<p><strong>ಯರಗೋಳ</strong>: ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಮಧ್ಯ ರಾತ್ರಿ ಸುರಿದ ಮಳೆಯಿಂದಾಗಿ ಬಹುತೇಕ ಗ್ರಾಮಗಳ ಕೆರೆ, ಹಳ್ಳಗಳು ಮೈ ದುಂಬಿ ಹರಿಯುತ್ತಿವೆ.</p>.<p>ಯರಗೋಳ ಗ್ರಾಮದ ದೊಡ್ಡ ಕೆರೆಯು ಕಳೆದ ಒಂದು ತಿಂಗಳಲ್ಲಿ ಮೂರು ಸಲ ಭರ್ತಿಯಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ಕೆರೆಯ ಸುತ್ತಲಿನ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ದವಸ, ಧಾನ್ಯಗಳು ಹಾಳಾಗಿವೆ.</p>.<p>ಕೆರೆಯ ದಂಡೆ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದು. ಗ್ರಾಮ ಪಂಚಾಯತಿಯು ಕೆರೆ ಪ್ರದೇಶಕ್ಕೆ ಹೋಗಲು ನಿಷೇಧ ಹೇರಿದರು. ಯುವಕರು ಮೀನು ಹಿಡಿಯುವ, ಈಜು ಆಡುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೆ.</p>.<p>ಚಾಮುನಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿದು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದೆ.</p>.<p>ಕೋಟಗೇರಾ ಗ್ರಾಮದಲ್ಲಿ ಜೋರಾದ ಮಳೆಯಿಂದಾಗಿ ಗುಡ್ಡ ಪ್ರದೇಶದಲ್ಲಿ ಜಲಪಾತ ಪ್ರವಾಸಿಗರಿಗೆ ಕೈಬೀಸಿ ಕರೆಯುತ್ತಿದ್ದು. ಯಾದಗಿರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಎಂದು ಗ್ರಾಮದ ಯುವಕ ಜಾಫರ್ ತಿಳಿಸಿದ.</p>.<p>ಎಸ್.ಹೊಸಳ್ಳಿ ಮತ್ತು ಬೆಳಗೇರಾ ಗ್ರಾಮದ ನಡುವೆ ಸಂಪರ್ಕವು ಕಡಿತಗೊಂಡಿದೆ. ಹೊಲಗಳಲ್ಲಿ ನೀರು ನುಗ್ಗಿದ್ದು ಬೆಳೆ ನಾಶವಾಗಿದೆ. ರಸ್ತೆಗಳೆಲ್ಲ ಕೊಚ್ಚಿಕೊಂಡು ಹೋಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.</p>.<p>‘ಬಂದಳ್ಳಿ ಗ್ರಾಮದಲ್ಲಿ ಕೆರೆ ತುಂಬಿ ಹೆಚ್ಚುವರಿ ನೀರು ಗದ್ದೆಗಳಲ್ಲಿ ನುಗ್ಗಿದ್ದು ಭತ್ತದ ಬೆಳೆ ನೆಲಕ್ಕೆ ಉರುಳಿದೆ, ಕೂಡಲೇ ಜಿಲ್ಲಾಡಳಿತ ಭೇಟಿ ನೀಡಿ, ರೈತರಿಗೆ ತುರ್ತು ಪರಿಹಾರ ನೀಡಬೇಕು’ ಎಂದು ಗ್ರಾಮದ ರವಿ ಗೊಬೆನ್ನೂರ್ ಹೇಳಿದರು.</p>.<p>ಬಾಚವಾರ ಗ್ರಾಮದಿಂದ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ಸೇತುವೆಯು ಸಂಪೂರ್ಣ ಮುಳುಗಡೆಯಾಗಿದ್ದು ಗ್ರಾಮಸ್ಥರು ದಿನನಿತ್ಯದ ಕಾರ್ಯಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಹೊನಗೇರಾ ಗ್ರಾಮದ ನಡುವೆ ನೀರು ಹರಿಯುತ್ತಿದ್ದು ರೈತರಿಗೆ, ಜಾನುವಾರುಗಳಿಗೆ ತೊಂದರೆಯಾಗಿದೆ.</p>.<p>ಮೋಟ್ನಳ್ಳಿ, ಮಲ್ಕಪ್ನಳ್ಳಿ ,ಅಲ್ಲಿಪುರ, ಹೆಡಗಿಮದ್ರಾ, ಹತ್ತಿಕುಣಿ, ಸಮಣಾಪುರ, ಕ್ಯಾಸಪ್ಪನಳ್ಳಿ, ಕಾನಳ್ಳಿ, ಗುಲಗುಂಜಿ, ಅರಿಕೇರಾ ಬಿ. ಒರುಂಚ, ಠಾಣಗುಂದ ,ಮುದ್ನಾಳ ಅಬ್ಬೆತುಮಕೂರು. ಶಿವಪುರ, ಕಟ್ಟಿಗೆ ಶಹಾಪುರ ಗ್ರಾಮಗಳಲ್ಲಿ ಮಳೆಯಿಂದಾಗಿ ಹೊಲ, ಗದ್ದೆಗಳಲ್ಲಿ ನೀರು ಹರಿದು, ಭತ್ತ, ಹತ್ತಿ ಬೆಳೆ ನಾಶವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ</strong>: ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಮಧ್ಯ ರಾತ್ರಿ ಸುರಿದ ಮಳೆಯಿಂದಾಗಿ ಬಹುತೇಕ ಗ್ರಾಮಗಳ ಕೆರೆ, ಹಳ್ಳಗಳು ಮೈ ದುಂಬಿ ಹರಿಯುತ್ತಿವೆ.