ನಂದಕಿಶೋರ್ ಅವರು ವಿಡಿಯೋ ಸಂದೇಶದಲ್ಲಿ, ‘ನಿಮ್ಮ(ಬ್ರಾಹ್ಮಣ ಸಮುದಾಯದ) ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೇಳಲ್ಪಟ್ಟೆ. ಮೂರು– ಮೂರೂವರೆ ವರ್ಷಗಳ ಕಾಲ ಕಷ್ಟಪಟ್ಟು ಸಿನಿಮಾ ತೆಗೆದು ಅದರ ಹಿಂದಿರುವ ಕಷ್ಟ, ಪರಿಶ್ರಮ ನಿಮಗೂ ಗೊತ್ತಿರುತ್ತದೆ. ಇದು ಯಾವುದೇ ಜನಾಂಗ ಅಥವಾ ಧರ್ಮಕ್ಕೆ ಧಕ್ಕೆ ತರಬೇಕು ಎಂಬ ಉದ್ದೇಶದಿಂದ ಮಾಡಿರುವಂತದ್ದು ಅಲ್ಲ. ಇದೊಂದು ಕಾಲ್ಪನಿಕ ಕಥೆ. ರಿಯಲಿಸ್ಟಿಕ್ ಅಲ್ಲ. ಇದನ್ನು ಸಿನಿಮಾದ ಮೊದಲನೇ ಭಾಗದಲ್ಲೇ ಹಾಕಿರುತ್ತೇವೆ. ಅಕಸ್ಮಾತ್ ತಿಳಿದೋ ತಿಳೀದೇನೋ ನಮ್ಮ ಕಡೆಯಿಂದ ನೋವಾಗಿದ್ದರೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಆದರೆ ಒಂದು ಕನ್ನಡ ಚಲನಚಿತ್ರ ಕೋವಿಡ್ ಆದ ಮೇಲೆ ತುಂಬಾ ಕಷ್ಟಪಟ್ಟು ಬಿಡುಗಡೆ ಮಾಡುತ್ತಿದ್ದೇವೆ. ದಯವಿಟ್ಟು ಕನ್ನಡಿಗರಾಗಿ, ಕಲಾಭಿಮಾನಿಗಳಾಗಿ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ನಿಮಗೆ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ದೊಡ್ಡಮನಸ್ಸು ಮಾಡಿ ಅಲ್ಲಿಗೇ ನಿಲ್ಲಿಸಿ’ ಎಂದು ಕೋರಿದ್ದಾರೆ.