ನೇತ್ರಾ, ಪೂಜಾ ಮೈಸೂರು, ಸೋನು ಪಾಟೀಲ್, ರಾಜೇಶ್ವರಿ, ಸೂರ್ಯವಂಶಿ ಈ ಚಿತ್ರದ ನಾಯಕಿಯರು. ಡಾ.ಗೋಪಾಲಕೃಷ್ಣ ಹವಾಲ್ದಾರ್ ಮತ್ತು ಧನಂಜಯ್ ಎಚ್. ಬಂಡವಾಳ ಹೂಡಿದ್ದಾರೆ. ಶಿವು ಜಮಖಂಡಿ ಅವರೇ ನಾಲ್ಕು ಹಾಡುಗಳನ್ನು ಬರೆದು ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಛಾಯಾಗ್ರಹಣ ಮುಂಜಾನೆ ಮಂಜು ಅವರದು.ಬೆಂಗಳೂರು, ಬೆಳಗಾವಿ ಮತ್ತು ಕಿತ್ತೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಜನವರಿಗೆ ಜನರ ಮುಂದೆ ಬರಲು ಚಿತ್ರತಂಡ ನಿರ್ಧರಿಸಿದೆ.