<p>ಜನರನ್ನು ಚಿತ್ರಮಂದಿರದತ್ತ ಮತ್ತೆ ಸೆಳೆಯಲು ಚಿತ್ರಮಂದಿರದ ಮಾಲೀಕರು ಸಿದ್ಧತೆ ಆರಂಭಿಸಿದ್ದು, ಗಣೇಶ ಚತುರ್ಥಿಗೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ನಟ ಶಿವರಾಜ್ಕುಮಾರ್ ನಟನೆಯ ‘ಟಗರು’ ರಿರಿಲೀಸ್ ಆಗಲಿದೆ.</p>.<p>2018ರಲ್ಲಿ ತೆರೆಕಂಡ ಶಿವರಾಜ್ಕುಮಾರ್ ನಟನೆಯ, ಸೂರಿ ನಿರ್ದೇಶನದ ‘ಟಗರು’ ಸಿನಿಮಾ ಸೂಪರ್ಹಿಟ್ ಆಗಿತ್ತು. ಸೆ.3ಕ್ಕೆ ಬೆಂಗಳೂರಿನ ತ್ರಿವೇಣಿ ಹಾಗೂ ಹಗರಿಬೊಮ್ಮನಹಳ್ಳಿಯ ಕೃಷ್ಣ ಚಿತ್ರಮಂದಿರದಲ್ಲಿ ‘ಟಗರು’ ಚಿತ್ರ ಮರುಬಿಡುಗಡೆಯಾಗಲಿದೆ. ‘ಚಿತ್ರಮಂದಿರದ ಮಾಲೀಕರೇ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಈ ಚಿತ್ರವನ್ನೇ ಆಯ್ಕೆ ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ರಾಜ್ಯದ ಮತ್ತಷ್ಟು ಚಿತ್ರಮಂದಿರಗಳಲ್ಲಿ ಚಿತ್ರವು ರಿರಿಲೀಸ್ ಆಗಲಿದೆ. ಕಳೆದ ಲಾಕ್ಡೌನ್ ಆದ ಮೇಲೂ ಈ ಚಿತ್ರ ರಿರಿಲೀಸ್ ಆಗಿತ್ತು. ಕೆಲ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನವೂ ಕಂಡಿತ್ತು. ಈ ಚಿತ್ರವನ್ನು ಈಗ ರಿರಿಲೀಸ್ ಮಾಡಿದರೆ ಜನರು ಮತ್ತೆ ಚಿತ್ರಮಂದಿರದತ್ತ ಬರುತ್ತಾರೆ ಎನ್ನುವ ನಂಬಿಕೆ ಚಿತ್ರಮಂದಿರದ ಮಾಲೀಕರಿಗಿದೆ. ಹೀಗಾಗಿ ಶೇ 50 ಪ್ರೇಕ್ಷಕರಿಗೆ ಅವಕಾಶವಿದ್ದರೂ ಈ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ’ ಎಂದು ‘ಟಗರು’ ನಿರ್ಮಾಪಕ ಶ್ರೀಕಾಂತ್ ಕೆ.ಪಿ ತಿಳಿಸಿದರು.</p>.<p>ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡದೇ ಇರುವ ಕಾರಣ ಗಣೇಶ ಚತುರ್ಥಿಗೆ ಬಿಡುಗಡೆಯಾಗಬೇಕಿದ್ದ ಶಿವರಾಜ್ಕುಮಾರ್ ನಟನೆಯ ಬಹುನಿರೀಕ್ಷೆಯ ಬಿಗ್ಬಜೆಟ್ ಚಿತ್ರ ‘ಭಜರಂಗಿ–2’ ಮುಂದೂಡಲಾಗಿದೆ. ‘ಜನ ಹೌಸ್ಫುಲ್ನಲ್ಲಿ ಈ ಸಿನಿಮಾ ನೋಡಿದರಷ್ಟೇ ಚಿತ್ರದ ಪವರ್ ಅನುಭವಿಸಬಹುದು. ಅಭಿಮಾನಿಗಳು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ.