<p><strong>ಸುರಪುರ:</strong> ‘ರೈತರು ತಪ್ಪದೇ ತಮ್ಮ ಹೊಲದ ಮಣ್ಣು ಪರೀಕ್ಷೆ ಮಾಡಿಸಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ರಸ ಗೊಬ್ಬರಗಳನ್ನು ಹಾಕಬೇಕು. ಈ ಮೂಲಕ ಅಮೂಲ್ಯವಾದ ಮಣ್ಣು ಸಂಪತ್ತು ರಕ್ಷಿಸಬೇಕು’ ವಿಜ್ಞಾನಿ ಡಾ.ಅಮರೇಶ ವೈ.ಎಸ್. ಹೇಳಿದರು.</p>.<p>ತಾಲ್ಲೂಕಿನ ಕವಡಿಮಟ್ಟಿಯಲ್ಲಿ ಭಾನುವಾರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೋರಮಂಡಲ್ ಇಂಟರ್ನ್ಯಾಷನಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣಿನ ಆರೋಗ್ಯ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜೀವಂತ ಜೀವಿಗಳ ಈ ವೈವಿಧ್ಯಮಯ ಸಮುದಾಯವು ಮಣ್ಣನ್ನು ಆರೋಗ್ಯಕರವಾಗಿ ಮತ್ತು ಫಲವತ್ತಾಗಿರಿಸುತ್ತದೆ. ಈ ವಿಶಾಲ ಜಗತ್ತು ಮಣ್ಣಿನ ಜೀವ ವೈವಿಧ್ಯತೆಯನ್ನು ರೂಪಿಸುತ್ತದೆ. ಭೂಮಿಯ ಮೇಲೆ ಜೀವವನ್ನು ಸಾಧ್ಯವಾಗಿಸುವ ಮುಖ್ಯ ಜೈವಿಕ ರಾಸಾಯನಿಕ ಪ್ರಕ್ರಿಯೆಗಳನ್ನು ನಿರ್ಧರಿಸುತ್ತದೆ’ ಎಂದು ತಿಳಿಸಿದರು.</p>.<p>'ಮಣ್ಣು ಘನ, ದ್ರವ, ಅನಿಲ ರೂಪದ ವಸ್ತುಗಳಿಂದ ಕೂಡಿದೆ. ಲಕ್ಷಾಂತರ ನಿರ್ಜೀವಿ ಮತ್ತು ಸಜೀವಿಗಳನ್ನು ಒಳಗೊಂಡಿರುತ್ತವೆ. ಸಸ್ಯಗಳನ್ನು ಮಣ್ಣು ಪೋಷಿಸಿ, ರಕ್ಷಿಸುತ್ತದೆ. ಸಸ್ಯಗಳು ಮಣ್ಣಿನಲ್ಲಿರುವ ಇಡೀ ಜೀವಿಗಳನ್ನು ಪೋಷಿಸುತ್ತವೆ ’ ಎಂದು ಅವರು ಹೇಳಿದರು.</p>.<p>ವಿಜ್ಞಾನಿ ಡಾ.ಉಮೇಶ ಭರೀಕರ, ಮಣ್ಣಿನ ಕಣಗಳ ರಚನೆ, ಮಹತ್ವ, ಮಣ್ಣಿನ ಸಮರ್ಪಕ ಸದ್ಬಳಕೆ ಕುರಿತು ತಿಳಿಸಿ, ‘ಮಣ್ಣಿಗೆ ರಾಸಾಯನಿಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಮಹತ್ವ ಕೊಡಿ’ ಎಂದು ಸಲಹೆ ನೀಡಿದರು.</p>.<p>ಡಾ.ಗುರುಪ್ರಸಾದ್ ಮಾತನಾಡಿ, ‘ಮಣ್ಣಿನ ಆರೋಗ್ಯದ ಬಗ್ಗೆ ಗಮನ ಹರಿಸಲು ಮತ್ತು ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಸಲಹೆ ನೀಡುವ ಸಾಧನವಾಗಿಪ್ರತಿವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ’ ಎಂದು ತಿಳಿಸಿದರು.</p>.<p>ಡಾ.ಕೊಟ್ರೇಶ ಪ್ರಸಾದ ಅವರು ಮಣ್ಣಿನ ಸತ್ವ ಹಾಗೂ ಮಣ್ಣಿನಲ್ಲಿರುವ ಖನಿಜಗಳು ಹೇಗೆ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ವಿವರಿಸಿದರು ಮತ್ತು ವಿವಿಧ ಜಾನುವಾರುಗಳ ಬಗ್ಗೆ ತಿಳಿಸಿದರು.</p>.<p>ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ನ ಬೇಸಾಯ ಶಾಸ್ತ್ರಜ್ಞ ಶಿವಾನಂದ, ಮಣ್ಣಿನ ಪರೀಕ್ಷೆ ಮಾಡಿಸಿ ಪ್ರಾತ್ಯಕ್ಷಿತೆ ನೀಡಿದರು. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಹಾಗೂ ವಿವಿಧ ಪೋಷಕಾಂಶಗಳ ಕುರಿತು ಮಾತನಾಡಿದರು.</p>.