<p><strong>ಸುರಪುರ</strong>: ಸಗರನಾಡಿನ ಆರಾಧ್ಯ ದೈವ ವೇಣುಗೋಪಾಲಸ್ವಾಮಿ ಹಾಲೋಕುಳಿ ಜಾತ್ರೆಯ ಎರಡನೇ ದಿನದ ರಣಗಂಭಾರೋಹಣ ರಮಣಪ್ಪನಾಯಕನ ಕಟ್ಟೆಯ ಮುಂಭಾಗದಲ್ಲಿ ಮಂಗಳವಾರ ಅದ್ಧೂರಿಯಾಗಿ ಜರುಗಿತು.</p>.<p>ಅರಮನೆಯಲ್ಲಿ ರಾಜಾ ಕೃಷ್ಣಪ್ಪನಾಯಕ ಸಂಪ್ರದಾಯದಂತೆ ಸಭೆ ನಡೆಸಿ ಸ್ತಂಭಾರೋಹಣಕ್ಕೆ ಒಪ್ಪಿಗೆ ಸೂಚಿಸಿದರು. ನಂತರ ರಾಜಗುರು ವಿಜಯರಾಘವನ ಬುಕ್ಕಪಟ್ಟಣಂ ಅವರು ಮೇನೆಯಲ್ಲಿ ಆಗಮಿಸಿ ಎರಡು ಸ್ತಂಭಗಳಿಗೆ ಪೂಜೆ ಸಲ್ಲಿಸಿ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.</p>.<p>ಹಿನ್ನೆಲೆ: ಸುರಪುರ ಸಂಸ್ಥಾನದ ಅಭಿವೃದ್ಧಿ, ಸಾಮ್ರಾಜ್ಯ ವಿಸ್ತರಣೆ ಮತ್ತು ಶತ್ರುಗಳೊಂದಿಗೆ ಹೋರಾಟದಲ್ಲಿ ಭಾಗವಹಿಸಿ ವೀರಮರಣ ಅಪ್ಪಿದ ಸೈನಿಕರ ಸ್ಮರಣೆಗಾಗಿ ಈಗ ಇರುವ ಸರ್ದಾರ್ ವಲ್ಲಭಭಾಯಿ ವೃತ್ತದಲ್ಲಿ ವಿಜಯದ ಕಟ್ಟೆ ಸ್ಥಾಪಿಸಲಾಗಿತ್ತು.</p>.<p>ಅನೇಕ ಯುದ್ಧಗಳಲ್ಲಿ ಭಾಗವಹಿಸಿ ಅನನ್ಯ ಯುದ್ಧಕೌಶಲ ಪ್ರದರ್ಶಿಸಿ ಅನೇಕ ಹಲವು ಸಲ ಜಯತಂದುಕೊಟ್ಟ ರಮಣಪ್ಪನಾಯಕನ ಹೆಸರಲ್ಲಿ ಆ ಕಟ್ಟೆ ಕರೆಯಲಾಯಿತು.</p>.<p>ಹಾಲೋಕುಳಿ ಜಾತ್ರೆಯ ಸಂದರ್ಭದಲ್ಲಿ ಮೊದಲು ದೇವಸ್ಥಾನದಲ್ಲಿ ಆವರಣದಲ್ಲಿ ಮಾತ್ರ ಸ್ತಂಭಾರೋಹಣ ನಡೆಯುತ್ತಿತ್ತು. ಹುತಾತ್ಮರ ಸವಿನೆನಪಿನಲ್ಲಿ ರಮಣಪ್ಪನಾಯಕನ ಕಟ್ಟೆಯ ಹತ್ತಿರ ಎರಡು ಕಂಬಗಳ ಆರೋಹಣ ನಡೆಯತೊಡಗಿತು. ಇದಕ್ಕೆ ‘ರಣ ಗಂಭಾರೋಹಣ’ ಎಂಬ ಹೆಸರು ಇಡಲಾಯಿತು.</p>.<p>ಮಂಗಳವಾರ ನಿಗದಿತ ಗ್ರಾಮಗಳ ಕಂಬಗಳನ್ನು ಏರಿ ಕಂಬದ ತುದಿಗೆ ಕಟ್ಟಿದ ಬಾಳೆಹಣ್ಣು, ಕೊಬ್ಬರಿ ಹರಿದರು. ನೆರದಿದ್ದ ಸಹಸ್ರಾರು ಭಕ್ತರು ಚಪ್ಪಾಳೆ, ಹರ್ಷೋದ್ಘಾರ ಮಾಡಿದರು. ಸಂಸ್ಥಾನದ ವತನದಾರರು, ಚಾಜದವರು ಇದ್ದರು. ರಣಸ್ತಂಭಾರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ಸಗರನಾಡಿನ ಆರಾಧ್ಯ ದೈವ ವೇಣುಗೋಪಾಲಸ್ವಾಮಿ ಹಾಲೋಕುಳಿ ಜಾತ್ರೆಯ ಎರಡನೇ ದಿನದ ರಣಗಂಭಾರೋಹಣ ರಮಣಪ್ಪನಾಯಕನ ಕಟ್ಟೆಯ ಮುಂಭಾಗದಲ್ಲಿ ಮಂಗಳವಾರ ಅದ್ಧೂರಿಯಾಗಿ ಜರುಗಿತು.