<p>ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಯೋಜನೆಗಳು ಇನ್ನಷ್ಟು ಸಾಧನೆ ಮಾಡಲು ಅವರನ್ನು ಉತ್ತೇಜಿಸುತ್ತಿವೆ. ಆರ್ಥಿಕ ಸಂಕಷ್ಟ ಎದುರಿಸುವ ಗ್ರಾಮೀಣ ಭಾಗದ ಬಡ ಕುಟುಂಬಗಳ ಹಲವು ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ ಮರುಪಾವತಿ, ನಗದು ಬಹುಮಾನದ ಕೊಡುಗೆಗಳು ವರದಾನವಾಗಿವೆ. ಈ ಅಭಿಪ್ರಾಯಗಳು ಕ್ರೀಡಾಪಟುಗಳ ಮಾತಿನಲ್ಲಿ ವ್ಯಕ್ತವಾಗಿವೆ.</p>.<p>ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ಸೈಕ್ಲಿಂಗ್ ಪಟು ರೇಣುಕಾ ದಂಡಿನ ಅವರಿಗೆ 2014ರಲ್ಲಿ ರಾಜ್ಯ ಸರ್ಕಾರ ₹ 1 ಲಕ್ಷ ಪ್ರೋತ್ಸಾಹ ನೀಡಿತ್ತು. ಸೈಕ್ಲಿಂಗ್ಗಾಗಿ ಸೈಕಲ್ ಕೂಡ ನೀಡಲಾಗಿತ್ತು.ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿರುವ ಅವರು, ಪದವಿ ಮುಗಿಸಿದ್ದು, ಸೈಕ್ಲಿಂಗ್ ಕೋಚ್ ಆಗುವ ಹಂಬಲದಲ್ಲಿದ್ದಾರೆ.</p>.<p>ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪದವಿ ಮಾಡುವ ಸಂದರ್ಭದಲ್ಲಿ ಶಿಕ್ಷಣ ಶುಲ್ಕ ಮರುಪಾವತಿಯ ಸೌಲಭ್ಯ ಪಡೆದವರು ಬೆಂಗಳೂರಿನ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್. ರಾಜ್ಯ ಸರ್ಕಾರ ಉದ್ಯೋಗ ನೀಡುವುದರ ಮೂಲಕವೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಿ ಎನ್ನುತ್ತಾರೆ ಅವರು.</p>.<p>ನಿರಂಜನ್ ಅವರು ಇತ್ತೀಚೆಗೆ ಕ್ರೊವೇಷ್ಯಾದಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದುಈ ವರ್ಷ ನಡೆಯಲಿರುವ ವಿಶ್ವ ಪ್ಯಾರಾ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.</p>.<p>ಬಾಗಲಕೋಟೆ ಜಿಲ್ಲೆಯ ಅಮರಾವತಿಯ ಸೈಕ್ಲಿಂಗ್ ಪಟು ಸಂಪತ್ ಪಾಸಮೇಲ್ ಅವರಿಗೆ ಖೇಲೊ ಇಂಡಿಯಾ ಯೋಜನೆಯಡಿ ತಿಂಗಳಿಗೆ ₹ 10 ಸಾವಿರ ಪ್ರೋತ್ಸಾಹಧನ ಸಿಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಕೈಸೇರಿಲ್ಲ. ತಾಯಿ ಟೇಲರಿಂಗ್ ವೃತ್ತಿ ಮಾಡುತ್ತಾರೆ. ಪ್ರೋತ್ಸಾಹಧನವು ತನ್ನ ಓದಿಗೆ, ಕ್ರೀಡಾ ಸಲಕರಣೆಗಳ ಖರೀದಿಗೆ ವಿನಿಯೋಗವಾಗುತ್ತಿತ್ತು ಎನ್ನುತ್ತಾರೆ ಅವರು.</p>.<p>ಸದ್ಯ ಡಿಪ್ಲೊಮಾ ಓದುತ್ತಿರುವ ಸಂಪತ್, 2018ರ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 2021ರಲ್ಲಿ ಹೈದರಾಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಚಿನ್ನ ಅವರ ಮುಡಿಗೇರಿತ್ತು.</p>.