ಮುಂಗಾರು ಹಂಗಾಮಿನಲ್ಲಿ ರೋಹಿಣಿ, ಮೃಗಶಿರ ಹೆಚ್ಚು ಸುರಿದರೆ ರೈತರು, ಹೆಸರು, ಉದ್ದು ಬಿತ್ತನೆ ಮಾಡುತ್ತಿದ್ದರು. ಅಲ್ಪಾವಧಿ ಬೆಳೆಯಾದ ಹೆಸರು ಸಣ್ಣ ಪುಟ್ಟ ಖರ್ಚಿಗೆ ಹಣ ಹೊಂದಿಕೆಯಾಗುತ್ತಿತ್ತು. ಆದರೆ, ಮಳೆ ಬಾರದ ಕಾರಣ ದೀರ್ಘಾವಧಿ ಬೆಳೆಗಳಾದ ತೊಗರಿ, ಹತ್ತಿ ಬಿತ್ತನೆಗೆ ರೈತರು ಮುಂದಾಗಬೇಕಿದೆ.
ಮುಂಗಾರಿಗೆ ಅಲ್ಪಾವಧಿ ಹೆಸರು ಉದ್ದು ಬಿತ್ತನೆಗೆ ಮೃಗಶಿರ ಮಳೆ ಉತ್ತಮ. ನಿರೀಕ್ಷಿತ ಮಳೆಯಾಗದ ಕಾರಣ ಬಿತ್ತನೆ ಸಮಯವೂ ಮುಗಿದೆ. ತೊಗರಿ ಹತ್ತಿ ಬಿತ್ತನೆಗೆ ತಿಂಗಳ ಸಮಯವಿದ್ದು ಉತ್ತಮ ಮಳೆ ನಿರೀಕ್ಷಿಸಬಹುದು
ಆಬಿದ್ ಎಸ್.ಎಸ್., ಜಂಟಿ ಕೃಷಿ ನಿರ್ದೇಶಕ
ಈ ಬಾರಿಯ ಮುಂಗಾರು ವಿಳಂಬದಿಂದ ಜಮೀನಿನಲ್ಲಿ ತೇವಾಂಶವೇ ಇಲ್ಲ. ಹೆಸರು ಉದ್ದು ಬಿಟ್ಟು ಹತ್ತಿ ತೊಗರಿ ಬೆಳೆಯುವ ಪರಿಸ್ಥಿತಿ ಬಂದಿದೆ. ರೈತರ ಮೇಲೆ ವರುಣ ಮುನಿಸಿಕೊಂಡಿದ್ದಾನೆ.
ಚನ್ನಬಸಪ್ಪಗೌಡ ಪಾಟೀಲ, ರೈತ
ಜೂನ್ 4 ರಂದು ಮುಂಗಾರು ಪ್ರವೇಶವಾಗುವ ನಿರೀಕ್ಷೆ ಇತ್ತು. ಆದರೆ ಈ ಸಲ ಮುಂಗಾರು ವಿಳಂಬವಾಗುತ್ತಿದೆ. ಮಳೆ ಬರಬಹುದೆನ್ನುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.
ಗುರುನಾಥ, ಕೃಷಿ ಸಹಾಯಕ ನಿರ್ದೇಶಕ, ಸುರಪುರ
ಮಳೆ ಕೈಗೊಡುತ್ತಿದೆ. ರೈತ ಕಂಗಾಲಾಗಿದ್ದಾನೆ. ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟವೂ ಕಡಿಮೆ ಇದೆ. ಸರ್ಕಾರ ಈ ಬಗ್ಗೆ ತುರ್ತು ಸಭೆ ನಡೆಸಬೇಕು. ರೈತರ ನೆರವಿಗೆ ಬರಬೇಕು.
ಅಯ್ಯಣ್ಣ ಜಂಬಲದಿನ್ನಿ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ
ಯಾದಗಿರಿ ತಾಲ್ಲೂಕಿನ ಬೆಳಗೇರಾ ಗ್ರಾಮದ ಹೊರ ವಲಯದಲ್ಲಿ ಮುಂಗಾರು ಹಂಗಾಮಿನ ಬೆಳೆಗಾಗಿ ಜಮೀನು ಹದ ಮಾಡಿದ ರೈತ
ಯಾದಗಿರಿ ತಾಲ್ಲೂಕಿನ ಬೆಳಗೇರಾ ಗ್ರಾಮದ ಜಮೀನಿನಲ್ಲಿ ಮಳೆಗಾಗಿ ಆಗಸದತ್ತ ಮುಖ ಮಾಡಿದ ರೈತ