<p><strong>ಯಾದಗಿರಿ:</strong> ಪಟ್ಟಣದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಾಗಿ ಮನೆಗಳ ಹುಡುಕಾಡುವಾಗ ಬಂದಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ಸುನೀತಾಗೌಡ ಅಳಳ್ಳಿ ಸುಸ್ತಾಗಿ ತೆಲೆ ತಿರುಗಿ ಬಿದ್ದಿದ್ದಾರೆ.</p>.<p>ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ‘ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.</p>.<p>ಆಸ್ಪತ್ರೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ.ಕನ್ನಳ್ಳಿ ಅವರು ಶಿಕ್ಷಕಿಯ ಆರೋಗ್ಯ ವಿಚಾರಿಸಿದರು. ಬಳಿಕ ವೈದ್ಯರೊಂದಿಗೆ ಮಾತನಾಡಿದ ಅವರು, ‘ಸ್ವಲ್ಪ ಒತ್ತಡ, ಬಿಸಿಲಿನಿಂದ ಈ ರೀತಿಯಾಗಿದೆ. ಸ್ವಲ ವಿಶ್ರಾಂತಿ ಪಡೆಯಿರಿ’ ಎಂದು ಶಿಕ್ಷಕಿಗೆ ಹೇಳಿದರು.</p>.<p>ಈ ವೇಳೆ ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ ಕಾವಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ತಾಲ್ಲೂಕು ಅಧ್ಯಕ್ಷ ಯಂಕಪ್ಪ ದೊಡ್ಡಮನಿ, ಇಸಿಒ ಚಾಂದಸಾಬ್ ಸೈದಾಪುರ್ ಸಿಆರ್ಪಿ ಲಿಂಗರೆಡ್ಡಿ ಗೊಬ್ಬೂರು ಇದ್ದರು.</p>.<p>ಒಂದೇ ಕಾಲೊನಿಯಲ್ಲಿ 45ಕ್ಕೂ ಹೆಚ್ಚೂ ಶಿಕ್ಷಕರಿಂದ ಗಣತಿ: ಸೈದಾಪುರ ಪಟ್ಟಣದ ಗಂಗಾನಗರ, ತಾಯಿ ಕಾಲೊನಿ ಮತ್ತು ಮಹಾವೀರ ಕಾಲೊನಿ ಸೇರಿದಂತೆ ಇನ್ನಿತರ ಕಾಲೋನಿಗಳ ಸೋಮವಾರ (ಅ.6) ಅಂತ್ಯಕ್ಕೆ 1,000ಕ್ಕೂ ಹೆಚ್ಚು ಮನೆಗಳ ಗಣತಿ ಮಾಡಿಲ್ಲ. ಈ ಬಗ್ಗೆ ಸ್ಥಳಿಯರು ಕಂದಾಯ ಇಲಾಖೆಗೆ ತಿಳಿಸಿದ್ದಾರೆ. ಬಳಿಕ ಯಾದಗಿರಿ ತಾಲ್ಲೂಕಿನಲ್ಲಿ ನಿರ್ದಿಷ್ಠ ಗುರಿ ಮುಟ್ಟದ ಶಿಕ್ಷಕರಿಗೆ ಜಿಲ್ಲಾ ಕೇಂದ್ರದಿಂದ 30 ಶಿಕ್ಷಕರನ್ನು ಇಲಾಖೆ ಸಮೀಕ್ಷೆಗೆ ಕಳುಹಿಸಿದೆ. ಆದರೆ ಇತರ ಗ್ರಾಮ ಮತ್ತು ಪಟ್ಟಣಗಳಲ್ಲಿ ಗುರಿ ಮುಟ್ಟದ ಇತರ ಶಿಕ್ಷಕರೂ ಈ ಪ್ರದೇಶದಲ್ಲೇ ಸಮೀಕ್ಷೆ ಮಾಡುತ್ತಿದ್ದಾರೆ. ಇದರಿಂದ ಸಮೀಕ್ಷೆ ಮಾಡದಿರುವ ಮನೆಗಳ ಹುಡುಕಾಟಕ್ಕೆ ಶಿಕ್ಷಕರು ಪರದಾಡುತ್ತಿದ್ದಾರೆ.</p>.<div><blockquote>ಸೈದಾಪುರ ಪಟ್ಟಣದಲ್ಲಿ ಸಮೀಕ್ಷೆಯಲ್ಲಿ ತೊಡಗಿದ್ದ ಶಿಕ್ಷಕಿಗೆ ರಕ್ತದ ಒತ್ತಡ ಕಡಿಮೆಯಾಗಿ ತೆಲೆ ಸುತ್ತಿನಿಂದ ಬಳಲುತ್ತಿದ್ದರು. ತಕ್ಷಣ ನಮ್ಮ ಇಲಾಖೆಯರು ಆಸ್ಪತ್ರೆಗೆ ಸೇರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ನಾನೂ ಆರೋಗ್ಯ ವಿಚಾರಿಸಿದ್ದೇನೆ.