<p>ನಡಿಗೆ ಸ್ಪರ್ಧಿ, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ತಟ್ಟಿಗೇರಿಯ ವಿಜಯಲಕ್ಷ್ಮಿ ಅವರಿಗೆ 2019ರ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹಧನವಾಗಿ ₹ 1 ಲಕ್ಷ ನೀಡಿದೆ. ಅದರಲ್ಲಿ ಅರ್ಧದಷ್ಟು ಹಣದಲ್ಲಿ ಕ್ರೀಡಾ ಪರಿಕರಗಳ ಖರೀದಿಸಿದ ಅವರು, ವ್ಯವಸಾಯದ ಖರ್ಚಿಗೆಂದು ತಂದೆಯ ಕೈಗೆ ಒಪ್ಪಿಸಿದರು. ಶುಲ್ಕ ಮರುಪಾವತಿ ಸೌಲಭ್ಯ; ಕಾಲೇಜಿನಿಂದಲೂ ನೆರವು ಸಿಕ್ಕಿದೆ‘ ಎನ್ನುತ್ತಾರೆ ಅವರು.</p>.<p>ಬಿಎಸ್ಸಿ ಓದುತ್ತಿರುವ ವಿಜಯಲಕ್ಷ್ಮಿ, 2019ರಲ್ಲಿ ರಾಜ್ಯಮಟ್ಟದ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು.</p>.<p>ಏಕಲವ್ಯ ಪ್ರಶಸ್ತಿ ಪುರಸ್ಕೃತ ಸೈಕ್ಲಿಂಗ್ ಪಟು ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ವೆಂಕಪ್ಪ ಕೆಂಗಲಗುತ್ತಿ. ಅವರಿಗೆ ರಾಜ್ಯ ಸರ್ಕಾರ 2019–20ನೇ ಸಾಲಿನಲ್ಲಿ ₹ 70 ಸಾವಿರ ನಗದು ಪುರಸ್ಕಾರ ನೀಡಿತ್ತು. ಕ್ರೀಡಾ ಸಲಕರಣೆಗಳ ಖರೀದಿಗೆ ಇದನ್ನು ಬಳಸಿಕೊಂಡೆ ಎನ್ನುವ ಅವರು, ಸದ್ಯ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾರೆ.</p>.<p><strong>(ಮುಂದಿನ ವಾರ: ಖಾಸಗಿ ಸಂಸ್ಥೆಗಳಿಂದ ಕ್ರೀಡಾ ವಿದ್ಯಾರ್ಥಿವೇತನ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಯೋಜನೆಗಳು ಇನ್ನಷ್ಟು ಸಾಧನೆ ಮಾಡಲು ಅವರನ್ನು ಉತ್ತೇಜಿಸುತ್ತಿವೆ. ಆರ್ಥಿಕ ಸಂಕಷ್ಟ ಎದುರಿಸುವ ಗ್ರಾಮೀಣ ಭಾಗದ ಬಡ ಕುಟುಂಬಗಳ ಹಲವು ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ ಮರುಪಾವತಿ, ನಗದು ಬಹುಮಾನದ ಕೊಡುಗೆಗಳು ವರದಾನವಾಗಿವೆ. ಈ ಅಭಿಪ್ರಾಯಗಳು ಕ್ರೀಡಾಪಟುಗಳ ಮಾತಿನಲ್ಲಿ ವ್ಯಕ್ತವಾಗಿವೆ.</p>.<p>ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ಸೈಕ್ಲಿಂಗ್ ಪಟು ರೇಣುಕಾ ದಂಡಿನ ಅವರಿಗೆ 2014ರಲ್ಲಿ ರಾಜ್ಯ ಸರ್ಕಾರ ₹ 1 ಲಕ್ಷ ಪ್ರೋತ್ಸಾಹ ನೀಡಿತ್ತು. ಸೈಕ್ಲಿಂಗ್ಗಾಗಿ ಸೈಕಲ್ ಕೂಡ ನೀಡಲಾಗಿತ್ತು.ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿರುವ ಅವರು, ಪದವಿ ಮುಗಿಸಿದ್ದು, ಸೈಕ್ಲಿಂಗ್ ಕೋಚ್ ಆಗುವ ಹಂಬಲದಲ್ಲಿದ್ದಾರೆ.</p>.<p>ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪದವಿ ಮಾಡುವ ಸಂದರ್ಭದಲ್ಲಿ ಶಿಕ್ಷಣ ಶುಲ್ಕ ಮರುಪಾವತಿಯ ಸೌಲಭ್ಯ ಪಡೆದವರು ಬೆಂಗಳೂರಿನ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್. ರಾಜ್ಯ ಸರ್ಕಾರ ಉದ್ಯೋಗ ನೀಡುವುದರ ಮೂಲಕವೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಿ ಎನ್ನುತ್ತಾರೆ ಅವರು.