<p><strong>ಯಾದಗಿರಿ: </strong>ನಗರದ ವಿವಿಧ ಮಾರುಕಟ್ಟೆಗಳಲ್ಲಿ ತರಕಾರಿ ದರ ಯಥಾಸ್ಥಿತಿ ಇದೆ. ಆದರೆ, ಸೊಪ್ಪುಗಳು ಮಾರುಕಟ್ಟೆಗಳಲ್ಲಿ ಸಿಗುತ್ತಿಲ್ಲ. ಸಿಕ್ಕರೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ.</p>.<p>ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ಸೊಪ್ಪುಗಳು ಕೊಳೆತುಹೋಗಿದ್ದವು. ಇದರಿಂದ ಸೊಪ್ಪುಗಳಿಗೆ ಬೇಡಿಕೆ ಹೆಚ್ಚಿದೆ. ಕೊರೊನಾ ಹಾವಳಿಯಿಂದ ಬೇರೆ ಜಿಲ್ಲೆಯಿಂದ ಸೊಪ್ಪುಗಳು ಬರುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಸೊಪ್ಪುಗಳ ಬೆಲೆ ಏರಿಕೆಯಲ್ಲಿ ಗಣನೀಯವಾಗಿ ಹೆಚ್ಚಿದೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.</p>.<p>ಒಂದು ಕಟ್ಟು ಪಾಲಕ್ಸೊಪ್ಪು ₹10ಕ್ಕೆ ಮಾರಾಟವಾಗುತ್ತಿದೆ. ಇದಕ್ಕೂ ಮುಂಚೆ ₹5ಕ್ಕೆ ಒಂದು ಕಟ್ಟು ಸಿಗುತ್ತಿತ್ತು. ಮೆಂತ್ಯೆಒಂದು ಕಟ್ಟು ₹20,ಪುಂಡಿಪಲ್ಯೆ ₹5ಗೆ ಒಂದು ಕಟ್ಟು, ರಾಜಗಿರಿಸೊಪ್ಪು ₹10ಕ್ಕೆ 1 ಕಟ್ಟು,ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಒಂದು ಕಟ್ಟು ₹30,ಈರುಳ್ಳಿ ಸೊಪ್ಪು ಕೇಜಿ 60ಗೆ ಮಾರಾಟವಾಗುತ್ತಿದೆ.</p>.<p>ಬೆಲೆ ಇಳಿಯದ ನುಗ್ಗೆಕಾಯಿ, ಹಿರೇಕಾಯಿ: ಮಳೆಗಾಲವಾಗಿದ್ದರಿಂದ ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಿದ್ದು, ಕೆಜಿಗೆ ₹120 ದರ ಇದೆ. ಕಳೆದ ತಿಂಗಳಿಂದಲೂ ನುಗ್ಗೆಕಾಯಿಗೆ ಹೆಚ್ಚಿನ ದರವಿದೆಎಂದು ವ್ಯಾಪಾರಿಗಳು ತಿಳಿಸಿದರು.</p>.<p>ಮೂರು ವಾರಗಳಿಂದಲೂಬೀನ್ಸ್₹80,ಗಜ್ಜರಿ₹80,ಹಿರೇಕಾಯಿ₹80 ಒಂದೇ ಬೆಲೆ ಇದೆ. ಬೇರೆ ತರಕಾರಿಗಳು ₹10ರಿಂದ ₹20ದರ ಇಳಿಕೆಯಾದರೂ ಇವು ಇಳಿಕೆಯಾಗಿಲ್ಲ.</p>.<p><strong>ಈರುಳ್ಳಿ ಬೆಲೆ ಇಳಿಕೆ: </strong>ತರಕಾರಿಗಳಲ್ಲಿಎರಡು ವಾರಗಳಿಂದಲೂ ಈರುಳ್ಳಿ ಬೆಲೆ ಕುಸಿದಿದೆ. ಈಗ ಮಾರುಕಟ್ಟೆಗಳಲ್ಲಿ ₹20ಕ್ಕೆ ಕೆಜಿ ಮಾರಾಟವಾಗುತ್ತಿದ್ದು, ಅತ್ಯಂತ ಕಡಿಮೆ ಬೆಲೆಗೆ ಈರುಳ್ಳಿ ಸಿಗುತ್ತಿದೆ.</p>.