<p>ಪೂರ್ಣಿಮಾ ರಾಜ್ಕುಮಾರ್ ಪುತ್ರ ಧೀರೆನ್ ಆರ್. ರಾಜ್ಕುಮಾರ್, ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.</p><p>ಗೀತಾ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ.</p><p>ಟೀಸರ್ನಲ್ಲಿ ‘ನದಿ ದಡದ ಮೇಲೆ ಒಂದಿಷ್ಟು ಜನ ಸೇರಿ ಶವಸಂಸ್ಕಾರ ಮಾಡುತ್ತಿದ್ದಾಗ, ಆ ಚಿತೆಯನ್ನು ನೋಡುತ್ತಾ ಬಾಲಕನೊಬ್ಬ ಮೂಕ ವಿಸ್ಮಿತನಾಗಿ ನಿಂತಿರುತ್ತಾನೆ. ಆ ವೇಳೆ ಒಬ್ಬ ಮುಸುಕುಧಾರಿ ಆಗಮಿಸುತ್ತಾನೆ. ಬಾಲಕನ ಹತ್ತಿರ ಬಂದು ಮುಸುಕು ತೆಗೆದು ತಮ್ಮ ಮುಖ ತೋರಿಸುತ್ತಾನೆ. ಆತನೇ ಕಥೆಯ ಮುಖ್ಯ ಪಾತ್ರಧಾರಿ ನಾಯಕ ಧೀರೆನ್. ನಂತರದ ದೃಶ್ಯದಲ್ಲಿ ಧೀರೆನ್ ಪೊಲೀಸ್ ಉಡುಪಿನಲ್ಲಿ ಕಾಣಿಸಿಕೊಳ್ಳುವುದನ್ನು ತೋರಿಸಲಾಗಿದೆ.</p>.ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಫಸ್ಟ್ ಲುಕ್ ಅನಾವರಣ.<p>ಪೊಲೀಸ್ ಅಧಿಕಾರಿಯಾಗಿದ್ದ ಕಥಾ ನಾಯಕ ಶವ ಸಂಸ್ಕಾರದ ವೇಳೆ ಮುಸುಕುಧಾರಿಯಾಗಿ ಬರಲು ಕಾರಣವೇನು, ಮೂಕ ವಿಸ್ಮಿತನಾಗಿ ನಿಂತಿದ್ದ ಬಾಲಕ ಹಿನ್ನೆಲೆಯೇನು ಎನ್ನುವುದು ಸಿನಿಮಾ ನೋಡಿಯೇ ತಿಳಿಯಬೇಕಿದೆ.</p><p>ಗೀತಾ ಪಿಕ್ಚರ್ಸ್ನಡಿ ‘ಪಬ್ಬಾರ್’ ಚಿತ್ರ ನಿರ್ಮಾಣವಾಗಿದೆ. ಸಂದೀಪ್ ಸುಕುಂದ್ ಅವರು ನಿರ್ದೇಶನ ಮಾಡಿದ್ದಾರೆ. ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪೂರ್ಣಿಮಾ ರಾಜ್ಕುಮಾರ್ ಪುತ್ರ ಧೀರೆನ್ ಆರ್. ರಾಜ್ಕುಮಾರ್, ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.</p><p>ಗೀತಾ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ.</p><p>ಟೀಸರ್ನಲ್ಲಿ ‘ನದಿ ದಡದ ಮೇಲೆ ಒಂದಿಷ್ಟು ಜನ ಸೇರಿ ಶವಸಂಸ್ಕಾರ ಮಾಡುತ್ತಿದ್ದಾಗ, ಆ ಚಿತೆಯನ್ನು ನೋಡುತ್ತಾ ಬಾಲಕನೊಬ್ಬ ಮೂಕ ವಿಸ್ಮಿತನಾಗಿ ನಿಂತಿರುತ್ತಾನೆ. ಆ ವೇಳೆ ಒಬ್ಬ ಮುಸುಕುಧಾರಿ ಆಗಮಿಸುತ್ತಾನೆ. ಬಾಲಕನ ಹತ್ತಿರ ಬಂದು ಮುಸುಕು ತೆಗೆದು ತಮ್ಮ ಮುಖ ತೋರಿಸುತ್ತಾನೆ. ಆತನೇ ಕಥೆಯ ಮುಖ್ಯ ಪಾತ್ರಧಾರಿ ನಾಯಕ ಧೀರೆನ್. ನಂತರದ ದೃಶ್ಯದಲ್ಲಿ ಧೀರೆನ್ ಪೊಲೀಸ್ ಉಡುಪಿನಲ್ಲಿ ಕಾಣಿಸಿಕೊಳ್ಳುವುದನ್ನು ತೋರಿಸಲಾಗಿದೆ.</p>.ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಫಸ್ಟ್ ಲುಕ್ ಅನಾವರಣ.<p>ಪೊಲೀಸ್ ಅಧಿಕಾರಿಯಾಗಿದ್ದ ಕಥಾ ನಾಯಕ ಶವ ಸಂಸ್ಕಾರದ ವೇಳೆ ಮುಸುಕುಧಾರಿಯಾಗಿ ಬರಲು ಕಾರಣವೇನು, ಮೂಕ ವಿಸ್ಮಿತನಾಗಿ ನಿಂತಿದ್ದ ಬಾಲಕ ಹಿನ್ನೆಲೆಯೇನು ಎನ್ನುವುದು ಸಿನಿಮಾ ನೋಡಿಯೇ ತಿಳಿಯಬೇಕಿದೆ.</p><p>ಗೀತಾ ಪಿಕ್ಚರ್ಸ್ನಡಿ ‘ಪಬ್ಬಾರ್’ ಚಿತ್ರ ನಿರ್ಮಾಣವಾಗಿದೆ. ಸಂದೀಪ್ ಸುಕುಂದ್ ಅವರು ನಿರ್ದೇಶನ ಮಾಡಿದ್ದಾರೆ. ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>