<p><strong>ಹೈದರಾಬಾದ್:</strong>ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರಿಗೆಇಂದು 36ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ದಿನದಂದೇಅವರ ಹೊಸ ಚಿತ್ರವೊಂದು ಘೊಷಣೆಯಾಗಿದೆ.</p>.<p>‘ಶ್ರೀ ವೆಂಕಟೇಶ್ವರ ಕ್ರಿಯೇಷನ್’ ಬ್ಯಾನರ್ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಶ್ರೀರಾಮ್ ವೇಣು ಅವರು ನಿರ್ದೇಶಿಸುತ್ತಿದ್ದಾರೆ. ಅಂದ ಹಾಗೆ ಆ ಚಿತ್ರದ ಹೆಸರು‘ಐಕಾನ್’. ವೆಂಕಟೇಶ್ವರ ಕ್ರಿಯೇಷನ್ ಸಂಸ್ಥೆ ಇಂದು ಟ್ವೀಟ್ ಮಾಡಿ ಈ ವಿಚಾರವನ್ನು ಬಹಿರಂಗಗೊಳಿಸಿದೆ. ಚಿತ್ರದ ತಾರಾಗಣ ಮತ್ತು ಇತರ ಮಾಹಿತಿಗಳನ್ನು ನಿರ್ದೇಶಕ ಶ್ರೀರಾಮ್ ವೇಣು ಶೀಘ್ರದಲ್ಲೇ ಹಂಚಿಕೊಳ್ಳಲಿದೆ ಎನ್ನಲಾಗಿದೆ.</p>.<p>‘ನಾ ಇಲ್ಲು ಇಂಡಿಯಾ’ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಅವರು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಬಹಳ ಎಚ್ಚರಿಕೆಯಿಂದಿದ್ದಾರೆ. ಅದಕ್ಕಾಗಿಯೇ ‘ಐಕಾನ್’ ಚಿತ್ರಕ್ಕೆ ಸಾಕಷ್ಟು ಸಮಯ ತೆಗೆದುಕೊಂಡು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/district/i-bengaluru-allu-arjun-584107.html" target="_blank">ಬೆಂಗಳೂರಿನ ವಾತಾವರಣ ಇಷ್ಟ: ನಟ ಅಲ್ಲು ಅರ್ಜುನ್</a></strong></p>.<p>ಈ ಮೊದಲು ನಿರ್ದೇಶಕ ವಿಕ್ರಮ್ ಕುಮಾರ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ವಿಕ್ರಮ್ ಅವರು ಈಗಾಗಲೇ ‘24’, ‘ಹೆಲೋ’, ‘ಇಷ್ಕ್’, ‘ಮನಮ್’ ಚಿತ್ರಗಳನ್ನು ಮಾಡಿ ಗೆದ್ದಿದ್ದಾರೆ. ಆದರೆ, ಉದ್ದೇಶಿತ ಚಿತ್ರದ ಕುರಿತು ಯಾವುದೇ ಮಹತ್ತರ ಮಾತುಕತೆಗಳು ನಡೆಯಲಿಲ್ಲ ಎಂದು ಅಲ್ಲು ಅರ್ಜುನ್ ಆಪ್ತ ಮೂಲಗಳು ತಿಳಿಸಿವೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/district/i-bengaluru-allu-arjun-584107.html" target="_blank"></a><a href="https://www.prajavani.net/news/article/2018/01/01/544275.html" target="_blank">‘ನಾ ಪೇರು ಸೂರ್ಯ’: ಖಡಕ್ ಮಿಲಿಟರಿ ಅಧಿಕಾರಿಯಾಗಿ ಅಲ್ಲು ಅರ್ಜುನ್</a></strong></p>.