ಜೂನ್ 4ರಂದು ಹೊಸ ಸಿನಿಮಾ ಬಿಡುಗಡೆಯಾಗಲಿದೆ. ಅದನ್ನು ದೇಶದ ಜನರು ಹೆಚ್ಚಿನ ಉತ್ಸಾಹದಿಂದ ವೀಕ್ಷಿಸಲಿದ್ದಾರೆ. ಪ್ರತಿ ಹಂತದ ಮತದಾನದಲ್ಲೂ ‘ಇಂಡಿಯಾ’ ಒಕ್ಕೂಟವು ಮುನ್ನಡೆ ಸಾಧಿಸಿದೆ. ಐದು ಹಂತಗಳ ಮತದಾನವು, ಬಿಜೆಪಿ ಸರ್ಕಾರ ಹೊರನಡೆಯುವ ಸೂಚನೆ ನೀಡಿದೆ. ಆರನೇ ಹಂತವು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಿದೆ. ‘ಇಂಡಿಯಾ’ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಜಾತಿ ಗಣತಿ ನಡೆಸಲಿದೆ
-ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