<p><strong>ಮುಂಬೈ:</strong> ಮಹಾರಾಷ್ಟ್ರದಿಂದ ಈ ಬಾರಿ ಲೋಕಸಭೆಗೆ ಚುನಾಯಿತರಾಗಿರುವ ಶೇ 50 ಸಂಸದರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ರಾಜ್ಯ ರಾಜಕಾರಣದಲ್ಲಿ ಹೊಂದಿರುವ ಪ್ರಭಾವಕ್ಕೆ ಇದು ಸಾಕ್ಷಿಯಾಗಿದೆ.</p><p>ರಾಜ್ಯದಲ್ಲಿರುವ 48 ಲೋಕಸಭಾ ಸ್ಥಾನಗಳ ಪೈಕಿ 5 ಕ್ಷೇತ್ರಗಳು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು 4 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಾಗಿವೆ. ಆದಾಗ್ಯೂ, ಮರಾಠ ಸಮುದಾಯದ 26 ಮಂದಿ ಸಂಸತ್ಗೆ ಪ್ರವೇಶ ಪಡೆದಿದ್ದಾರೆ. 9 ಕ್ಷೇತ್ರಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು, 6 ಕಡೆ ಎಸ್ಸಿ, 4ರಲ್ಲಿ ಎಸ್ಟಿ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಇತರ ಜಾತಿಯವರಿಗೆ ಮೂರು ಕ್ಷೇತ್ರಗಳು ದಕ್ಕಿವೆ.</p><p>ಎಸ್ಸಿ ಹಾಗೂ ಎಸ್ಟಿ ಸುಮುದಾಯಕ್ಕೆ ಮೀಸಲಾಗಿರುವ 9 ಸ್ಥಾನಗಳ ಪೈಕಿ 8ರಲ್ಲಿ ಶಿವಸೇನಾ (ಯುಬಿಟಿ) ಕಾಂಗ್ರೆಸ್, ಎನ್ಸಿಪಿ ನೇತೃತ್ವದ ಮಹಾ ವಿಕಾಸ ಆಘಾಡಿ ಮೈತ್ರಿಕೂಟದ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಈ ಎಂಟರಲ್ಲಿ 6 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು, ತಲಾ ಒಂದೊಂದು ಕಡೆ ಶಿವಸೇನಾ (ಯುಬಿಟಿ) ಮತ್ತು ಎನ್ಸಿಪಿ ಅಭ್ಯರ್ಥಿಗಳು ಇದ್ದಾರೆ. ಉಳಿದ ಒಂದು ಕ್ಷೇತ್ರ ಬಿಜೆಪಿ ಪಾಲಾಗಿದೆ.</p><p>ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಗಳಲ್ಲಿ ಮರಾಠ ಜಾತಿಗೆ ಸೇರಿದ ತಲಾ ಆರು ಸಂಸದರು ಇದ್ದಾರೆ.</p><p><strong>ಇತರ ಜಾತಿಯವರು<br></strong>ನಾಗಪುರದಿಂದ ಗೆದ್ದಿರುವ ನಿತಿನ್ ಗಡ್ಕರಿ ಬ್ರಾಹ್ಮಣರಾಗಿದ್ದರೆ, ಮುಂಬೈ ಉತ್ತರದಿಂದ ಜಯ ಸಾಧಿಸಿರುವ ಪಿಯೂಷ್ ಗೋಯಲ್ ಅವರು ಮಾರ್ವಾಡಿ. ಈ ಇಬ್ಬರೂ ಬಿಜೆಪಿಯವರು. ಮುಂಬೈ ದಕ್ಷಿಣ – ಕೇಂದ್ರದಲ್ಲಿ ಗೆಲುವು ಸಾಧಿಸಿರುವ ಶಿವಸೇನಾದ ಅನಿಲ್ ದೇಸಾಯಿ ಅವರು ಸಾರಸ್ವತ ಬ್ರಾಹ್ಮಣ ಜಾತಿಗೆ ಸೇರಿದವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮಹಾರಾಷ್ಟ್ರದಿಂದ ಈ ಬಾರಿ ಲೋಕಸಭೆಗೆ ಚುನಾಯಿತರಾಗಿರುವ ಶೇ 50 ಸಂಸದರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ರಾಜ್ಯ ರಾಜಕಾರಣದಲ್ಲಿ ಹೊಂದಿರುವ ಪ್ರಭಾವಕ್ಕೆ ಇದು ಸಾಕ್ಷಿಯಾಗಿದೆ.