<p>ಹಿಟ್ ಚಿತ್ರ ‘ಆರ್ಯ’ ಮೂಲಕ ತೆಲುಗು ಚಿತ್ರರಂಗ ಪರವೇಶಿಸಿದ ಅಲ್ಲು ಅರ್ಜುನ್ ಅವರು ‘ಐಕಾನ್’ ಚಿತ್ರಕ್ಕೂ ಮೊದಲು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಸುಕುಮಾರ್ ಅರೊಂದಿಗೆ ಸಿನಿಮಾ ಮಾಡಲಿದ್ದಾರೆ. ಮುಂದಿನ ಮಾರ್ಚ್ ಅಂತ್ಯಕ್ಕೆ ಅವರು ತ್ರಿವಿಕ್ರಮ್ ಅವರ ಚಿತ್ರದ ಶೂಟಿಂಗ್ ಆಂಭಿಸಲಿದ್ದಾರೆ. ನಂತರ ‘ಆರ್ಯ’ ಚಿತ್ರದ ನಿರ್ದೇಶಕ ಸುಕುಮಾರ್ ಅವರ ಜತೆಗಿನ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಕೊಳ್ಳಲಿದ್ದಾರೆ. ಇದಾದ ನಂತರ ‘ಐಕಾನ್’ ಚಿತ್ರದ ಶೂಟಿಂಗ್ ಆರಂಭವಾಗಲಿದೆ.</p>.<p>‘ಐಕಾನ್’ ಚಿತ್ರದ ನಿರ್ದೇಶಕ ಶ್ರೀರಾಮ್ ವೇಣು ಅವರು ಈಗಾಗಲೇ ‘ಮಿಡ್ಲ್ ಕ್ಲಾಸ್ ಅಬ್ಬಾಯಿ (ಎಂಸಿಎ)’ ಚಿತ್ರ ನಿರ್ದೇಶಿಸಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/news/article/2018/05/04/570696.html?fbclid=IwAR13rO4heK-wOTP2qvMS14zPXX_bzxk2SETpaiyCeAC8HaMov9g7yL_PCOY" target="_blank">ದೇಶಾಭಿಮಾನದ ಪ್ರಜ್ವಲಿಸುವ 'ಸೂರ್ಯ'</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong>ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರಿಗೆಇಂದು 36ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ದಿನದಂದೇಅವರ ಹೊಸ ಚಿತ್ರವೊಂದು ಘೊಷಣೆಯಾಗಿದೆ.</p>.<p>‘ಶ್ರೀ ವೆಂಕಟೇಶ್ವರ ಕ್ರಿಯೇಷನ್’ ಬ್ಯಾನರ್ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಶ್ರೀರಾಮ್ ವೇಣು ಅವರು ನಿರ್ದೇಶಿಸುತ್ತಿದ್ದಾರೆ. ಅಂದ ಹಾಗೆ ಆ ಚಿತ್ರದ ಹೆಸರು‘ಐಕಾನ್’. ವೆಂಕಟೇಶ್ವರ ಕ್ರಿಯೇಷನ್ ಸಂಸ್ಥೆ ಇಂದು ಟ್ವೀಟ್ ಮಾಡಿ ಈ ವಿಚಾರವನ್ನು ಬಹಿರಂಗಗೊಳಿಸಿದೆ. ಚಿತ್ರದ ತಾರಾಗಣ ಮತ್ತು ಇತರ ಮಾಹಿತಿಗಳನ್ನು ನಿರ್ದೇಶಕ ಶ್ರೀರಾಮ್ ವೇಣು ಶೀಘ್ರದಲ್ಲೇ ಹಂಚಿಕೊಳ್ಳಲಿದೆ ಎನ್ನಲಾಗಿದೆ.</p>.<p>‘ನಾ ಇಲ್ಲು ಇಂಡಿಯಾ’ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಅವರು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಬಹಳ ಎಚ್ಚರಿಕೆಯಿಂದಿದ್ದಾರೆ. ಅದಕ್ಕಾಗಿಯೇ ‘ಐಕಾನ್’ ಚಿತ್ರಕ್ಕೆ ಸಾಕಷ್ಟು ಸಮಯ ತೆಗೆದುಕೊಂಡು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/district/i-bengaluru-allu-arjun-584107.html" target="_blank">ಬೆಂಗಳೂರಿನ ವಾತಾವರಣ ಇಷ್ಟ: ನಟ ಅಲ್ಲು ಅರ್ಜುನ್</a></strong></p>.