ತುಘ್ಲಕ್, ನಮ್ ಏರಿಯಾಲ್ ಒಂದಿನ, ಹುಲಿರಾಯ ಸಿನಿಮಾಗಳಿಂದ ಹೆಸರು ಮಾಡಿದ ಅರವಿಂದ್ ಕೌಶಿಕ್ ಬಣ್ಣದ ಜಗತ್ತಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದವರು. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಸಾಕಷ್ಟು ಪ್ರತಿಭಾವಂತರು ಇವರ ಗರಡಿಯಿಂದ ಬಂದವರು. ಹೀಗಾಗಿ ಈ ಸಲ ಕೆ.ಪಿ ಅರವಿಂದ್ ಅವರನ್ನು ಸಿನಿಮಾಕ್ಕೆ ತರುವ ಪ್ರಯತ್ನದಲ್ಲಿ ಇರಬಹುದಾ ಎಂಬ ಸಣ್ಣ ಅನುಮಾನವಿದೆ. ಆದಾಗ್ಯೂ ಚಿತ್ರತಂಡ ಈ ಬಗ್ಗೆ ಗುಟ್ಟು ಬಿಟ್ಟುಕೊಡುತ್ತಿಲ್ಲ. ಕಾದು ನೋಡಿ ಎನ್ನುತ್ತಿದೆ.