ಆದಷ್ಟು ಬೇಗ ಟ್ರೇಲರ್ ರಿಲೀಸ್ ಮಾಡುತ್ತೇವೆ. ಟ್ರೇಲರ್ನಲ್ಲೇ ಬಿಡುಗಡೆ ದಿನಾಂಕ ಹೇಳುತ್ತೇವೆ’ ಎಂದುಶಿವರಾಜ್ಕುಮಾರ್ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜನರನ್ನು ಚಿತ್ರಮಂದಿರದತ್ತ ಮತ್ತೆ ಸೆಳೆಯಲು ಚಿತ್ರಮಂದಿರದ ಮಾಲೀಕರು ಸಿದ್ಧತೆ ಆರಂಭಿಸಿದ್ದು, ಗಣೇಶ ಚತುರ್ಥಿಗೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ನಟ ಶಿವರಾಜ್ಕುಮಾರ್ ನಟನೆಯ ‘ಟಗರು’ ರಿರಿಲೀಸ್ ಆಗಲಿದೆ.</p>.<p>2018ರಲ್ಲಿ ತೆರೆಕಂಡ ಶಿವರಾಜ್ಕುಮಾರ್ ನಟನೆಯ, ಸೂರಿ ನಿರ್ದೇಶನದ ‘ಟಗರು’ ಸಿನಿಮಾ ಸೂಪರ್ಹಿಟ್ ಆಗಿತ್ತು. ಸೆ.3ಕ್ಕೆ ಬೆಂಗಳೂರಿನ ತ್ರಿವೇಣಿ ಹಾಗೂ ಹಗರಿಬೊಮ್ಮನಹಳ್ಳಿಯ ಕೃಷ್ಣ ಚಿತ್ರಮಂದಿರದಲ್ಲಿ ‘ಟಗರು’ ಚಿತ್ರ ಮರುಬಿಡುಗಡೆಯಾಗಲಿದೆ. ‘ಚಿತ್ರಮಂದಿರದ ಮಾಲೀಕರೇ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಈ ಚಿತ್ರವನ್ನೇ ಆಯ್ಕೆ ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ರಾಜ್ಯದ ಮತ್ತಷ್ಟು ಚಿತ್ರಮಂದಿರಗಳಲ್ಲಿ ಚಿತ್ರವು ರಿರಿಲೀಸ್ ಆಗಲಿದೆ. ಕಳೆದ ಲಾಕ್ಡೌನ್ ಆದ ಮೇಲೂ ಈ ಚಿತ್ರ ರಿರಿಲೀಸ್ ಆಗಿತ್ತು. ಕೆಲ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನವೂ ಕಂಡಿತ್ತು. ಈ ಚಿತ್ರವನ್ನು ಈಗ ರಿರಿಲೀಸ್ ಮಾಡಿದರೆ ಜನರು ಮತ್ತೆ ಚಿತ್ರಮಂದಿರದತ್ತ ಬರುತ್ತಾರೆ ಎನ್ನುವ ನಂಬಿಕೆ ಚಿತ್ರಮಂದಿರದ ಮಾಲೀಕರಿಗಿದೆ. ಹೀಗಾಗಿ ಶೇ 50 ಪ್ರೇಕ್ಷಕರಿಗೆ ಅವಕಾಶವಿದ್ದರೂ ಈ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ’ ಎಂದು ‘ಟಗರು’ ನಿರ್ಮಾಪಕ ಶ್ರೀಕಾಂತ್ ಕೆ.ಪಿ ತಿಳಿಸಿದರು.</p>.<p>ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡದೇ ಇರುವ ಕಾರಣ ಗಣೇಶ ಚತುರ್ಥಿಗೆ ಬಿಡುಗಡೆಯಾಗಬೇಕಿದ್ದ ಶಿವರಾಜ್ಕುಮಾರ್ ನಟನೆಯ ಬಹುನಿರೀಕ್ಷೆಯ ಬಿಗ್ಬಜೆಟ್ ಚಿತ್ರ ‘ಭಜರಂಗಿ–2’ ಮುಂದೂಡಲಾಗಿದೆ. ‘ಜನ ಹೌಸ್ಫುಲ್ನಲ್ಲಿ ಈ ಸಿನಿಮಾ ನೋಡಿದರಷ್ಟೇ ಚಿತ್ರದ ಪವರ್ ಅನುಭವಿಸಬಹುದು. ಅಭಿಮಾನಿಗಳು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ.ಆದಷ್ಟು ಬೇಗ ಟ್ರೇಲರ್ ರಿಲೀಸ್ ಮಾಡುತ್ತೇವೆ. ಟ್ರೇಲರ್ನಲ್ಲೇ ಬಿಡುಗಡೆ ದಿನಾಂಕ ಹೇಳುತ್ತೇವೆ’ ಎಂದುಶಿವರಾಜ್ಕುಮಾರ್ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>