ರಾಜಸ್ಥಾನದ ಭರತ್ಪುರ, ದೌಸಾ ಮತ್ತು ಸಿಕಾರ್ನಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಬ್ರಿಟನ್ನ ದೈನಿಕ ‘ದಿ ಗಾರ್ಡಿಯನ್’ 2019ರ ನಂತರ ರಾಷ್ಟ್ರೀಯ ಭದ್ರತೆಗಾಗಿ ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದಲ್ಲಿ ಭಯೋತ್ಪಾದಕರ ಉದ್ದೇಶಿತ ಹತ್ಯೆಗಳಲ್ಲಿ ಭಾಗಿಯಾಗಿವೆ ಎಂದು ಪ್ರಕಟಿಸಿರುವ ವರದಿ ಉಲ್ಲೇಖಿಸಿ, ಭಯೋತ್ಪಾದಕರನ್ನು ಕೊಲ್ಲುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.