<p>ಡಣಕ ಡಣ್... ಡಡ್ಡಣಕ ಡಣ್... ಬಿಲ್ಲಿನಂತೆ ಮೈ ಬಾಗಿಸಿ, ಹೊಟ್ಟೆಯ ಮೇಲೆ, ಡೊಳ್ಳಿನ ಭಾರ ಹೊತ್ತು, ಅಷ್ಟೂ ಭಾರವನ್ನು ಕಾಲುಗಳ ಮೇಲೆ ಹೇರಿ, ಡೊಳ್ಳು ನುಡಿಸುತ್ತಿದ್ದರೆ ಕೇಳುಗರ ನರನಾಡಿಗಳಲ್ಲೆಲ್ಲ ಹೊಸ ಸಂಚಲನ. ಡೊಳ್ಳಿಗಿರುವ ಮಾಂತ್ರಿಕ ಶಕ್ತಿಯೇ ಅಂಥದ್ದು.</p>.<p>ಇನ್ನು ಹುಲಿರಾಯನ ವೇಷಧರಿಸಿ, ಹುಲಿಗಳಂತೆಯೇ ಹೆಜ್ಜೆ ಹಾಕುತ್ತಾ, ಕಣ್ಣು ಕೆಂಪಾಗಿಸಿ, ಮುಂಗೈ ಹಿಗ್ಗಲಿಸಿ, ಹುಲಿಯಂತೆ ಹೆಜ್ಜೆ ಹಾಕುತ್ತಿದ್ದರೆ ರೌದ್ರದರ್ಶನ ಈ ಹೆಜ್ಜೆಗಳಲ್ಲಿ ಕಾಣುತ್ತದೆ.ದೇಹದ ಮೇಲಿನ ಪಟ್ಟೆಗಳಿಂದಲೇ ಶೌರ್ಯರಸ ಹೊರ ಉಕ್ಕುವಂತಿರುತ್ತದೆ. ಈ ಎರಡೂ ಕಲೆಗಳನ್ನು ಪ್ರದರ್ಶಿಸುತ್ತಲೇ ಕಲೆಗಾರಿಕೆ ಮುಂದುವರಿಯಲು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಯುವ ಕಲಾವಿದರೊಬ್ಬರಿದ್ದಾರೆ.</p>.<p> ಕಳೆದ ಮೂರು ವರ್ಷಗಳಿಂದ ಕೆಪಿಎಲ್ನಲ್ಲಿ ಡೊಳ್ಳು ಕುಣಿತದ ‘ಡೊಳ್ಳು ಚಂದ್ರು ಶ್ರೀನಿವಾಸ್’ ತಂಡ ಸದ್ದು ಮಾಡತ್ತಿದೆ. ಈ ತಂಡದ ನಾಯಕರಾಗಿರುವ ಎ.ಎಸ್. ಚಂದ್ರಕುಮಾರ್ ಅವರು ‘ಡೊಳ್ಳು ಚಂದ್ರ’ ಎಂದೇ ಫೇಮಸ್.</p>.<p>ಡೊಳ್ಳು ಕುಣಿತದಲ್ಲಿ ನಾಲ್ಕು ಬಾರಿ ಬೆಂಗಳೂರು ವಿಶ್ವವಿದ್ಯಾಲಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿರುವ ಅವರು, 2016ರಲ್ಲಿ ಎನ್ಎಸ್ಎಸ್ನ ರಾಜ್ಯ ಪ್ರಸ್ತಿಯನ್ನು ಪಡೆದಿದ್ದಾರೆ.</p>.<p>ಡೊಳ್ಳು ಕುಣಿತದ ಜೊತೆಗೆ ಹುಲಿವೇಷ, ಕಂಸಾಳೆ, ಬೇಡರ ವೇಷ ಮತ್ತು ಸೋಮನ ಕುಣಿತದಂಥ ಜನಪದ ನೃತ್ಯಗಳಲ್ಲಿ ಇವರ ತಂಡ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ‘ದೊಡ್ಮನೆ ಹುಡುಗ’ ಸಿನಿಮಾದಲ್ಲಿಯೂ ಈ ತಂಡ ಮಿಂಚಿದೆ. ವಿಶೇಷವೆಂದರೆ ಈ ತಂಡದ ಹಲವು ಯುವಕರು ಜನಪದ ಕುಣಿತಗಳೊಂದಿಗೆ ವಿದ್ಯಾಭ್ಯಾಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಚಂದ್ರ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಇಡಿ ಪದವಿ ಪಡೆದಿದ್ದಾರೆ.</p>.<p>ಬಿಡುವಿನಲ್ಲಿ ಸರ್ಕಾರಿ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿವಿಧ ಜಾನಪದ ಕಲೆಗಳನ್ನು ಇವರು ಕಲಿಸಿಕೊಡುತ್ತಿದ್ದಾರೆ. ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೂ ತರಬೇತಿ ನೀಡಿದ್ದಾರೆ.</p>.<p>ಡೊಳ್ಳು ಕುಣಿತದ ಜೊತೆಗೆ ಹುಲಿವೇಷಕ್ಕೂ ಚಂದ್ರ ಅವರು ಪ್ರಖ್ಯಾತಿಗಳಿಸಿದ್ದಾರೆ. ‘ಹುಲಿ ವೇಷದ ಮಜವೇ ಬೇರೆ. ಜನ ನಮ್ಮನ್ನು ಅಚ್ಚರಿಯ ಕಣ್ಣುಗಳಿಂದ ನೋಡುವಾಗ ಖುಷಿಯಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.</p>.<p>‘ನನ್ನ ತಂದೆಯೇ ನನ್ನ ಗುರು. ಅವರೇ ನನಗೆ ಪ್ರೇರಣೆ. ಐದನೇ ತರಗತಿಯಲ್ಲಿದ್ದಾಗಲೇ ಡೊಳ್ಳು ಕುಣಿತದ ಮೇಲೆ ಆಸಕ್ತಿ ಮೂಡಿತ್ತು. ಈಗ ನಾನೇ ಒಂದು ತಂಡ ಕಟ್ಟಿಕೊಂಡಿದ್ದೇನೆ’ ಎಂದು ಅವರ ಕಲಿಕಾ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.</p>.<p>‘ನಾನು ಬಡತನದಲ್ಲಿಯೇ ಬೆಳೆದವನು. ಹೀಗಾಗಿಯೇ ಸರ್ಕಾರಿ ಕಾಲೇಜುಗಳಲ್ಲಿ ಜಾನಪದ ಕಲೆಗಳನ್ನು ಉಚಿತವಾಗಿ ಹೇಳಿಕೊಡುತ್ತಿದ್ದೇನೆ’ ಎನ್ನುತ್ತಾರೆ ಅವರು.</p>.<p>ಸಂಪರ್ಕಕ್ಕೆ: 9731345838⇒v</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಣಕ ಡಣ್... ಡಡ್ಡಣಕ ಡಣ್... ಬಿಲ್ಲಿನಂತೆ ಮೈ ಬಾಗಿಸಿ, ಹೊಟ್ಟೆಯ ಮೇಲೆ, ಡೊಳ್ಳಿನ ಭಾರ ಹೊತ್ತು, ಅಷ್ಟೂ ಭಾರವನ್ನು ಕಾಲುಗಳ ಮೇಲೆ ಹೇರಿ, ಡೊಳ್ಳು ನುಡಿಸುತ್ತಿದ್ದರೆ ಕೇಳುಗರ ನರನಾಡಿಗಳಲ್ಲೆಲ್ಲ ಹೊಸ ಸಂಚಲನ. ಡೊಳ್ಳಿಗಿರುವ ಮಾಂತ್ರಿಕ ಶಕ್ತಿಯೇ ಅಂಥದ್ದು.</p>.<p>ಇನ್ನು ಹುಲಿರಾಯನ ವೇಷಧರಿಸಿ, ಹುಲಿಗಳಂತೆಯೇ ಹೆಜ್ಜೆ ಹಾಕುತ್ತಾ, ಕಣ್ಣು ಕೆಂಪಾಗಿಸಿ, ಮುಂಗೈ ಹಿಗ್ಗಲಿಸಿ, ಹುಲಿಯಂತೆ ಹೆಜ್ಜೆ ಹಾಕುತ್ತಿದ್ದರೆ ರೌದ್ರದರ್ಶನ ಈ ಹೆಜ್ಜೆಗಳಲ್ಲಿ ಕಾಣುತ್ತದೆ.ದೇಹದ ಮೇಲಿನ ಪಟ್ಟೆಗಳಿಂದಲೇ ಶೌರ್ಯರಸ ಹೊರ ಉಕ್ಕುವಂತಿರುತ್ತದೆ. ಈ ಎರಡೂ ಕಲೆಗಳನ್ನು ಪ್ರದರ್ಶಿಸುತ್ತಲೇ ಕಲೆಗಾರಿಕೆ ಮುಂದುವರಿಯಲು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಯುವ ಕಲಾವಿದರೊಬ್ಬರಿದ್ದಾರೆ.</p>.<p> ಕಳೆದ ಮೂರು ವರ್ಷಗಳಿಂದ ಕೆಪಿಎಲ್ನಲ್ಲಿ ಡೊಳ್ಳು ಕುಣಿತದ ‘ಡೊಳ್ಳು ಚಂದ್ರು ಶ್ರೀನಿವಾಸ್’ ತಂಡ ಸದ್ದು ಮಾಡತ್ತಿದೆ. ಈ ತಂಡದ ನಾಯಕರಾಗಿರುವ ಎ.ಎಸ್. ಚಂದ್ರಕುಮಾರ್ ಅವರು ‘ಡೊಳ್ಳು ಚಂದ್ರ’ ಎಂದೇ ಫೇಮಸ್.