ರಾಮನಗರ: ‘ಜೆಡಿಎಸ್ನಲ್ಲಿ ಅಮಾನತು ಆಗಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಬಂದು ಎರಡು ಸಲ ಮುಖ್ಯಮಂತ್ರಿಯಾಗಿ ನಮ್ಮ ನಾಯಕರಾಗಿಲ್ಲವೆ? ಯಾರ ಯೋಗ ಹೇಗಿರುತ್ತದೊ, ಅದು ಹಾಗೆಯೇ ಆಗುತ್ತದೆ. ಹಾಗಾಗಿ, ಯಾರನ್ನೂ ಅಡ್ಡ ಹಾಕಲು ಹೋಗಬೇಡಿ. ಅಡ್ಡ ಹಾಕಲು ಹೋದರೆ ಅವರು ನಾಯಕರಾಗುತ್ತಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.