</p>.<p>ಯರಗೋಳ ಗ್ರಾಮದ ದೊಡ್ಡ ಕೆರೆಯು ಕಳೆದ ಒಂದು ತಿಂಗಳಲ್ಲಿ ಮೂರು ಸಲ ಭರ್ತಿಯಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ಕೆರೆಯ ಸುತ್ತಲಿನ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ದವಸ, ಧಾನ್ಯಗಳು ಹಾಳಾಗಿವೆ.</p>.<p>ಕೆರೆಯ ದಂಡೆ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದು. ಗ್ರಾಮ ಪಂಚಾಯತಿಯು ಕೆರೆ ಪ್ರದೇಶಕ್ಕೆ ಹೋಗಲು ನಿಷೇಧ ಹೇರಿದರು. ಯುವಕರು ಮೀನು ಹಿಡಿಯುವ, ಈಜು ಆಡುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೆ.</p>.<p>ಚಾಮುನಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿದು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದೆ.</p>.<p>ಕೋಟಗೇರಾ ಗ್ರಾಮದಲ್ಲಿ ಜೋರಾದ ಮಳೆಯಿಂದಾಗಿ ಗುಡ್ಡ ಪ್ರದೇಶದಲ್ಲಿ ಜಲಪಾತ ಪ್ರವಾಸಿಗರಿಗೆ ಕೈಬೀಸಿ ಕರೆಯುತ್ತಿದ್ದು. ಯಾದಗಿರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಎಂದು ಗ್ರಾಮದ ಯುವಕ ಜಾಫರ್ ತಿಳಿಸಿದ.</p>.<p>ಎಸ್.ಹೊಸಳ್ಳಿ ಮತ್ತು ಬೆಳಗೇರಾ ಗ್ರಾಮದ ನಡುವೆ ಸಂಪರ್ಕವು ಕಡಿತಗೊಂಡಿದೆ. ಹೊಲಗಳಲ್ಲಿ ನೀರು ನುಗ್ಗಿದ್ದು ಬೆಳೆ ನಾಶವಾಗಿದೆ. ರಸ್ತೆಗಳೆಲ್ಲ ಕೊಚ್ಚಿಕೊಂಡು ಹೋಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.</p>.<p>‘ಬಂದಳ್ಳಿ ಗ್ರಾಮದಲ್ಲಿ ಕೆರೆ ತುಂಬಿ ಹೆಚ್ಚುವರಿ ನೀರು ಗದ್ದೆಗಳಲ್ಲಿ ನುಗ್ಗಿದ್ದು ಭತ್ತದ ಬೆಳೆ ನೆಲಕ್ಕೆ ಉರುಳಿದೆ, ಕೂಡಲೇ ಜಿಲ್ಲಾಡಳಿತ ಭೇಟಿ ನೀಡಿ, ರೈತರಿಗೆ ತುರ್ತು ಪರಿಹಾರ ನೀಡಬೇಕು’ ಎಂದು ಗ್ರಾಮದ ರವಿ ಗೊಬೆನ್ನೂರ್ ಹೇಳಿದರು.</p>.<p>ಬಾಚವಾರ ಗ್ರಾಮದಿಂದ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ಸೇತುವೆಯು ಸಂಪೂರ್ಣ ಮುಳುಗಡೆಯಾಗಿದ್ದು ಗ್ರಾಮಸ್ಥರು ದಿನನಿತ್ಯದ ಕಾರ್ಯಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಹೊನಗೇರಾ ಗ್ರಾಮದ ನಡುವೆ ನೀರು ಹರಿಯುತ್ತಿದ್ದು ರೈತರಿಗೆ, ಜಾನುವಾರುಗಳಿಗೆ ತೊಂದರೆಯಾಗಿದೆ.</p>.<p>ಮೋಟ್ನಳ್ಳಿ, ಮಲ್ಕಪ್ನಳ್ಳಿ ,ಅಲ್ಲಿಪುರ, ಹೆಡಗಿಮದ್ರಾ, ಹತ್ತಿಕುಣಿ, ಸಮಣಾಪುರ, ಕ್ಯಾಸಪ್ಪನಳ್ಳಿ, ಕಾನಳ್ಳಿ, ಗುಲಗುಂಜಿ, ಅರಿಕೇರಾ ಬಿ. ಒರುಂಚ, ಠಾಣಗುಂದ ,ಮುದ್ನಾಳ ಅಬ್ಬೆತುಮಕೂರು. ಶಿವಪುರ, ಕಟ್ಟಿಗೆ ಶಹಾಪುರ ಗ್ರಾಮಗಳಲ್ಲಿ ಮಳೆಯಿಂದಾಗಿ ಹೊಲ, ಗದ್ದೆಗಳಲ್ಲಿ ನೀರು ಹರಿದು, ಭತ್ತ, ಹತ್ತಿ ಬೆಳೆ ನಾಶವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>