ಶೆಟ್ಟರ್ ಅವರು ಅಂಗಡಿ ಕುಟುಂಬದ ಬೀಗರು. ಹೀಗಾಗಿ, ಸಂಸದೆ ಮಂಗಲಾ ಯಾವುದೇ ತಕರಾರಿಲ್ಲದೇ ಕ್ಷೇತ್ರ ಬಿಟ್ಟುಕೊಟ್ಟರು. ಸುರೇಶ ಅಂಗಡಿ ಸಾಧನೆ, ಬಿಜೆಪಿಯ ಮತ ಬ್ಯಾಂಕ್, ಪ್ರಧಾನಿ ಮೋದಿ ಮೇನಿಯಾ, ರಾಮ ಮಂದಿರ... ಹೀಗೆ ಹಲವು ಬಾಣಗಳು ಶೆಟ್ಟರ್ ಬತ್ತಳಿಕೆಯಲ್ಲಿವೆ. ಎರಡು ಅವಧಿಗೆ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದನ್ನು ನೆನೆಪಿಸಿಕೊಂಡು ಪ್ರಚಾರ ನಡೆಸಿದ್ದಾರೆ.