</p>.<p>ಅರಮನೆಯಲ್ಲಿ ರಾಜಾ ಕೃಷ್ಣಪ್ಪನಾಯಕ ಸಂಪ್ರದಾಯದಂತೆ ಸಭೆ ನಡೆಸಿ ಸ್ತಂಭಾರೋಹಣಕ್ಕೆ ಒಪ್ಪಿಗೆ ಸೂಚಿಸಿದರು. ನಂತರ ರಾಜಗುರು ವಿಜಯರಾಘವನ ಬುಕ್ಕಪಟ್ಟಣಂ ಅವರು ಮೇನೆಯಲ್ಲಿ ಆಗಮಿಸಿ ಎರಡು ಸ್ತಂಭಗಳಿಗೆ ಪೂಜೆ ಸಲ್ಲಿಸಿ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.</p>.<p>ಹಿನ್ನೆಲೆ: ಸುರಪುರ ಸಂಸ್ಥಾನದ ಅಭಿವೃದ್ಧಿ, ಸಾಮ್ರಾಜ್ಯ ವಿಸ್ತರಣೆ ಮತ್ತು ಶತ್ರುಗಳೊಂದಿಗೆ ಹೋರಾಟದಲ್ಲಿ ಭಾಗವಹಿಸಿ ವೀರಮರಣ ಅಪ್ಪಿದ ಸೈನಿಕರ ಸ್ಮರಣೆಗಾಗಿ ಈಗ ಇರುವ ಸರ್ದಾರ್ ವಲ್ಲಭಭಾಯಿ ವೃತ್ತದಲ್ಲಿ ವಿಜಯದ ಕಟ್ಟೆ ಸ್ಥಾಪಿಸಲಾಗಿತ್ತು.</p>.<p>ಅನೇಕ ಯುದ್ಧಗಳಲ್ಲಿ ಭಾಗವಹಿಸಿ ಅನನ್ಯ ಯುದ್ಧಕೌಶಲ ಪ್ರದರ್ಶಿಸಿ ಅನೇಕ ಹಲವು ಸಲ ಜಯತಂದುಕೊಟ್ಟ ರಮಣಪ್ಪನಾಯಕನ ಹೆಸರಲ್ಲಿ ಆ ಕಟ್ಟೆ ಕರೆಯಲಾಯಿತು.</p>.<p>ಹಾಲೋಕುಳಿ ಜಾತ್ರೆಯ ಸಂದರ್ಭದಲ್ಲಿ ಮೊದಲು ದೇವಸ್ಥಾನದಲ್ಲಿ ಆವರಣದಲ್ಲಿ ಮಾತ್ರ ಸ್ತಂಭಾರೋಹಣ ನಡೆಯುತ್ತಿತ್ತು. ಹುತಾತ್ಮರ ಸವಿನೆನಪಿನಲ್ಲಿ ರಮಣಪ್ಪನಾಯಕನ ಕಟ್ಟೆಯ ಹತ್ತಿರ ಎರಡು ಕಂಬಗಳ ಆರೋಹಣ ನಡೆಯತೊಡಗಿತು. ಇದಕ್ಕೆ ‘ರಣ ಗಂಭಾರೋಹಣ’ ಎಂಬ ಹೆಸರು ಇಡಲಾಯಿತು.</p>.<p>ಮಂಗಳವಾರ ನಿಗದಿತ ಗ್ರಾಮಗಳ ಕಂಬಗಳನ್ನು ಏರಿ ಕಂಬದ ತುದಿಗೆ ಕಟ್ಟಿದ ಬಾಳೆಹಣ್ಣು, ಕೊಬ್ಬರಿ ಹರಿದರು. ನೆರದಿದ್ದ ಸಹಸ್ರಾರು ಭಕ್ತರು ಚಪ್ಪಾಳೆ, ಹರ್ಷೋದ್ಘಾರ ಮಾಡಿದರು. ಸಂಸ್ಥಾನದ ವತನದಾರರು, ಚಾಜದವರು ಇದ್ದರು. ರಣಸ್ತಂಭಾರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>