</p>.<p>ಡೊಳ್ಳು ಕುಣಿತದಲ್ಲಿ ನಾಲ್ಕು ಬಾರಿ ಬೆಂಗಳೂರು ವಿಶ್ವವಿದ್ಯಾಲಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿರುವ ಅವರು, 2016ರಲ್ಲಿ ಎನ್ಎಸ್ಎಸ್ನ ರಾಜ್ಯ ಪ್ರಸ್ತಿಯನ್ನು ಪಡೆದಿದ್ದಾರೆ.</p>.<p>ಡೊಳ್ಳು ಕುಣಿತದ ಜೊತೆಗೆ ಹುಲಿವೇಷ, ಕಂಸಾಳೆ, ಬೇಡರ ವೇಷ ಮತ್ತು ಸೋಮನ ಕುಣಿತದಂಥ ಜನಪದ ನೃತ್ಯಗಳಲ್ಲಿ ಇವರ ತಂಡ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ‘ದೊಡ್ಮನೆ ಹುಡುಗ’ ಸಿನಿಮಾದಲ್ಲಿಯೂ ಈ ತಂಡ ಮಿಂಚಿದೆ. ವಿಶೇಷವೆಂದರೆ ಈ ತಂಡದ ಹಲವು ಯುವಕರು ಜನಪದ ಕುಣಿತಗಳೊಂದಿಗೆ ವಿದ್ಯಾಭ್ಯಾಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಚಂದ್ರ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಇಡಿ ಪದವಿ ಪಡೆದಿದ್ದಾರೆ.</p>.<p>ಬಿಡುವಿನಲ್ಲಿ ಸರ್ಕಾರಿ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿವಿಧ ಜಾನಪದ ಕಲೆಗಳನ್ನು ಇವರು ಕಲಿಸಿಕೊಡುತ್ತಿದ್ದಾರೆ. ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೂ ತರಬೇತಿ ನೀಡಿದ್ದಾರೆ.</p>.<p>ಡೊಳ್ಳು ಕುಣಿತದ ಜೊತೆಗೆ ಹುಲಿವೇಷಕ್ಕೂ ಚಂದ್ರ ಅವರು ಪ್ರಖ್ಯಾತಿಗಳಿಸಿದ್ದಾರೆ. ‘ಹುಲಿ ವೇಷದ ಮಜವೇ ಬೇರೆ. ಜನ ನಮ್ಮನ್ನು ಅಚ್ಚರಿಯ ಕಣ್ಣುಗಳಿಂದ ನೋಡುವಾಗ ಖುಷಿಯಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.</p>.<p>‘ನನ್ನ ತಂದೆಯೇ ನನ್ನ ಗುರು. ಅವರೇ ನನಗೆ ಪ್ರೇರಣೆ. ಐದನೇ ತರಗತಿಯಲ್ಲಿದ್ದಾಗಲೇ ಡೊಳ್ಳು ಕುಣಿತದ ಮೇಲೆ ಆಸಕ್ತಿ ಮೂಡಿತ್ತು. ಈಗ ನಾನೇ ಒಂದು ತಂಡ ಕಟ್ಟಿಕೊಂಡಿದ್ದೇನೆ’ ಎಂದು ಅವರ ಕಲಿಕಾ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.</p>.<p>‘ನಾನು ಬಡತನದಲ್ಲಿಯೇ ಬೆಳೆದವನು. ಹೀಗಾಗಿಯೇ ಸರ್ಕಾರಿ ಕಾಲೇಜುಗಳಲ್ಲಿ ಜಾನಪದ ಕಲೆಗಳನ್ನು ಉಚಿತವಾಗಿ ಹೇಳಿಕೊಡುತ್ತಿದ್ದೇನೆ’ ಎನ್ನುತ್ತಾರೆ ಅವರು.</p>.<p>ಸಂಪರ್ಕಕ್ಕೆ: 9731345838⇒v</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>