</p>.<p>ನಿರಂಜನ್ ಅವರು ಇತ್ತೀಚೆಗೆ ಕ್ರೊವೇಷ್ಯಾದಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದುಈ ವರ್ಷ ನಡೆಯಲಿರುವ ವಿಶ್ವ ಪ್ಯಾರಾ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.</p>.<p>ಬಾಗಲಕೋಟೆ ಜಿಲ್ಲೆಯ ಅಮರಾವತಿಯ ಸೈಕ್ಲಿಂಗ್ ಪಟು ಸಂಪತ್ ಪಾಸಮೇಲ್ ಅವರಿಗೆ ಖೇಲೊ ಇಂಡಿಯಾ ಯೋಜನೆಯಡಿ ತಿಂಗಳಿಗೆ ₹ 10 ಸಾವಿರ ಪ್ರೋತ್ಸಾಹಧನ ಸಿಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಕೈಸೇರಿಲ್ಲ. ತಾಯಿ ಟೇಲರಿಂಗ್ ವೃತ್ತಿ ಮಾಡುತ್ತಾರೆ. ಪ್ರೋತ್ಸಾಹಧನವು ತನ್ನ ಓದಿಗೆ, ಕ್ರೀಡಾ ಸಲಕರಣೆಗಳ ಖರೀದಿಗೆ ವಿನಿಯೋಗವಾಗುತ್ತಿತ್ತು ಎನ್ನುತ್ತಾರೆ ಅವರು.</p>.<p>ಸದ್ಯ ಡಿಪ್ಲೊಮಾ ಓದುತ್ತಿರುವ ಸಂಪತ್, 2018ರ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 2021ರಲ್ಲಿ ಹೈದರಾಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಚಿನ್ನ ಅವರ ಮುಡಿಗೇರಿತ್ತು.</p>.<p>ನಡಿಗೆ ಸ್ಪರ್ಧಿ, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ತಟ್ಟಿಗೇರಿಯ ವಿಜಯಲಕ್ಷ್ಮಿ ಅವರಿಗೆ 2019ರ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹಧನವಾಗಿ ₹ 1 ಲಕ್ಷ ನೀಡಿದೆ. ಅದರಲ್ಲಿ ಅರ್ಧದಷ್ಟು ಹಣದಲ್ಲಿ ಕ್ರೀಡಾ ಪರಿಕರಗಳ ಖರೀದಿಸಿದ ಅವರು, ವ್ಯವಸಾಯದ ಖರ್ಚಿಗೆಂದು ತಂದೆಯ ಕೈಗೆ ಒಪ್ಪಿಸಿದರು. ಶುಲ್ಕ ಮರುಪಾವತಿ ಸೌಲಭ್ಯ; ಕಾಲೇಜಿನಿಂದಲೂ ನೆರವು ಸಿಕ್ಕಿದೆ‘ ಎನ್ನುತ್ತಾರೆ ಅವರು.</p>.<p>ಬಿಎಸ್ಸಿ ಓದುತ್ತಿರುವ ವಿಜಯಲಕ್ಷ್ಮಿ, 2019ರಲ್ಲಿ ರಾಜ್ಯಮಟ್ಟದ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು.</p>.<p>ಏಕಲವ್ಯ ಪ್ರಶಸ್ತಿ ಪುರಸ್ಕೃತ ಸೈಕ್ಲಿಂಗ್ ಪಟು ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ವೆಂಕಪ್ಪ ಕೆಂಗಲಗುತ್ತಿ. ಅವರಿಗೆ ರಾಜ್ಯ ಸರ್ಕಾರ 2019–20ನೇ ಸಾಲಿನಲ್ಲಿ ₹ 70 ಸಾವಿರ ನಗದು ಪುರಸ್ಕಾರ ನೀಡಿತ್ತು. ಕ್ರೀಡಾ ಸಲಕರಣೆಗಳ ಖರೀದಿಗೆ ಇದನ್ನು ಬಳಸಿಕೊಂಡೆ ಎನ್ನುವ ಅವರು, ಸದ್ಯ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾರೆ.</p>.<p><strong>(ಮುಂದಿನ ವಾರ: ಖಾಸಗಿ ಸಂಸ್ಥೆಗಳಿಂದ ಕ್ರೀಡಾ ವಿದ್ಯಾರ್ಥಿವೇತನ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>