<p>ಈ ಮೊದಲು ನಿರ್ದೇಶಕ ವಿಕ್ರಮ್ ಕುಮಾರ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ವಿಕ್ರಮ್ ಅವರು ಈಗಾಗಲೇ ‘24’, ‘ಹೆಲೋ’, ‘ಇಷ್ಕ್’, ‘ಮನಮ್’ ಚಿತ್ರಗಳನ್ನು ಮಾಡಿ ಗೆದ್ದಿದ್ದಾರೆ. ಆದರೆ, ಉದ್ದೇಶಿತ ಚಿತ್ರದ ಕುರಿತು ಯಾವುದೇ ಮಹತ್ತರ ಮಾತುಕತೆಗಳು ನಡೆಯಲಿಲ್ಲ ಎಂದು ಅಲ್ಲು ಅರ್ಜುನ್ ಆಪ್ತ ಮೂಲಗಳು ತಿಳಿಸಿವೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/district/i-bengaluru-allu-arjun-584107.html" target="_blank"></a><a href="https://www.prajavani.net/news/article/2018/01/01/544275.html" target="_blank">‘ನಾ ಪೇರು ಸೂರ್ಯ’: ಖಡಕ್ ಮಿಲಿಟರಿ ಅಧಿಕಾರಿಯಾಗಿ ಅಲ್ಲು ಅರ್ಜುನ್</a></strong></p>.<p>ಹಿಟ್ ಚಿತ್ರ ‘ಆರ್ಯ’ ಮೂಲಕ ತೆಲುಗು ಚಿತ್ರರಂಗ ಪರವೇಶಿಸಿದ ಅಲ್ಲು ಅರ್ಜುನ್ ಅವರು ‘ಐಕಾನ್’ ಚಿತ್ರಕ್ಕೂ ಮೊದಲು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಸುಕುಮಾರ್ ಅರೊಂದಿಗೆ ಸಿನಿಮಾ ಮಾಡಲಿದ್ದಾರೆ. ಮುಂದಿನ ಮಾರ್ಚ್ ಅಂತ್ಯಕ್ಕೆ ಅವರು ತ್ರಿವಿಕ್ರಮ್ ಅವರ ಚಿತ್ರದ ಶೂಟಿಂಗ್ ಆಂಭಿಸಲಿದ್ದಾರೆ. ನಂತರ ‘ಆರ್ಯ’ ಚಿತ್ರದ ನಿರ್ದೇಶಕ ಸುಕುಮಾರ್ ಅವರ ಜತೆಗಿನ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಕೊಳ್ಳಲಿದ್ದಾರೆ. ಇದಾದ ನಂತರ ‘ಐಕಾನ್’ ಚಿತ್ರದ ಶೂಟಿಂಗ್ ಆರಂಭವಾಗಲಿದೆ.</p>.<p>‘ಐಕಾನ್’ ಚಿತ್ರದ ನಿರ್ದೇಶಕ ಶ್ರೀರಾಮ್ ವೇಣು ಅವರು ಈಗಾಗಲೇ ‘ಮಿಡ್ಲ್ ಕ್ಲಾಸ್ ಅಬ್ಬಾಯಿ (ಎಂಸಿಎ)’ ಚಿತ್ರ ನಿರ್ದೇಶಿಸಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/news/article/2018/05/04/570696.html?fbclid=IwAR13rO4heK-wOTP2qvMS14zPXX_bzxk2SETpaiyCeAC8HaMov9g7yL_PCOY" target="_blank">ದೇಶಾಭಿಮಾನದ ಪ್ರಜ್ವಲಿಸುವ 'ಸೂರ್ಯ'</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>