‘ಗಾಳಿ, ಮೋಡ, ಮಣ್ಣು, ನೀರು, ಸೂರ್ಯನ ಬಗ್ಗೆ ತಿಳಿಸುವ ಭೂಗೋಳ ಅಥವಾ ಭೂವಿಜ್ಞಾನವನ್ನು ಕಲಾ ವಿಭಾಗದವರು ಮಾತ್ರವಲ್ಲದೆ, ವಿಜ್ಞಾನ, ವಾಣಿಜ್ಯ ನಿಕಾಯದ ವಿದ್ಯಾರ್ಥಿಗಳು ಕಲಿಯುವ ಅವಶ್ಯಕತೆ ಇದೆ. ಭೌಗೋಳಿಕ ತಿಳಿವಳಿಕೆ ಇಲ್ಲದೆ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುವುದೇ ಇಲ್ಲ’ ಎಂದು ಯುಜಿಐಟಿ ಮುಖ್ಯಕಾರ್ಯದರ್ಶಿ ಮತ್ತು ನೂತನ ಶಿಕ್ಷಣ ನೀತಿ ಪಠ್ಯಕ್ರಮ ಸಮಿತಿಯ ಅಧ್ಯಕ್ಷ ಡಾ.ಅಶೋಕ ಹಂಜಗಿ ‘ಪ್ರಜಾವಾಣಿ’ಗೆ ತಿಳಿಸಿದರು.