</p><p>ರಾಜ್ಯದಲ್ಲಿರುವ 48 ಲೋಕಸಭಾ ಸ್ಥಾನಗಳ ಪೈಕಿ 5 ಕ್ಷೇತ್ರಗಳು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು 4 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಾಗಿವೆ. ಆದಾಗ್ಯೂ, ಮರಾಠ ಸಮುದಾಯದ 26 ಮಂದಿ ಸಂಸತ್ಗೆ ಪ್ರವೇಶ ಪಡೆದಿದ್ದಾರೆ. 9 ಕ್ಷೇತ್ರಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು, 6 ಕಡೆ ಎಸ್ಸಿ, 4ರಲ್ಲಿ ಎಸ್ಟಿ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಇತರ ಜಾತಿಯವರಿಗೆ ಮೂರು ಕ್ಷೇತ್ರಗಳು ದಕ್ಕಿವೆ.</p><p>ಎಸ್ಸಿ ಹಾಗೂ ಎಸ್ಟಿ ಸುಮುದಾಯಕ್ಕೆ ಮೀಸಲಾಗಿರುವ 9 ಸ್ಥಾನಗಳ ಪೈಕಿ 8ರಲ್ಲಿ ಶಿವಸೇನಾ (ಯುಬಿಟಿ) ಕಾಂಗ್ರೆಸ್, ಎನ್ಸಿಪಿ ನೇತೃತ್ವದ ಮಹಾ ವಿಕಾಸ ಆಘಾಡಿ ಮೈತ್ರಿಕೂಟದ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಈ ಎಂಟರಲ್ಲಿ 6 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು, ತಲಾ ಒಂದೊಂದು ಕಡೆ ಶಿವಸೇನಾ (ಯುಬಿಟಿ) ಮತ್ತು ಎನ್ಸಿಪಿ ಅಭ್ಯರ್ಥಿಗಳು ಇದ್ದಾರೆ. ಉಳಿದ ಒಂದು ಕ್ಷೇತ್ರ ಬಿಜೆಪಿ ಪಾಲಾಗಿದೆ.</p><p>ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಗಳಲ್ಲಿ ಮರಾಠ ಜಾತಿಗೆ ಸೇರಿದ ತಲಾ ಆರು ಸಂಸದರು ಇದ್ದಾರೆ.</p><p><strong>ಇತರ ಜಾತಿಯವರು<br></strong>ನಾಗಪುರದಿಂದ ಗೆದ್ದಿರುವ ನಿತಿನ್ ಗಡ್ಕರಿ ಬ್ರಾಹ್ಮಣರಾಗಿದ್ದರೆ, ಮುಂಬೈ ಉತ್ತರದಿಂದ ಜಯ ಸಾಧಿಸಿರುವ ಪಿಯೂಷ್ ಗೋಯಲ್ ಅವರು ಮಾರ್ವಾಡಿ. ಈ ಇಬ್ಬರೂ ಬಿಜೆಪಿಯವರು. ಮುಂಬೈ ದಕ್ಷಿಣ – ಕೇಂದ್ರದಲ್ಲಿ ಗೆಲುವು ಸಾಧಿಸಿರುವ ಶಿವಸೇನಾದ ಅನಿಲ್ ದೇಸಾಯಿ ಅವರು ಸಾರಸ್ವತ ಬ್ರಾಹ್ಮಣ ಜಾತಿಗೆ ಸೇರಿದವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>