<p>ಕೇರಳದಲ್ಲಿ 70 ನೇ ಫಿಲಂ ಫೇರ್ ಪ್ರಶಸ್ತಿ ಕಾರ್ಯಕ್ರಮ ನಡೆಯಿತು. ಶ್ರೀಮುರುಳಿ ಸೇರಿದಂತೆ ಅನೇಕ ಕನ್ನಡದ ಸಿನಿ ತಾರೆಯರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. </p><p>ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಸಂದೀಪ್ ಸುಂಕದ್ ನಿರ್ದೇಶನದ <strong>‘ಶಾಖಾಹಾರಿ’</strong> ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ.<br><br>ಅತ್ಯುತ್ತಮ ಚಿತ್ರ ನಿರ್ದೇಶಕ ವಿಭಾಗದಲ್ಲಿ <strong>‘ಹದಿನೇಳೆಂಟು‘</strong> ಚಿತ್ರದ ನಿರ್ದೇಶಕ ಪೃಥ್ವಿ ಕೋಣನೂರು ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. <br><br>ಅತ್ಯುತ್ತಮ ನಟ ವಿಭಾಗದಲ್ಲಿ <strong>‘ಬಘೀರ’</strong> ಚಿತ್ರಕ್ಕಾಗಿ ಶ್ರೀಮುರಳಿ ಅವರಿಗೆ ಪ್ರಶಸ್ತಿ ದೊರಕಿದೆ.</p><p>ಅಕ್ಷತಾ ಪಾಂಡವಪುರ ಅವರು <strong>‘ಕೋಳಿ ಎಸ್ರು’</strong> ಚಿತ್ರಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಫಿಲಂ ಫೇರ್ ಪಡೆದುಕೊಂಡಿದ್ದಾರೆ. </p>.<p>ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ <strong>'ಬ್ಲಿಂಕ್'</strong> ಚಿತ್ರಕ್ಕೆ ವಿಮರ್ಶಕರ ಪ್ರಶಸ್ತಿ ಲಭಿಸಿದೆ. </p><p>ಅತ್ಯುತ್ತಮ ನಟ ವಿಭಾಗದಲ್ಲಿ <strong>‘ಕೆರೆಬೇಟೆ’</strong> ಚಿತ್ರಕ್ಕಾಗಿ ಗೌರಿಶಂಕರ್ ಅವರಿಗೆ ಫಿಲಂ ಫೇರ್ ವಿಮರ್ಶಕರ ಪ್ರಶಸ್ತಿ ದೊರಕಿದೆ. </p>.<p><strong>‘ಇಬ್ಬನಿ ತಬ್ಬಿದ ಇಳೆಯಲಿ’</strong> ಚಿತ್ರದ ಅಂಕಿತಾ ಅಮರ್ ಅವರ ಅನಾಮಿಕಾ ಪಾತ್ರಕ್ಕೆ ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ. </p><p>ಪೋಷಕ ನಟ ಮತ್ತು ಹೊಸ ಪ್ರತಿಭೆ ವಿಭಾಗದಲ್ಲಿ <strong>‘ಬ್ಲಿಂಕ್‘</strong> ಚಿತ್ರಕ್ಕಾಗಿ ಗೋಪಾಲಕೃಷ್ಣ ದೇಶಪಾಂಡೆ ಪ್ರಶಸ್ತಿ ಲಭಿಸಿದೆ. <br><br>ಪೋಷಕ ನಟಿ ಮತ್ತು ಹೊಸ ಪ್ರತಿಭೆ ವಿಭಾಗದಲ್ಲಿ <strong>‘ಭೀಮ’</strong> ಚಿತ್ರಕ್ಕಾಗಿ ಪ್ರಿಯಾ ಶಠಮರ್ಷಣ ಅವರು<strong> </strong>ಪ್ರಶಸ್ತಿ ಪಡೆದುಕೊಂಡಿದ್ದಾರೆ. <br><br><strong>‘ಗೌರಿ’</strong> ಚಿತ್ರಕ್ಕಾಗಿ ಸಮರ್ಜಿತ್ ಲಂಕೇಶ್ ಅವರಿಗೆ ಅತ್ಯುತ್ತಮ ಹೊಸ ನಟ ವಿಭಾಗದಲ್ಲಿ ಫಿಲಂ ಫೇರ್ ದೊರಕಿದೆ. <br><br><strong>‘ಕೆರೆಬೇಟೆ’</strong> ಚಿತ್ರಕ್ಕಾಗಿ ಬಿಂದು ಶಿವರಾಂ ಅವರಿಗೆ ಅತ್ಯುತ್ತಮ ಹೊಸ ನಟಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. </p><p><strong>‘ಕೃಷ್ಣಂ ಪ್ರಣಯ ಸಖಿ’</strong> ಚಿತ್ರದ ಹಾಡಿಗಾಗಿ ಅರ್ಜುನ್ ಜನ್ಯಾ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. </p><p><strong>ಕೃಷ್ಣಂ ಪ್ರಣಯ ಸಖಿ</strong> ಚಿತ್ರದ ಹಾಡಿಗಾಗಿ ವಿ. ನಾಗೇಂದ್ರ ಪ್ರಸಾದ್ ಅವರಿಗೆ ಅತ್ಯುತ್ತಮ ಸಾಹಿತ್ಯ ವಿಭಾಗದಲ್ಲಿ ಫಿಲಂ ಫೇರ್ ಲಭಿಸಿದೆ. </p><p>ಅತ್ಯುತ್ತಮ ಹಿನ್ನೆಲೆ ಗಾಯಕ ವಿಭಾಗದಲ್ಲಿ <strong>‘ದ್ವಾಪರ’</strong> ಹಾಡಿಗಾಗಿ ಜಸ್ಕರನ್ ಸಿಂಗ್ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. </p><p>ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ <strong>‘ಕರಟಕ ದಮನಕ’</strong> ಚಿತ್ರದ ಹಾಡಿಗಾಗಿ ಶ್ರುತಿ ಪ್ರಹ್ಲಾದ್ ಅವರು ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇರಳದಲ್ಲಿ 70 ನೇ ಫಿಲಂ ಫೇರ್ ಪ್ರಶಸ್ತಿ ಕಾರ್ಯಕ್ರಮ ನಡೆಯಿತು. ಶ್ರೀಮುರುಳಿ ಸೇರಿದಂತೆ ಅನೇಕ ಕನ್ನಡದ ಸಿನಿ ತಾರೆಯರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. </p><p>ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಸಂದೀಪ್ ಸುಂಕದ್ ನಿರ್ದೇಶನದ <strong>‘ಶಾಖಾಹಾರಿ’</strong> ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ.<br><br>ಅತ್ಯುತ್ತಮ ಚಿತ್ರ ನಿರ್ದೇಶಕ ವಿಭಾಗದಲ್ಲಿ <strong>‘ಹದಿನೇಳೆಂಟು‘</strong> ಚಿತ್ರದ ನಿರ್ದೇಶಕ ಪೃಥ್ವಿ ಕೋಣನೂರು ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. <br><br>ಅತ್ಯುತ್ತಮ ನಟ ವಿಭಾಗದಲ್ಲಿ <strong>‘ಬಘೀರ’</strong> ಚಿತ್ರಕ್ಕಾಗಿ ಶ್ರೀಮುರಳಿ ಅವರಿಗೆ ಪ್ರಶಸ್ತಿ ದೊರಕಿದೆ.</p><p>ಅಕ್ಷತಾ ಪಾಂಡವಪುರ ಅವರು <strong>‘ಕೋಳಿ ಎಸ್ರು’</strong> ಚಿತ್ರಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಫಿಲಂ ಫೇರ್ ಪಡೆದುಕೊಂಡಿದ್ದಾರೆ. </p>.