<p>ಶಿವಮೊಗ್ಗ: ದೂರಶಿಕ್ಷಣದಲ್ಲಿ ತಾಂತ್ರಿಕತೆಯ ಅಳವಡಿಕೆಯಿಂದ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಶಿಕ್ಷಣಾರ್ಥಿಗಳಿಗೆ ಪೂರೈಸಬಹುದು ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತವಿಶ್ವವಿದ್ಯಾಲಯ (ಇಗ್ನೋ)ದ ಪ್ರಾಧ್ಯಾಪಕಿ ಪ್ರೊ. ಮಂಜುಳಿಕಾ ಶ್ರೀವಾತ್ಸವ ಅಭಿಪ್ರಾಯಪಟ್ಟರು.<br /> <br /> ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ನಿರ್ದೇಶನಾಲಯ ಹಮ್ಮಿಕೊಂಡ ಸ್ವಯಂ ಕಲಿಕಾ ಮತ್ತು ಅಧ್ಯಯನ ಸಾಮಗ್ರಿ ಸಿದ್ಧತೆ ಕುರಿತ ಎರಡು ದಿನದ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> ದೂರಶಿಕ್ಷಣ, ಕಲಿಕಾರ್ಥಿಗಳಲ್ಲಿ ಯೋಚನಾಶಕ್ತಿಯನ್ನು ಬೆಳಸಲಿದೆ. ಹಾಗಾಗಿಯೇ ದೂರಶಿಕ್ಷಣಕ್ಕೆ ಪ್ರಾಮುಖ್ಯತೆ ಹೆಚ್ಚಾಗಿದೆ. ತಾಂತ್ರಿಕತೆಯ ಬಳಕೆಯಿಂದ ದೂರಶಿಕ್ಷಣದ ಗುಣಮಟ್ಟ ಹಾಗೂ ವ್ಯಾಪ್ತಿಯನ್ನು ವಿಸ್ತರಿಸಬಹುದಾಗಿದೆ ಎಂದರು.<br /> <br /> ಕೇಂದ್ರ ಸರಕಾರ 2012ರ ಅಂತ್ಯದ ವೇಳೆಗೆ ದೂರಶಿಕ್ಷಣದ ವ್ಯಾಪ್ತಿಯನ್ನು ಶೇ. 15 ಹಾಗೂ ಮುಂದಿನ ಪಂಚವಾರ್ಷಿಕ ಯೋಜನೆ ವೇಳೆಗೆ ಶೇ. 20ರಷ್ಟು ವಿಸ್ತರಿಸುವ ಯೋಜನೆ ಹೊಂದಿದೆ ಎಂದರು.<br /> <br /> ಇಗ್ನೋದ ಪ್ರಾಧ್ಯಾಪಕ ಪ್ರೊ.ಸ್ವರಾಜ್ ಬಸು ಮಾತನಾಡಿ, ದೂರಶಿಕ್ಷಣದ ಮೂಲಕ ಪೂರೈಸಲಾಗುವ ಕಲಿಕಾ ಸಾಮಗ್ರಿಗಳು ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳೂ ಬಳಸುವಂತೆ ಆಗಬೇಕು. ಇದರಿಂದ ಜ್ಞಾನವನ್ನು ಹಂಚಿಕೊಂಡಂತೆ ಆಗುತ್ತದೆ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ. ಕೃಷ್ಣಪ್ಪ, ಯುಜಿಸಿಯ ಆಶಯದಂತೆ ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದಲ್ಲಿ ಕಲಿಕಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರಾರಂಭದಿಂದಲೂ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ತಾಂತ್ರಿಕತೆಯ ಬಳಕೆಯನ್ನೂ ಮಾಡಿಕೊಳ್ಳಲಾಗಿದೆ ಎಂದರು.<br /> <br /> ಇಗ್ನೋ ಪ್ರಾಧ್ಯಾಪಕ ಪ್ರೊ.ಪಿ.ಕೆ. ಬಿಸ್ವಾಸ್ ಉಪಸ್ಥಿತರಿದ್ದರು. ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶಕ ಪ್ರೊ.ಎಂ. ವೆಂಕಟೇಶ್ವರಲು ಪ್ರಾಸ್ತಾವಿಕ ಮಾತನಾಡಿದರು. ವಿಶೇಷಾಧಿಕಾರಿ ಡಾ.