ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಎಲ್ಲಿ ಕಾಂಗ್ರೆಸ್ ಇರುತ್ತದೆಯೋ ಅಲ್ಲಿ ಬಾಂಬ್ ಸ್ಫೋಟಗಳು ಸಂಭವಿಸುತ್ತವೆ. ಪಿಎಫ್ಐ ಸಂಘಟನೆಯವರನ್ನು ಜೈಲಿನಿಂದ ಬಿಟ್ಟಿಲ್ಲವೇ? ಹುಬ್ಬಳ್ಳಿಯಂತಹ ಘಟನೆಗಳು ನಡೆದಿಲ್ಲವೇ? ಇಂತಹವರು ಅಧಿಕಾರಕ್ಕೆ ಬರಬೇಕಾ? ಇವರು (ಕಾಂಗ್ರೆಸ್ನವರು) ಪಿಎಫ್ಐ ಪರ ಒಲವು ಇರುವವರು. ನಾವು ಅಧಿಕಾರಕ್ಕೆ ಬಂದಾಗ ಪಿಎಫ್ಐ ನಿಷೇಧ ಮಾಡಿದ್ದೇವು. ಆದರೆ, ಕಾಂಗ್ರೆಸ್ನವರು ಅವರನ್ನು ಕರೆದು ಕೂರಿಸಿಕೊಳ್ಳುತ್ತಾರೆ’ ಎಂದು ಆರೋಪಿಸಿದರು.