ಇತ್ತೀಚೆಗೆ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾನೇ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಸಿನಿಮಾ ಮಾಡುತ್ತೇನೆ. ಸಚಿವ ಪುಟ್ಟರಾಜು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂದು ಹೇಳಿದ್ದರು. ಹಾಗಾಗಿ, ‘ಎಲ್ಲಿದ್ದೀಯಪ್ಪಾ...’ ಚಿತ್ರದ ಟೈಟಲ್ನ ಹಿಂದೆ, ಮುಂದೆ ಯಾವುದೇ ಹೆಸರನ್ನು ನೀಡಬಾರದು. ಇದು ವಿವಾದಾತ್ಮಕ ಟೈಟಲ್ ಅಲ್ಲ ಎಂದು ಗಣೇಶ್ ಮಂಡಳಿಗೆ ಕೋರಿದ್ದಾರೆ ಎನ್ನಲಾಗಿದೆ.