ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಿಕೇರಾ ಉತ್ಸವದಲ್ಲಿ ಪ್ರಾಣಿ ಬಲಿ ತಡೆಗೆ ಬಿಗಿ ಬಂದೋಬಸ್ತ್‌

ದೇವಿಕೇರಾದಲ್ಲಿ ಪ್ರಾಣಿ ಬಲಿಗೆ ನಿಷೇಧ: ಬಿಗಿ ಬಂದೋಬಸ್ತ್‌
Published 18 ಡಿಸೆಂಬರ್ 2023, 15:45 IST
Last Updated 18 ಡಿಸೆಂಬರ್ 2023, 15:45 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಸೋಮವಾರ ನಡೆಯ ಗ್ರಾಮ ದೇವತೆಯ ಉತ್ಸವದಲ್ಲಿ ಪ್ರಾಣಿ ಬಲಿ ತಡೆಯಲು ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ.

ಗ್ರಾಮದ ದ್ಯಾವಮ್ಮ, ಪಾಲ್ಕಮ್ಮ ಮತ್ತು ಮರೆಮ್ಮ ದೇವಿಯರ ಉತ್ಸವ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರದವರೆಗೆ ನಡೆಯಲಿದೆ. ಈ ವೇಳೆ ದೇವರ ಹೆಸರಲ್ಲಿ ಪ್ರಾಣಿಬಲಿ ಕೊಡುವ ಸಾಧ್ಯತೆ ಇದ್ದು, ದಲಿತರಿಗೆ ಒತ್ತಾಯ ಪೂರ್ವಕವಾಗಿ ಕೋಣದ ಮಾಂಸ ತಿನ್ನಿಸಲಾಗುತ್ತದೆ. ತಿನ್ನದವರಿಗೆ ಬಹಿಷ್ಕಾರ ಹಾಕುವ ಬೆದರಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ದೇವಸ್ಥಾನಗಳ ಮುಂದೆ ಮತ್ತು ಗ್ರಾಮದ ಸುತ್ತ 120 ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದ್ದು, ಸುರಪುರ ಉಪವಿಭಾಗದ ಡಿವೈಎಸ್‍ಪಿ ಜಾವೀದ್ ಇನಾಮದಾರ, ತಹಶೀಲ್ದಾರ್ ಕೆ.ವಿಜಯಕುಮಾರ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT