ಹೈದರಾಬಾದ್: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾಕ್ಕೆ ತೆಲುಗಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅ.15ರಂದು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಕಾಂತಾರ ಸಿನಿಮಾ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್ನಲ್ಲಿ #KantaraTelugu ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ.
‘ನಾನು ನೋಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ‘ಕಾಂತಾರ’ ಒಂದಾಗಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ’ ಎಂದು ಸಾಯ್ ಕೃಷ್ಣ ತೇಜ್ ಟ್ವೀಟ್ ಮಾಡಿದ್ದಾರೆ.
Kantara: Overall rating :4.5/5
— Sai Krishna Tej (@ImSaiKrishnaTej) October 15, 2022
One of the best movie I have watched. Especially the climax! 🔥🔥#KantaraTelugu #RishabShetty pic.twitter.com/fApT9el2Kj
ಕಾಂತಾರ ಚಿತ್ರ ಬಿಡುಗಡೆಯಾದ ಮೊದಲ ದಿನವೇ ₹2 ಕೋಟಿ ಗಳಿಕೆ ಕಂಡಿದೆ. ಇದು ಯಾರೂ ನಿರೀಕ್ಷಿಸದ ಯಶಸ್ಸು ಎಂದು ಜೀವಿ ಎಂಬುವರು ಟ್ವೀಟ್ ಮಾಡಿದ್ದಾರೆ.
#KantaraTelugu opening day share is more than ₹2 crores. Telugu business of #Kantara is valued at ₹2 crores. Which means it literally broken even on the day one itself!
— idlebrain jeevi (@idlebrainjeevi) October 16, 2022
It’s a success that nobody expecting! It’s Telugu release is delayed by 15 days. Still rocking! 🔥
‘ಕಾಂತಾರ ಒಂದು ಅದ್ಭುತ ರಂಗಭೂಮಿಯ ಅನುಭವ ನೀಡಿತು’ ಎಂದು ಮಣಿಕಂಠ ಟ್ವೀಟ್ ಮಾಡಿದ್ದಾರೆ.
Wonderful Theaterical Experience.
— Manikanta (@ManikantaMk10) October 15, 2022
bgm👌👌👌
climax💥💥💥#Kantara#KantaraTelugu pic.twitter.com/LvKaHuiDYU
ತೆಲುಗು ಪ್ರಕ್ಷೇಕರು ಯಾವುದೇ ಭಾಷೆಯ ಭೇದವಿಲ್ಲದೆ ಒಳ್ಳೆಯ ಸಿನಿಮಾವನ್ನು ಯಾವಾಗಲೂ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಎಲ್.ಕೆ. ರಾಜ್ಕುಮಾರ್ ಹೇಳಿದ್ದಾರೆ.
Telugu People's always loves and respect Good Cinema irrespective of the language. PROUD TO BE TELUGU 😍😎#Tollywood #TeluguFilmIndustry #Kantara #KantaraHindi #KantaraTelugu pic.twitter.com/VXz05OUrZ8
— Rajkumar L K 🇮🇳🕉️🚩𓀠 (@rajkkummari) October 15, 2022
‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
#KantaraTelugu is doing very well in Telugu states..
— Ramesh Bala (@rameshlaus) October 16, 2022
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.