<p><strong>ಶಹಾಪುರ</strong>: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ನೆರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳದಿಂದ ಮಹಿಳಾ ಕೂಲಿ ಕಾರ್ಮಿಕರು ಕೂಲಿ ಅರಿಸಿ ಭತ್ತ ನಾಟಿಗೆ ಪಟ್ಟಣದತ್ತ ಹೆಜ್ಜೆ ಹಾಕುತ್ತಿದ್ದಾರೆ.</p>.<p>ತಾಲ್ಲೂಕಿನ ಮಳೆ ಆಶ್ರಿತ ಪ್ರದೇಶದ ಬಡ ಜನರು ಕೂಲಿಗಾಗಿ ನೆರೆ ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ಗುಳೆ ಹೋಗುತ್ತಿದ್ದರೆ, ನೆರೆ ರಾಜ್ಯದ ಜನರು ಕೃಷ್ಣಾಅಚ್ಚುಕಟ್ಟು ಪ್ರದೇಶಕ್ಕೆ ಬರುತ್ತಿರುವುದು ವಿಶೇಷ. </p>.<p>ನೀರಾವರಿ ಪ್ರದೇಶದಲ್ಲಿನ ಜಮೀನುಗಳ ಗ್ರಾಮದ ಹೆದ್ದಾರಿಗೆ ಹೊಂದಿಕೊಂಡು ಜಾಗದಲ್ಲಿ ತಾತ್ಕಾಲಿಕ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ನಿರ್ಮಿಸಿಕೊಂಡು ಬೆಳಿಗ್ಗೆ 6 ಗಂಟೆಗೆ ಗದ್ದೆಗೆ ಇಳಿದು ಭತ್ತ ನಾಟಿಗೆ ಅಣಿಯಾಗಿ ಸಂಜೆ 7 ಗಂಟೆಯವರೆಗೆ ಕತ್ತಲದ ನಡುವೆ ಭತ್ತ ನಾಟಿ ಮಾಡುತ್ತಾರೆ.</p>.<p>ಕೆಲಸ ನಿರ್ವಹಿಸುವ ಕೂಲಿಕಾರ್ಮಿಕರಿಗೆ ಅವರಲ್ಲಿಯೇ ಒಬ್ಬ ವ್ಯಕ್ತಿ ಊಟ ಸಿದ್ಧಪಡಿಸಿ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ಪುರುಷ ಕಾರ್ಮಿಕರು ಟ್ರ್ಯಾಕ್ಟರ್ ಮೂಲಕ ಭತ್ತದ ಸಸಿಗಳನ್ನು ಗದ್ದೆಯಲ್ಲಿ ತಂದು ಹಾಕುವ ಕೆಲಸ ಮಾಡುತ್ತಾರೆ ಎಂದು ಮಹಾರಾಷ್ಟ್ರದ ಕೂಲಿ ಕಾರ್ಮಿಕ ರಾಜು ಹೇಳುತ್ತಾರೆ.</p>.<p>‘150ಕ್ಕೂ ಹೆಚ್ಚು ಮಹಿಳೆಯರು ಬಂದಿದ್ದೇವೆ. ಒಂದು ತಿಂಗಳು ಭತ್ತ ನಾಟಿ ಮಾಡಿ ಮತ್ತೆ ನಮ್ಮ ಊರಿಗೆ ಮರಳುತ್ತೇವೆ. ಮಳೆ, ಚಳಿ ಎನ್ನದೆ ಭತ್ತ ನಾಟಿ ಮಾಡಿದರೆ ₹25 ಸಾವಿರಕ್ಕೂ ಹೆಚ್ಚು ಸಿಗುತ್ತದೆ’ ಎಂದು ಮಹಾರಾಷ್ಟ್ರದಿಂದ ಬಂದ ಕಾರ್ಮಿಕ ಮಹಿಳೆ ರಮಾದೇವಿ ಹೇಳುತ್ತಾರೆ.</p>.<p>‘ನಮ್ಮ ಪ್ರದೇಶದ ಕೂಲಿ ಕಾರ್ಮಿಕರು ನೆರೆ ರಾಜ್ಯದ ಕೂಲಿ ಕಾರ್ಮಿಕರಂತೆ ಶ್ರಮವಹಿಸಿ ಕೆಲಸ ಮಾಡುವುದಿಲ್ಲ. ಅದಕ್ಕಾಗಿ ಗುತ್ತಿಗೆ ರೂಪದಲ್ಲಿ ಗದ್ದೆಯನ್ನು ಭತ್ತ ನಾಟಿಗೆ ನೀಡಿ ಬಿಡುತ್ತೇವೆ’ ಎನ್ನುತ್ತಾರೆ ಕೊಂಗಂಡಿ ಗ್ರಾಮದ ಹಣಮಂತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ</strong>: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ನೆರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳದಿಂದ ಮಹಿಳಾ ಕೂಲಿ ಕಾರ್ಮಿಕರು ಕೂಲಿ ಅರಿಸಿ ಭತ್ತ ನಾಟಿಗೆ ಪಟ್ಟಣದತ್ತ ಹೆಜ್ಜೆ ಹಾಕುತ್ತಿದ್ದಾರೆ.