<p><strong>ಯಾದಗಿರಿ:</strong> ನಗರದ 27 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಭಾನುವಾರ ಸುಗಮವಾಗಿ ಜರುಗಿತು.</p>.<p>ಪತ್ರಿಕೆ-1ಕ್ಕೆ 2,684 ಮತ್ತು ಪತ್ರಿಕೆ-2ಕ್ಕೆ 7,828 ಅಭ್ಯರ್ಥಿಗಳು ನೋಂದಾಯಿಸಿದ್ದರು.</p>.<p>ಮೊದಲ ಅವಧಿ ಬೆಳಿಗ್ಗೆ 10ರಿಂದ ಹಾಗೂ ಮಧ್ಯಾಹ್ನ 2ರಿಂದ ಎರಡನೇ ಅವಧಿಯ ಪರೀಕ್ಷೆಗಳು ಜರುಗಿದವು.</p>.<p>ಮೊದಲ ಅವಧಿಗೆ 2,534 ಅಭ್ಯರ್ಥಿಗಳು ಹಾಜರಾಗಿ, 150 ಮಂದಿ ಗೈರಾಗಿದ್ದರು. ಎರಡನೇ ಅವಧಿಗೆ 7,398 ಜನ ಹಾಜರಿದ್ದು, 430 ಅಭ್ಯರ್ಥಿಗಳು ಗೈರಾಗಿದ್ದರು.</p>.<p>ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳು ಅಧಿಕಾರಿಗಳು ಪ್ರವೇಶ ಪತ್ರ ಪರಿಶೀಲಿಸಿದ ನಂತರ ಲೋಹಶೋಧಕದ ಮೂಲಕ ಒಳ ಪ್ರವೇಶಿಸಿದರು.</p>.<p>ಮಹಿಳಾ ಅಭ್ಯರ್ಥಿಗಳ ಮೂಗುತಿ, ಮೂಗುಬಟ್ಟು, ಮೂಗುನತ್ತು, ಕಿವಿ ಓಲೆಗಳನ್ನು ತೆಗೆಯಿಸಲಾಯಿತು.</p>.<p>ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪೋಷಕರೂ ಜತೆಗೆ ಬಂದಿದ್ದು, ಅಭ್ಯರ್ಥಿಗಳ ಮಕ್ಕಳನ್ನು ಪರೀಕ್ಷಾ ಕೇಂದ್ರದ ಹೊರಗೆ ಮಾಡುತ್ತಾ ಕೂತಿದ್ದು ಕಂಡುಬಂದಿತು.</p>.<p>ಪರೀಕ್ಷೆಯ ಹಿನ್ನಲೆ ಕೇಂದ್ರಗಳ ಸುತ್ತಲಲ್ಲಿ, ಪರೀಕ್ಷಾ ವೇಳೆ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದ ಹಿನ್ನಲೆ ಅಂಗಡಿಗಳನ್ನು ಮುಚ್ಚಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ನಗರದ 27 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಭಾನುವಾರ ಸುಗಮವಾಗಿ ಜರುಗಿತು.</p>.<p>ಪತ್ರಿಕೆ-1ಕ್ಕೆ 2,684 ಮತ್ತು ಪತ್ರಿಕೆ-2ಕ್ಕೆ 7,828 ಅಭ್ಯರ್ಥಿಗಳು ನೋಂದಾಯಿಸಿದ್ದರು.</p>.<p>ಮೊದಲ ಅವಧಿ ಬೆಳಿಗ್ಗೆ 10ರಿಂದ ಹಾಗೂ ಮಧ್ಯಾಹ್ನ 2ರಿಂದ ಎರಡನೇ ಅವಧಿಯ ಪರೀಕ್ಷೆಗಳು ಜರುಗಿದವು.</p>.<p>ಮೊದಲ ಅವಧಿಗೆ 2,534 ಅಭ್ಯರ್ಥಿಗಳು ಹಾಜರಾಗಿ, 150 ಮಂದಿ ಗೈರಾಗಿದ್ದರು. ಎರಡನೇ ಅವಧಿಗೆ 7,398 ಜನ ಹಾಜರಿದ್ದು, 430 ಅಭ್ಯರ್ಥಿಗಳು ಗೈರಾಗಿದ್ದರು.</p>.<p>ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳು ಅಧಿಕಾರಿಗಳು ಪ್ರವೇಶ ಪತ್ರ ಪರಿಶೀಲಿಸಿದ ನಂತರ ಲೋಹಶೋಧಕದ ಮೂಲಕ ಒಳ ಪ್ರವೇಶಿಸಿದರು.</p>.<p>ಮಹಿಳಾ ಅಭ್ಯರ್ಥಿಗಳ ಮೂಗುತಿ, ಮೂಗುಬಟ್ಟು, ಮೂಗುನತ್ತು, ಕಿವಿ ಓಲೆಗಳನ್ನು ತೆಗೆಯಿಸಲಾಯಿತು.</p>.<p>ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪೋಷಕರೂ ಜತೆಗೆ ಬಂದಿದ್ದು, ಅಭ್ಯರ್ಥಿಗಳ ಮಕ್ಕಳನ್ನು ಪರೀಕ್ಷಾ ಕೇಂದ್ರದ ಹೊರಗೆ ಮಾಡುತ್ತಾ ಕೂತಿದ್ದು ಕಂಡುಬಂದಿತು.</p>.<p>ಪರೀಕ್ಷೆಯ ಹಿನ್ನಲೆ ಕೇಂದ್ರಗಳ ಸುತ್ತಲಲ್ಲಿ, ಪರೀಕ್ಷಾ ವೇಳೆ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದ ಹಿನ್ನಲೆ ಅಂಗಡಿಗಳನ್ನು ಮುಚ್ಚಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>