ಹೈದರಾಬಾದ್: 2,188 ಚುನಾವಣಾ ಬಾಂಡ್ಗಳ ಮೂಲಕ ₹ 1,322 ಕೋಟಿ ದೇಣಿಗೆ ಸ್ವೀಕರಿಸಿರುವುದಾಗಿ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷ ತಿಳಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಚುನಾವಣಾ ಆಯೋಗವು, 2023ರ ಸೆಪ್ಟೆಂಬರ್ 30ರ ವರೆಗೆ ಸ್ವೀಕರಿಸಿದ ಚುನಾವಣಾ ಬಾಂಡ್ಗಳ ಕುರಿತು ವರದಿ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿತ್ತು. ಅದರಂತೆ, ಬಿಆರ್ಎಸ್ ಪಕ್ಷವು 2023ರ ನವೆಂಬರ್ 14ರಂದು ಆಯೋಗಕ್ಕೆ ಪ್ರತಿಕ್ರಿಯೆ ಸಲ್ಲಿಸಿದೆ.
ಪ್ರತಿ ಬಾಂಡ್ನಿಂದ ಸ್ವೀಕರಿಸಲಾದ ಹಣ, ಬಾಂಡ್ ಸಂಖ್ಯೆ ಮತ್ತು ಬಾಂಡ್ ಸ್ವೀಕರಿಸಿದ ದಿನಾಂಕ ಸಹಿತ ಮಾಹಿತಿಯನ್ನು ಹಂಚಿಕೊಂಡಿದೆ.
'ಎಸ್ಬಿಐನಲ್ಲಿರುವ ನಮ್ಮ ಪಕ್ಷದ ಖಾತೆಗೆ 2018ರ ಅಕ್ಟೋಬರ್ 11ರಿಂದ 2023ರ ಸೆಪ್ಟೆಂಬರ್ 30ರ ವರೆಗೆ ಚುನಾವಣಾ ಬಾಂಡ್ಗಳ ಮೂಲಕ ₹ 1,322 ಕೋಟಿ ಜಮೆಯಾಗಿದೆ' ಎಂದು ಬಿಆರ್ಎಸ್ ಹೇಳಿದೆ.