<p>ಹನುಮಂತ, ಇಮ್ರಾನ್, ಅಮಾತೆಪ್ಪ, ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಿಬ್ಬಂದಿ ಹಾಗೂ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ರೈತರು ತಪ್ಪದೇ ತಮ್ಮ ಹೊಲದ ಮಣ್ಣು ಪರೀಕ್ಷೆ ಮಾಡಿಸಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ರಸ ಗೊಬ್ಬರಗಳನ್ನು ಹಾಕಬೇಕು. ಈ ಮೂಲಕ ಅಮೂಲ್ಯವಾದ ಮಣ್ಣು ಸಂಪತ್ತು ರಕ್ಷಿಸಬೇಕು’ ವಿಜ್ಞಾನಿ ಡಾ.ಅಮರೇಶ ವೈ.ಎಸ್. ಹೇಳಿದರು.</p>.<p>ತಾಲ್ಲೂಕಿನ ಕವಡಿಮಟ್ಟಿಯಲ್ಲಿ ಭಾನುವಾರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೋರಮಂಡಲ್ ಇಂಟರ್ನ್ಯಾಷನಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣಿನ ಆರೋಗ್ಯ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜೀವಂತ ಜೀವಿಗಳ ಈ ವೈವಿಧ್ಯಮಯ ಸಮುದಾಯವು ಮಣ್ಣನ್ನು ಆರೋಗ್ಯಕರವಾಗಿ ಮತ್ತು ಫಲವತ್ತಾಗಿರಿಸುತ್ತದೆ. ಈ ವಿಶಾಲ ಜಗತ್ತು ಮಣ್ಣಿನ ಜೀವ ವೈವಿಧ್ಯತೆಯನ್ನು ರೂಪಿಸುತ್ತದೆ. ಭೂಮಿಯ ಮೇಲೆ ಜೀವವನ್ನು ಸಾಧ್ಯವಾಗಿಸುವ ಮುಖ್ಯ ಜೈವಿಕ ರಾಸಾಯನಿಕ ಪ್ರಕ್ರಿಯೆಗಳನ್ನು ನಿರ್ಧರಿಸುತ್ತದೆ’ ಎಂದು ತಿಳಿಸಿದರು.</p>.<p>'ಮಣ್ಣು ಘನ, ದ್ರವ, ಅನಿಲ ರೂಪದ ವಸ್ತುಗಳಿಂದ ಕೂಡಿದೆ. ಲಕ್ಷಾಂತರ ನಿರ್ಜೀವಿ ಮತ್ತು ಸಜೀವಿಗಳನ್ನು ಒಳಗೊಂಡಿರುತ್ತವೆ. ಸಸ್ಯಗಳನ್ನು ಮಣ್ಣು ಪೋಷಿಸಿ, ರಕ್ಷಿಸುತ್ತದೆ. ಸಸ್ಯಗಳು ಮಣ್ಣಿನಲ್ಲಿರುವ ಇಡೀ ಜೀವಿಗಳನ್ನು ಪೋಷಿಸುತ್ತವೆ ’ ಎಂದು ಅವರು ಹೇಳಿದರು.</p>.<p>ವಿಜ್ಞಾನಿ ಡಾ.ಉಮೇಶ ಭರೀಕರ, ಮಣ್ಣಿನ ಕಣಗಳ ರಚನೆ, ಮಹತ್ವ, ಮಣ್ಣಿನ ಸಮರ್ಪಕ ಸದ್ಬಳಕೆ ಕುರಿತು ತಿಳಿಸಿ, ‘ಮಣ್ಣಿಗೆ ರಾಸಾಯನಿಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಮಹತ್ವ ಕೊಡಿ’ ಎಂದು ಸಲಹೆ ನೀಡಿದರು.</p>.<p>ಡಾ.ಗುರುಪ್ರಸಾದ್ ಮಾತನಾಡಿ, ‘ಮಣ್ಣಿನ ಆರೋಗ್ಯದ ಬಗ್ಗೆ ಗಮನ ಹರಿಸಲು ಮತ್ತು ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಸಲಹೆ ನೀಡುವ ಸಾಧನವಾಗಿಪ್ರತಿವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ’ ಎಂದು ತಿಳಿಸಿದರು.</p>.<p>ಡಾ.ಕೊಟ್ರೇಶ ಪ್ರಸಾದ ಅವರು ಮಣ್ಣಿನ ಸತ್ವ ಹಾಗೂ ಮಣ್ಣಿನಲ್ಲಿರುವ ಖನಿಜಗಳು ಹೇಗೆ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ವಿವರಿಸಿದರು ಮತ್ತು ವಿವಿಧ ಜಾನುವಾರುಗಳ ಬಗ್ಗೆ ತಿಳಿಸಿದರು.</p>.<p>ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ನ ಬೇಸಾಯ ಶಾಸ್ತ್ರಜ್ಞ ಶಿವಾನಂದ, ಮಣ್ಣಿನ ಪರೀಕ್ಷೆ ಮಾಡಿಸಿ ಪ್ರಾತ್ಯಕ್ಷಿತೆ ನೀಡಿದರು. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಹಾಗೂ ವಿವಿಧ ಪೋಷಕಾಂಶಗಳ ಕುರಿತು ಮಾತನಾಡಿದರು.</p>.<p>ಹನುಮಂತ, ಇಮ್ರಾನ್, ಅಮಾತೆಪ್ಪ, ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಿಬ್ಬಂದಿ ಹಾಗೂ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>