ಎ. ಮೋಹನ್ರಾಮ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ದೂರಶಿಕ್ಷಣದಲ್ಲಿ ತಾಂತ್ರಿಕತೆಯ ಅಳವಡಿಕೆಯಿಂದ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಶಿಕ್ಷಣಾರ್ಥಿಗಳಿಗೆ ಪೂರೈಸಬಹುದು ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತವಿಶ್ವವಿದ್ಯಾಲಯ (ಇಗ್ನೋ)ದ ಪ್ರಾಧ್ಯಾಪಕಿ ಪ್ರೊ. ಮಂಜುಳಿಕಾ ಶ್ರೀವಾತ್ಸವ ಅಭಿಪ್ರಾಯಪಟ್ಟರು.<br /> <br /> ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ನಿರ್ದೇಶನಾಲಯ ಹಮ್ಮಿಕೊಂಡ ಸ್ವಯಂ ಕಲಿಕಾ ಮತ್ತು ಅಧ್ಯಯನ ಸಾಮಗ್ರಿ ಸಿದ್ಧತೆ ಕುರಿತ ಎರಡು ದಿನದ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> ದೂರಶಿಕ್ಷಣ, ಕಲಿಕಾರ್ಥಿಗಳಲ್ಲಿ ಯೋಚನಾಶಕ್ತಿಯನ್ನು ಬೆಳಸಲಿದೆ. ಹಾಗಾಗಿಯೇ ದೂರಶಿಕ್ಷಣಕ್ಕೆ ಪ್ರಾಮುಖ್ಯತೆ ಹೆಚ್ಚಾಗಿದೆ. ತಾಂತ್ರಿಕತೆಯ ಬಳಕೆಯಿಂದ ದೂರಶಿಕ್ಷಣದ ಗುಣಮಟ್ಟ ಹಾಗೂ ವ್ಯಾಪ್ತಿಯನ್ನು ವಿಸ್ತರಿಸಬಹುದಾಗಿದೆ ಎಂದರು.<br /> <br /> ಕೇಂದ್ರ ಸರಕಾರ 2012ರ ಅಂತ್ಯದ ವೇಳೆಗೆ ದೂರಶಿಕ್ಷಣದ ವ್ಯಾಪ್ತಿಯನ್ನು ಶೇ. 15 ಹಾಗೂ ಮುಂದಿನ ಪಂಚವಾರ್ಷಿಕ ಯೋಜನೆ ವೇಳೆಗೆ ಶೇ. 20ರಷ್ಟು ವಿಸ್ತರಿಸುವ ಯೋಜನೆ ಹೊಂದಿದೆ ಎಂದರು.<br /> <br /> ಇಗ್ನೋದ ಪ್ರಾಧ್ಯಾಪಕ ಪ್ರೊ.ಸ್ವರಾಜ್ ಬಸು ಮಾತನಾಡಿ, ದೂರಶಿಕ್ಷಣದ ಮೂಲಕ ಪೂರೈಸಲಾಗುವ ಕಲಿಕಾ ಸಾಮಗ್ರಿಗಳು ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳೂ ಬಳಸುವಂತೆ ಆಗಬೇಕು. ಇದರಿಂದ ಜ್ಞಾನವನ್ನು ಹಂಚಿಕೊಂಡಂತೆ ಆಗುತ್ತದೆ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ. ಕೃಷ್ಣಪ್ಪ, ಯುಜಿಸಿಯ ಆಶಯದಂತೆ ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದಲ್ಲಿ ಕಲಿಕಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರಾರಂಭದಿಂದಲೂ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ತಾಂತ್ರಿಕತೆಯ ಬಳಕೆಯನ್ನೂ ಮಾಡಿಕೊಳ್ಳಲಾಗಿದೆ ಎಂದರು.<br /> <br /> ಇಗ್ನೋ ಪ್ರಾಧ್ಯಾಪಕ ಪ್ರೊ.ಪಿ.ಕೆ. ಬಿಸ್ವಾಸ್ ಉಪಸ್ಥಿತರಿದ್ದರು. ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶಕ ಪ್ರೊ.ಎಂ. ವೆಂಕಟೇಶ್ವರಲು ಪ್ರಾಸ್ತಾವಿಕ ಮಾತನಾಡಿದರು. ವಿಶೇಷಾಧಿಕಾರಿ ಡಾ.ಎ. ಮೋಹನ್ರಾಮ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>