</p>.<p>ತಾಲ್ಲೂಕಿನ ಮಳೆ ಆಶ್ರಿತ ಪ್ರದೇಶದ ಬಡ ಜನರು ಕೂಲಿಗಾಗಿ ನೆರೆ ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ಗುಳೆ ಹೋಗುತ್ತಿದ್ದರೆ, ನೆರೆ ರಾಜ್ಯದ ಜನರು ಕೃಷ್ಣಾಅಚ್ಚುಕಟ್ಟು ಪ್ರದೇಶಕ್ಕೆ ಬರುತ್ತಿರುವುದು ವಿಶೇಷ. </p>.<p>ನೀರಾವರಿ ಪ್ರದೇಶದಲ್ಲಿನ ಜಮೀನುಗಳ ಗ್ರಾಮದ ಹೆದ್ದಾರಿಗೆ ಹೊಂದಿಕೊಂಡು ಜಾಗದಲ್ಲಿ ತಾತ್ಕಾಲಿಕ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ನಿರ್ಮಿಸಿಕೊಂಡು ಬೆಳಿಗ್ಗೆ 6 ಗಂಟೆಗೆ ಗದ್ದೆಗೆ ಇಳಿದು ಭತ್ತ ನಾಟಿಗೆ ಅಣಿಯಾಗಿ ಸಂಜೆ 7 ಗಂಟೆಯವರೆಗೆ ಕತ್ತಲದ ನಡುವೆ ಭತ್ತ ನಾಟಿ ಮಾಡುತ್ತಾರೆ.</p>.<p>ಕೆಲಸ ನಿರ್ವಹಿಸುವ ಕೂಲಿಕಾರ್ಮಿಕರಿಗೆ ಅವರಲ್ಲಿಯೇ ಒಬ್ಬ ವ್ಯಕ್ತಿ ಊಟ ಸಿದ್ಧಪಡಿಸಿ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ಪುರುಷ ಕಾರ್ಮಿಕರು ಟ್ರ್ಯಾಕ್ಟರ್ ಮೂಲಕ ಭತ್ತದ ಸಸಿಗಳನ್ನು ಗದ್ದೆಯಲ್ಲಿ ತಂದು ಹಾಕುವ ಕೆಲಸ ಮಾಡುತ್ತಾರೆ ಎಂದು ಮಹಾರಾಷ್ಟ್ರದ ಕೂಲಿ ಕಾರ್ಮಿಕ ರಾಜು ಹೇಳುತ್ತಾರೆ.</p>.<p>‘150ಕ್ಕೂ ಹೆಚ್ಚು ಮಹಿಳೆಯರು ಬಂದಿದ್ದೇವೆ. ಒಂದು ತಿಂಗಳು ಭತ್ತ ನಾಟಿ ಮಾಡಿ ಮತ್ತೆ ನಮ್ಮ ಊರಿಗೆ ಮರಳುತ್ತೇವೆ. ಮಳೆ, ಚಳಿ ಎನ್ನದೆ ಭತ್ತ ನಾಟಿ ಮಾಡಿದರೆ ₹25 ಸಾವಿರಕ್ಕೂ ಹೆಚ್ಚು ಸಿಗುತ್ತದೆ’ ಎಂದು ಮಹಾರಾಷ್ಟ್ರದಿಂದ ಬಂದ ಕಾರ್ಮಿಕ ಮಹಿಳೆ ರಮಾದೇವಿ ಹೇಳುತ್ತಾರೆ.</p>.<p>‘ನಮ್ಮ ಪ್ರದೇಶದ ಕೂಲಿ ಕಾರ್ಮಿಕರು ನೆರೆ ರಾಜ್ಯದ ಕೂಲಿ ಕಾರ್ಮಿಕರಂತೆ ಶ್ರಮವಹಿಸಿ ಕೆಲಸ ಮಾಡುವುದಿಲ್ಲ. ಅದಕ್ಕಾಗಿ ಗುತ್ತಿಗೆ ರೂಪದಲ್ಲಿ ಗದ್ದೆಯನ್ನು ಭತ್ತ ನಾಟಿಗೆ ನೀಡಿ ಬಿಡುತ್ತೇವೆ’ ಎನ್ನುತ್ತಾರೆ ಕೊಂಗಂಡಿ ಗ್ರಾಮದ ಹಣಮಂತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>