ ಹಿಂದೆಯೇ ಬೇತಾಳದಂತೆ ಬಂದಿದೆ. ಕಳೆದ ಐದಾರು ವರ್ಷಗಳಲ್ಲಿ ಈ ಮಟ್ಟಿನ ಧಗೆ ಅನುಭವಿಸಿರಲಿಲ್ಲ
ಕೃಷ್ಣಭಟ್ಟ ಜೋಷಿ ಹಿರಿಯ ನಾಗರಿಕ
ಬರಗಾಲದಿಂದ ಸಂಕಷ್ಟದಲ್ಲಿದ್ದ ರೈತನಿಗೆ ಕೆಲ ದಿನಗಳ ಹಿಂದೆ ಸುರಿದ ಮಳೆ ಆಶಾಭಾವನೆ ಮೂಡಿಸಿತ್ತು. ಆದರೆ ಬಂದಷ್ಟೇ ವೇಗದಲ್ಲಿ ವರುಣ ತೆರೆಮರೆಗೆ ಸರಿದಿದ್ದು ಅನ್ನದಾತನಿಗೆ ಬರೆ ಎಳೆದಂತಾಗಿದೆ
ಶಿವಪ್ಪ ಸಕ್ರಿ ರೈತ
ಈ ವರ್ಷ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂಗಾರು ಬೇಗನೆ ಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದೆ