<p><strong>ಶಹಾಪುರ</strong>: ‘ಮಕ್ಕಳ ಪ್ರತಿಭೆಯನ್ನು ಒರೆಗೆ ಹಚ್ಚುವ ಕಾರ್ಯಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿಯಾಗಿದೆ’ ಎಂದು ಬಿಇಒ ವೈ.ಎಸ್. ಹರಗಿ ತಿಳಿಸಿದರು.</p>.<p>ನಗರದ ಹಳಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಭಾಗದ ಕ್ಲಸ್ಟರ್ನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರತಿಭಾ ಕಾರಂಜಿಯು ಮಕ್ಕಳ ಹಬ್ಬವಾಗಿದೆ. ಶಿಕ್ಷಕರು, ಪೋಷಕರು, ಸಾರ್ವಜನಿಕರು ಕಣ್ತುಂಬಿಕೊಂಡು ಸಂತಸ ಪಡುವಂಥ ಕ್ಷಣವನ್ನು ಕಾಣಬಹುದು. ನಿಜವಾದ ಪ್ರತಿಭೆಗಳನ್ನು ಗುರುತಿಸಿ, ರಾಜಮಟ್ಟಕ್ಕೆ ಕಳುಹಿಸುವುದು ಸರ್ವರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.</p>.<p>ಕ್ಷೇತ್ರ ಸಮನ್ವಯ ಅಧಿಕಾರಿ ಅಮರೇಶ ಮಾತನಾಡಿ, ‘ವಿದ್ಯಾರ್ಥಿಗಳು ಪಾಠವನ್ನು ಚೆನ್ನಾಗಿ ಕಲಿಯುವುದಲ್ಲದೆ, ಮನನ ಮಾಡಬೇಕು. ಸಹಪಾಠಿಗಳ ಎದುರು ಪ್ರದರ್ಶನ ಮಾಡುವುದು, ಅನೇಕ ಗುಣಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ’ ಎಂದು ತಿಳಿಸಿದರು.</p>.<p>ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಲಾಳಸೇರಿ, ಮುಖ್ಯಶಿಕ್ಷಕಿ ಗೋವಿಂದಮ್ಮ, ಶಿಕ್ಷಣ ಸಂಯೋಜಕ ಸಿದ್ಧರಾಮಪ್ಪ, ನಿಂಗನಗೌಡ ಕಲಾಲ, ಜಮಿಗೊಟ್ಲಾ, ಆನಂದ ಸ್ವಾಮಿ ನಾಯಕ, ಮಲ್ಲನಗೌಡ, ಶಮ್ಸ್ ಶಾಲೆಯ ಲೋಕೇಶ, ಸಂಸ್ಕಾರ ಅಕಾಡೆಮಿಯ ಲಕ್ಷ್ಮಿ ಬಸಮ್ಮ ಪಾಟೀಲ, ಸಿಆರ್ಪಿ ವೀರಭದ್ರಯ್ಯ ಭಾಗವಹಿಸಿದ್ದರು.</p>.<p>ನಗರ ದಕ್ಷಿಣ ಭಾಗದ ಶಾಲೆ ಮುಖ್ಯಸ್ಥರು, ಸ್ಪರ್ಧೆಗಳ ನಿರ್ಣಾಯಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ವೇಶದಾರಿ ವಿದ್ಯಾರ್ಥಿಗಳು ಸರ್ವರ ಗಮನ ಸೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ</strong>: ‘ಮಕ್ಕಳ ಪ್ರತಿಭೆಯನ್ನು ಒರೆಗೆ ಹಚ್ಚುವ ಕಾರ್ಯಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿಯಾಗಿದೆ’ ಎಂದು ಬಿಇಒ ವೈ.ಎಸ್. ಹರಗಿ ತಿಳಿಸಿದರು.</p>.<p>ನಗರದ ಹಳಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಭಾಗದ ಕ್ಲಸ್ಟರ್ನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರತಿಭಾ ಕಾರಂಜಿಯು ಮಕ್ಕಳ ಹಬ್ಬವಾಗಿದೆ. ಶಿಕ್ಷಕರು, ಪೋಷಕರು, ಸಾರ್ವಜನಿಕರು ಕಣ್ತುಂಬಿಕೊಂಡು ಸಂತಸ ಪಡುವಂಥ ಕ್ಷಣವನ್ನು ಕಾಣಬಹುದು. ನಿಜವಾದ ಪ್ರತಿಭೆಗಳನ್ನು ಗುರುತಿಸಿ, ರಾಜಮಟ್ಟಕ್ಕೆ ಕಳುಹಿಸುವುದು ಸರ್ವರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.</p>.<p>ಕ್ಷೇತ್ರ ಸಮನ್ವಯ ಅಧಿಕಾರಿ ಅಮರೇಶ ಮಾತನಾಡಿ, ‘ವಿದ್ಯಾರ್ಥಿಗಳು ಪಾಠವನ್ನು ಚೆನ್ನಾಗಿ ಕಲಿಯುವುದಲ್ಲದೆ, ಮನನ ಮಾಡಬೇಕು. ಸಹಪಾಠಿಗಳ ಎದುರು ಪ್ರದರ್ಶನ ಮಾಡುವುದು, ಅನೇಕ ಗುಣಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ’ ಎಂದು ತಿಳಿಸಿದರು.</p>.<p>ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಲಾಳಸೇರಿ, ಮುಖ್ಯಶಿಕ್ಷಕಿ ಗೋವಿಂದಮ್ಮ, ಶಿಕ್ಷಣ ಸಂಯೋಜಕ ಸಿದ್ಧರಾಮಪ್ಪ, ನಿಂಗನಗೌಡ ಕಲಾಲ, ಜಮಿಗೊಟ್ಲಾ, ಆನಂದ ಸ್ವಾಮಿ ನಾಯಕ, ಮಲ್ಲನಗೌಡ, ಶಮ್ಸ್ ಶಾಲೆಯ ಲೋಕೇಶ, ಸಂಸ್ಕಾರ ಅಕಾಡೆಮಿಯ ಲಕ್ಷ್ಮಿ ಬಸಮ್ಮ ಪಾಟೀಲ, ಸಿಆರ್ಪಿ ವೀರಭದ್ರಯ್ಯ ಭಾಗವಹಿಸಿದ್ದರು.</p>.<p>ನಗರ ದಕ್ಷಿಣ ಭಾಗದ ಶಾಲೆ ಮುಖ್ಯಸ್ಥರು, ಸ್ಪರ್ಧೆಗಳ ನಿರ್ಣಾಯಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ವೇಶದಾರಿ ವಿದ್ಯಾರ್ಥಿಗಳು ಸರ್ವರ ಗಮನ ಸೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>