ಮುದ್ನಾಳ (ಯರಗೋಳ):ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶನಿವಾರ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಗ್ರಾಮದ ರೈತರ ಹೊಲದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಿಂದ ಆಮ್ಲಜನಕ ಸಿಗುತ್ತದೆ. ಆದ್ದರಿಂದ ಎಲ್ಲರೂ ಗಿಡ, ಮರ ಬೆಳೆಸಿ ಅರಣ್ಯ ಹೆಚ್ಚಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ಶಿವ ಕೊಳ್ಳಿ, ಸಂಜೀವಕುಮಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಲಕಂಠ ಶಹಪೂರಕರ, ಕರವಸೂಲಿಗಾರ ಕಾಮೇಶ ಪವಾರ್, ಅಮ್ಜದ್ ಖಾನ್ ಇದ್ದರು.