<p>ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ <strong>'ಬ್ಲಿಂಕ್'</strong> ಚಿತ್ರಕ್ಕೆ ವಿಮರ್ಶಕರ ಪ್ರಶಸ್ತಿ ಲಭಿಸಿದೆ. </p><p>ಅತ್ಯುತ್ತಮ ನಟ ವಿಭಾಗದಲ್ಲಿ <strong>‘ಕೆರೆಬೇಟೆ’</strong> ಚಿತ್ರಕ್ಕಾಗಿ ಗೌರಿಶಂಕರ್ ಅವರಿಗೆ ಫಿಲಂ ಫೇರ್ ವಿಮರ್ಶಕರ ಪ್ರಶಸ್ತಿ ದೊರಕಿದೆ. </p>.<p><strong>‘ಇಬ್ಬನಿ ತಬ್ಬಿದ ಇಳೆಯಲಿ’</strong> ಚಿತ್ರದ ಅಂಕಿತಾ ಅಮರ್ ಅವರ ಅನಾಮಿಕಾ ಪಾತ್ರಕ್ಕೆ ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ. </p><p>ಪೋಷಕ ನಟ ಮತ್ತು ಹೊಸ ಪ್ರತಿಭೆ ವಿಭಾಗದಲ್ಲಿ <strong>‘ಬ್ಲಿಂಕ್‘</strong> ಚಿತ್ರಕ್ಕಾಗಿ ಗೋಪಾಲಕೃಷ್ಣ ದೇಶಪಾಂಡೆ ಪ್ರಶಸ್ತಿ ಲಭಿಸಿದೆ. <br><br>ಪೋಷಕ ನಟಿ ಮತ್ತು ಹೊಸ ಪ್ರತಿಭೆ ವಿಭಾಗದಲ್ಲಿ <strong>‘ಭೀಮ’</strong> ಚಿತ್ರಕ್ಕಾಗಿ ಪ್ರಿಯಾ ಶಠಮರ್ಷಣ ಅವರು<strong> </strong>ಪ್ರಶಸ್ತಿ ಪಡೆದುಕೊಂಡಿದ್ದಾರೆ. <br><br><strong>‘ಗೌರಿ’</strong> ಚಿತ್ರಕ್ಕಾಗಿ ಸಮರ್ಜಿತ್ ಲಂಕೇಶ್ ಅವರಿಗೆ ಅತ್ಯುತ್ತಮ ಹೊಸ ನಟ ವಿಭಾಗದಲ್ಲಿ ಫಿಲಂ ಫೇರ್ ದೊರಕಿದೆ. <br><br><strong>‘ಕೆರೆಬೇಟೆ’</strong> ಚಿತ್ರಕ್ಕಾಗಿ ಬಿಂದು ಶಿವರಾಂ ಅವರಿಗೆ ಅತ್ಯುತ್ತಮ ಹೊಸ ನಟಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. </p><p><strong>‘ಕೃಷ್ಣಂ ಪ್ರಣಯ ಸಖಿ’</strong> ಚಿತ್ರದ ಹಾಡಿಗಾಗಿ ಅರ್ಜುನ್ ಜನ್ಯಾ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. </p><p><strong>ಕೃಷ್ಣಂ ಪ್ರಣಯ ಸಖಿ</strong> ಚಿತ್ರದ ಹಾಡಿಗಾಗಿ ವಿ. ನಾಗೇಂದ್ರ ಪ್ರಸಾದ್ ಅವರಿಗೆ ಅತ್ಯುತ್ತಮ ಸಾಹಿತ್ಯ ವಿಭಾಗದಲ್ಲಿ ಫಿಲಂ ಫೇರ್ ಲಭಿಸಿದೆ. </p><p>ಅತ್ಯುತ್ತಮ ಹಿನ್ನೆಲೆ ಗಾಯಕ ವಿಭಾಗದಲ್ಲಿ <strong>‘ದ್ವಾಪರ’</strong> ಹಾಡಿಗಾಗಿ ಜಸ್ಕರನ್ ಸಿಂಗ್ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. </p><p>ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ <strong>‘ಕರಟಕ ದಮನಕ’</strong> ಚಿತ್ರದ ಹಾಡಿಗಾಗಿ ಶ್ರುತಿ ಪ್ರಹ್ಲಾದ್ ಅವರು ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>