</blockquote><span class="attribution"> ವೀರಪ್ಪ ಕನ್ನಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಯಾದಗಿರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಪಟ್ಟಣದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಾಗಿ ಮನೆಗಳ ಹುಡುಕಾಡುವಾಗ ಬಂದಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ಸುನೀತಾಗೌಡ ಅಳಳ್ಳಿ ಸುಸ್ತಾಗಿ ತೆಲೆ ತಿರುಗಿ ಬಿದ್ದಿದ್ದಾರೆ.</p>.<p>ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ‘ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.</p>.<p>ಆಸ್ಪತ್ರೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ.ಕನ್ನಳ್ಳಿ ಅವರು ಶಿಕ್ಷಕಿಯ ಆರೋಗ್ಯ ವಿಚಾರಿಸಿದರು. ಬಳಿಕ ವೈದ್ಯರೊಂದಿಗೆ ಮಾತನಾಡಿದ ಅವರು, ‘ಸ್ವಲ್ಪ ಒತ್ತಡ, ಬಿಸಿಲಿನಿಂದ ಈ ರೀತಿಯಾಗಿದೆ. ಸ್ವಲ ವಿಶ್ರಾಂತಿ ಪಡೆಯಿರಿ’ ಎಂದು ಶಿಕ್ಷಕಿಗೆ ಹೇಳಿದರು.</p>.<p>ಈ ವೇಳೆ ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ ಕಾವಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ತಾಲ್ಲೂಕು ಅಧ್ಯಕ್ಷ ಯಂಕಪ್ಪ ದೊಡ್ಡಮನಿ, ಇಸಿಒ ಚಾಂದಸಾಬ್ ಸೈದಾಪುರ್ ಸಿಆರ್ಪಿ ಲಿಂಗರೆಡ್ಡಿ ಗೊಬ್ಬೂರು ಇದ್ದರು.</p>.<p>ಒಂದೇ ಕಾಲೊನಿಯಲ್ಲಿ 45ಕ್ಕೂ ಹೆಚ್ಚೂ ಶಿಕ್ಷಕರಿಂದ ಗಣತಿ: ಸೈದಾಪುರ ಪಟ್ಟಣದ ಗಂಗಾನಗರ, ತಾಯಿ ಕಾಲೊನಿ ಮತ್ತು ಮಹಾವೀರ ಕಾಲೊನಿ ಸೇರಿದಂತೆ ಇನ್ನಿತರ ಕಾಲೋನಿಗಳ ಸೋಮವಾರ (ಅ.6) ಅಂತ್ಯಕ್ಕೆ 1,000ಕ್ಕೂ ಹೆಚ್ಚು ಮನೆಗಳ ಗಣತಿ ಮಾಡಿಲ್ಲ. ಈ ಬಗ್ಗೆ ಸ್ಥಳಿಯರು ಕಂದಾಯ ಇಲಾಖೆಗೆ ತಿಳಿಸಿದ್ದಾರೆ. ಬಳಿಕ ಯಾದಗಿರಿ ತಾಲ್ಲೂಕಿನಲ್ಲಿ ನಿರ್ದಿಷ್ಠ ಗುರಿ ಮುಟ್ಟದ ಶಿಕ್ಷಕರಿಗೆ ಜಿಲ್ಲಾ ಕೇಂದ್ರದಿಂದ 30 ಶಿಕ್ಷಕರನ್ನು ಇಲಾಖೆ ಸಮೀಕ್ಷೆಗೆ ಕಳುಹಿಸಿದೆ. ಆದರೆ ಇತರ ಗ್ರಾಮ ಮತ್ತು ಪಟ್ಟಣಗಳಲ್ಲಿ ಗುರಿ ಮುಟ್ಟದ ಇತರ ಶಿಕ್ಷಕರೂ ಈ ಪ್ರದೇಶದಲ್ಲೇ ಸಮೀಕ್ಷೆ ಮಾಡುತ್ತಿದ್ದಾರೆ. ಇದರಿಂದ ಸಮೀಕ್ಷೆ ಮಾಡದಿರುವ ಮನೆಗಳ ಹುಡುಕಾಟಕ್ಕೆ ಶಿಕ್ಷಕರು ಪರದಾಡುತ್ತಿದ್ದಾರೆ.</p>.<div><blockquote>ಸೈದಾಪುರ ಪಟ್ಟಣದಲ್ಲಿ ಸಮೀಕ್ಷೆಯಲ್ಲಿ ತೊಡಗಿದ್ದ ಶಿಕ್ಷಕಿಗೆ ರಕ್ತದ ಒತ್ತಡ ಕಡಿಮೆಯಾಗಿ ತೆಲೆ ಸುತ್ತಿನಿಂದ ಬಳಲುತ್ತಿದ್ದರು. ತಕ್ಷಣ ನಮ್ಮ ಇಲಾಖೆಯರು ಆಸ್ಪತ್ರೆಗೆ ಸೇರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ನಾನೂ ಆರೋಗ್ಯ ವಿಚಾರಿಸಿದ್ದೇನೆ.</blockquote><span class="attribution"> ವೀರಪ್ಪ ಕನ್ನಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಯಾದಗಿರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>