ತಾಲ್ಲೂಕಿನ ಕೊಡೇಕಲ್ಲ, ಬರದೇವನಾಳ, ನಾರಾಯಣಪುರ, ರಾಜನಕೋಳುರ, ಬಪ್ಪರಗಿ, ಹೊರಟ್ಟಿ, ಕೋಮಲಾಪುರ, ತೀರ್ಥ ಮತ್ತಿತರ ಗ್ರಾಮಗಳ ಶೇ 70 ಕ್ಕೂ ಹೆಚ್ಚಿನ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಬೆಳೆ ಚೆನ್ನಾಗಿದೆ. ಮಳೆ ವಾಡಿಕೆಗಿಂತ ಹೆಚ್ಚಾಗಿದ್ದರಿಂದಾಗಿ ಕಳೆ ಕೀಳುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಕೊಡೇಕಲ್ಲ ಗ್ರಾಮದ ರೈತ ಶಿವಶರಣ ಕಟ್ಟಿಮನಿ ವಿವರಿಸಿದರು.