ಬೈಕ್ ಮೂಲಕ ಕೊಡಗಿನ ಹಳ್ಳಿಗಳಲ್ಲಿ ಚಲಿಸುವ ನಾಯಕ ಸಾಗರ್, ದಾರಿಯಲ್ಲಿ ಸಾಕಷ್ಟು ಜನರನ್ನು ಭೇಟಿಯಾಗುತ್ತಾರೆ. ಮಕ್ಕಳ ಜೊತೆ ಆಟ ಆಡುತ್ತಾರೆ. ಶಾಲೆಯ ಶಿಕ್ಷಕರು, ರೈತರನ್ನು ಭೇಟಿಯಾಗುತ್ತಾರೆ. ಸಿಕ್ಕವರಿಗೆಲ್ಲಾ ಒಂದು ಪತ್ರ ನೀಡುತ್ತಾರೆ. ಕಿರು ಚಿತ್ರದ ಕೊನೆಯಲ್ಲಿ ಎಲ್ಲರೂ ಪತ್ರವನ್ನು ಓದಿ ನಗುತ್ತಾರೆ. ಅದರಲ್ಲಿ ‘ನಿಮ್ಮ ಮತ ನಿಮ್ಮ ಭವಿಷ್ಯ’ ಎಂದು ಬರೆದಿರುತ್ತದೆ.