<p><strong>ಇಳಿಕೆಯಾಗದ ಬದನೆಕಾಯಿ ಬೆಲೆ: </strong>ಶ್ರಾವಣ ಮಾಸದ ಆರಂಭದಿಂದಲೂಬದನೆಕಾಯಿ ಬೆಲೆ ಇಳಿಕೆ ಕಂಡಿಲ್ಲ.₹80ಕ್ಕೆ ಕೆಜಿ ಮಾರಾಟವಾಗುತ್ತಿದ್ದು,ಈಗಲೂ ಅದೇ ದರ ಮುಂದುವರಿದಿದೆ.</p>.<p><strong>ಹಣ್ಣುಗಳ ದರ: </strong>ಸೇಬುಹಣ್ಣು ಚಿಕ್ಕ ಗಾತ್ರ ₹10, ಮಧ್ಯಮ ಗಾತ್ರ ₹20 ಬೆಲೆ ಇದೆ. ಮೊಸಂಬಿ ₹10ಗೆ ಒಂದು, ದಾಳಿಂಬೆ ಚಿಕ್ಕ ಗಾತ್ರ ಒಂದಕ್ಕೆ ₹10 ದರ ಇದೆ. ಬಾಳೆಹಣ್ಣು ಡಜನ್ಗೆ ₹40ಗೆ ಮಾರಾಟವಾಗುತ್ತಿದೆ.</p>.<p>--</p>.<p>ಮಳೆಯಿಂದ ಸೊಪ್ಪುಗಳುಹಾಳಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಇದರಿಂದ ಮಾರಾಟ ಮಾಡಲು ಸೊಪ್ಪುಗಳು ಸಿಗುತ್ತಿಲ್ಲ</p>.<p>-ಭರತ್ಹೂಗಾರ, ವ್ಯಾಪಾರಿ</p>.<p>ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿದೆಹೊರತು ಇಳಿಕೆಯಾಗಿಲ್ಲ. ಶ್ರಾವಣ ಮಾಸ ಮುಗಿದ ನಂತರ ಇಳಿಕೆಯಾಗುವುದಾ ಕಾದು ನೋಡಬೇಕು.<br />- ದೇವಿಂದ್ರಪ್ಪ ಯಾದಗಿರಿ, ಗ್ರಾಹಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ನಗರದ ವಿವಿಧ ಮಾರುಕಟ್ಟೆಗಳಲ್ಲಿ ತರಕಾರಿ ದರ ಯಥಾಸ್ಥಿತಿ ಇದೆ. ಆದರೆ, ಸೊಪ್ಪುಗಳು ಮಾರುಕಟ್ಟೆಗಳಲ್ಲಿ ಸಿಗುತ್ತಿಲ್ಲ. ಸಿಕ್ಕರೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ.</p>.<p>ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ಸೊಪ್ಪುಗಳು ಕೊಳೆತುಹೋಗಿದ್ದವು. ಇದರಿಂದ ಸೊಪ್ಪುಗಳಿಗೆ ಬೇಡಿಕೆ ಹೆಚ್ಚಿದೆ. ಕೊರೊನಾ ಹಾವಳಿಯಿಂದ ಬೇರೆ ಜಿಲ್ಲೆಯಿಂದ ಸೊಪ್ಪುಗಳು ಬರುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಸೊಪ್ಪುಗಳ ಬೆಲೆ ಏರಿಕೆಯಲ್ಲಿ ಗಣನೀಯವಾಗಿ ಹೆಚ್ಚಿದೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.</p>.<p>ಒಂದು ಕಟ್ಟು ಪಾಲಕ್ಸೊಪ್ಪು ₹10ಕ್ಕೆ ಮಾರಾಟವಾಗುತ್ತಿದೆ. ಇದಕ್ಕೂ ಮುಂಚೆ ₹5ಕ್ಕೆ ಒಂದು ಕಟ್ಟು ಸಿಗುತ್ತಿತ್ತು. ಮೆಂತ್ಯೆಒಂದು ಕಟ್ಟು ₹20,ಪುಂಡಿಪಲ್ಯೆ ₹5ಗೆ ಒಂದು ಕಟ್ಟು, ರಾಜಗಿರಿಸೊಪ್ಪು ₹10ಕ್ಕೆ 1 ಕಟ್ಟು,ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಒಂದು ಕಟ್ಟು ₹30,ಈರುಳ್ಳಿ ಸೊಪ್ಪು ಕೇಜಿ 60ಗೆ ಮಾರಾಟವಾಗುತ್ತಿದೆ.