ಎಕರೆಗೆ ₹1ಲಕ್ಷ ವೆಚ್ಚ ಮಾಡಿದ್ದೇವೆ. ತುಸು ಮುಂಚಿತವಾಗಿ ಬಿತ್ತನೆ ಮಾಡಿದ ಬೆಳೆಯ ಇಳುವರಿ ಎಕರೆಗೆ 20 ರಿಂದ 25 ಕ್ವಿಂಟಲ್ ಬಂದಿದೆ. ಆದರೆ ಬೆಲೆ ಕುಸಿತದಿಂದ ಹೈರಾಣಗೊಂಡಿದ್ದೇವೆ. ಸ್ಥಳೀವಾಗಿ ಮೆಣಸಿನಕಾಯಿ ಬೆಳೆ ಮಾರಾಟ ಮಾಡಲು ಮಾರುಕಟ್ಟೆಯ ಕೊರತೆ ಇದೆ. ಅನಿವಾರ್ಯವಾಗಿ ಬ್ಯಾಡಗಿ ಇಲ್ಲವೆ ಸೋಲಾಪುರಕ್ಕೆ ತೆರಳಬೇಕು. ವಾಹನದ ಬಾಡಿಗೆ ಹಾಗೂ ದಿನೇ ದಿನೆ ಕುಸಿಯುತ್ತಿರುವ ಧಾರಣೆಯಿಂದ ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎನ್ನುತ್ತಾರೆ ರೈತ ಭೀಮಣ್ಣ ನಡಕರ್.