</p>.<p>ಬೆಲೆ ಇಳಿಯದ ನುಗ್ಗೆಕಾಯಿ, ಹಿರೇಕಾಯಿ: ಮಳೆಗಾಲವಾಗಿದ್ದರಿಂದ ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಿದ್ದು, ಕೆಜಿಗೆ ₹120 ದರ ಇದೆ. ಕಳೆದ ತಿಂಗಳಿಂದಲೂ ನುಗ್ಗೆಕಾಯಿಗೆ ಹೆಚ್ಚಿನ ದರವಿದೆಎಂದು ವ್ಯಾಪಾರಿಗಳು ತಿಳಿಸಿದರು.</p>.<p>ಮೂರು ವಾರಗಳಿಂದಲೂಬೀನ್ಸ್₹80,ಗಜ್ಜರಿ₹80,ಹಿರೇಕಾಯಿ₹80 ಒಂದೇ ಬೆಲೆ ಇದೆ. ಬೇರೆ ತರಕಾರಿಗಳು ₹10ರಿಂದ ₹20ದರ ಇಳಿಕೆಯಾದರೂ ಇವು ಇಳಿಕೆಯಾಗಿಲ್ಲ.</p>.<p><strong>ಈರುಳ್ಳಿ ಬೆಲೆ ಇಳಿಕೆ: </strong>ತರಕಾರಿಗಳಲ್ಲಿಎರಡು ವಾರಗಳಿಂದಲೂ ಈರುಳ್ಳಿ ಬೆಲೆ ಕುಸಿದಿದೆ. ಈಗ ಮಾರುಕಟ್ಟೆಗಳಲ್ಲಿ ₹20ಕ್ಕೆ ಕೆಜಿ ಮಾರಾಟವಾಗುತ್ತಿದ್ದು, ಅತ್ಯಂತ ಕಡಿಮೆ ಬೆಲೆಗೆ ಈರುಳ್ಳಿ ಸಿಗುತ್ತಿದೆ.</p>.<p><strong>ಇಳಿಕೆಯಾಗದ ಬದನೆಕಾಯಿ ಬೆಲೆ: </strong>ಶ್ರಾವಣ ಮಾಸದ ಆರಂಭದಿಂದಲೂಬದನೆಕಾಯಿ ಬೆಲೆ ಇಳಿಕೆ ಕಂಡಿಲ್ಲ.₹80ಕ್ಕೆ ಕೆಜಿ ಮಾರಾಟವಾಗುತ್ತಿದ್ದು,ಈಗಲೂ ಅದೇ ದರ ಮುಂದುವರಿದಿದೆ.</p>.<p><strong>ಹಣ್ಣುಗಳ ದರ: </strong>ಸೇಬುಹಣ್ಣು ಚಿಕ್ಕ ಗಾತ್ರ ₹10, ಮಧ್ಯಮ ಗಾತ್ರ ₹20 ಬೆಲೆ ಇದೆ. ಮೊಸಂಬಿ ₹10ಗೆ ಒಂದು, ದಾಳಿಂಬೆ ಚಿಕ್ಕ ಗಾತ್ರ ಒಂದಕ್ಕೆ ₹10 ದರ ಇದೆ. ಬಾಳೆಹಣ್ಣು ಡಜನ್ಗೆ ₹40ಗೆ ಮಾರಾಟವಾಗುತ್ತಿದೆ.</p>.<p>--</p>.<p>ಮಳೆಯಿಂದ ಸೊಪ್ಪುಗಳುಹಾಳಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಇದರಿಂದ ಮಾರಾಟ ಮಾಡಲು ಸೊಪ್ಪುಗಳು ಸಿಗುತ್ತಿಲ್ಲ</p>.<p>-ಭರತ್ಹೂಗಾರ, ವ್ಯಾಪಾರಿ</p>.<p>ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿದೆಹೊರತು ಇಳಿಕೆಯಾಗಿಲ್ಲ. ಶ್ರಾವಣ ಮಾಸ ಮುಗಿದ ನಂತರ ಇಳಿಕೆಯಾಗುವುದಾ ಕಾದು ನೋಡಬೇಕು.<br />- ದೇವಿಂದ್ರಪ್ಪ ಯಾದಗಿರಿ, ಗ್ರಾಹಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>