<p><strong>ತಿರುವನಂತಪುರ:</strong> ಮಲಯಾಳ ಚಿತ್ರರಂಗದ ಹೆಸರಾಂತ ನಟ ನೆಡುಮುಡಿ ವೇಣು ಅವರು ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಇದ್ದಾರೆ.</p>.<p>ಕೋವಿಡ್ನಿಂದ ಗುಣಮುಖರಾಗಿದ್ದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಆಯಾಸಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ನಿಧನರಾದರು ಎಂದು ಚಿತ್ರರಂಗದ ಮೂಲಗಳು ಹೇಳಿವೆ.</p>.<p>ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ. ನಟ ನೆಡುಮುಡಿ ವೇಣು ಅವರು ತಮ್ಮ 40 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.</p>.<p>ವೇಣು ಅವರು ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. 1978ರಲ್ಲಿ ಜಿ.ಅರವಿಂದನ್ ಅವರ ‘ತಂಬು’ ಚಿತ್ರದ ಮೂಲಕ ಮಲಯಾಳ ಚಿತ್ರರಂಗವನ್ನು ಪ್ರವೇಶಿಸಿದ್ದರು. ನಾಯಕ, ಖಳನಾಯಕ, ಹಾಸ್ಯಪ್ರಧಾನ ಪಾತ್ರಗಳು ಸೇರಿದಂತೆ ಹಲವು ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದ್ದು, ತಮ್ಮದೇ ಆದ ಛಾಪು ಮೂಡಿಸಿದ್ದರು.</p>.<p>ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರು ಎಂದೇ ಗುರುತಿಸಲ್ಪಡುವ ವೇಣು ಅವರು, ಹೆಸರಾಂತ ರಂಗಕರ್ಮಿ ಕವಳಂ ನಾರಾಯಣಪಣಿಕ್ಕರ್ ಅವರ ಪ್ರಯೋಗಶೀಲ ರಂಗತಂಡದ ಮೂಲಕ ವೃತ್ತಿ ಬದುಕನ್ನು ಆರಂಭಿಸಿದ್ದರು.</p>.<p>ಅವರ ನಟನಾ ಸಾಮರ್ಥ್ಯ, ಪ್ರತಿಭೆಗೆ ಕನ್ನಡಿ ಹಿಡಿದಿದ್ದ ಚಿತ್ರ 1979ರಲ್ಲಿ ತೆರೆಕಂಡಿದ್ದ ‘ತಂಕರ’. ಪದ್ಮರಾಜನ್ ರಚನೆ, ಭರತನ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಮರಗೆಲಸದವನ ಪಾತ್ರ ನಿಭಾಯಿಸಿದ್ದರು. ತದನಂತರದ್ದು ಯಶೋಗಾಥೆ.</p>.<p>ಚಿತ್ರರಂಗದ ಪರಿಣತ ಎನ್.ಬಾಲಗೋಪಾಲ್ ಅವರ ಪ್ರಕಾರ, ವೇಣು ತಮ್ಮ ಸಹಜ ಅಭಿಯನದಿಂದ ಗಮನಸೆಳೆದಿದ್ದರು. ಪಿ.ಪದ್ಮರಾಜನ್ ರಚಿಸಿ, ನಿರ್ದೇಶಿಸಿದ್ದ ಚಿತ್ರಗಳಲ್ಲಿ ಅದ್ವಿತೀಯ ಅಭಿನಯವನ್ನು ನೀಡಿದ್ದರು. ಇವುಗಳಲ್ಲಿ ಮುಖ್ಯವಾಗಿ ಹೆಸರಿಸಬಹುದಾದ ಚಿತ್ರಗಳು: ಕಳ್ಳನ್ ಪವಿತ್ರನ್ ಮತ್ತು ಒರಿಡಾತೋರು ಫಯಲವನ್.</p>.<p>30 ಮತ್ತು 40ನೇ ವಯಸ್ಸಿನಲ್ಲಿಯೇ 70 ವರ್ಷದ ವ್ಯಕ್ತಿಯ ಪಾತ್ರಧಾರಿಯಾಗಿ ಅಭಿನಯಿಸಿಸಿ ಪಾತ್ರಕ್ಕೆ ಜೀವತುಂಬಿದ್ದರು. ಮಲಯಾಳ ಕಾವ್ಯಗಳ ವಾಚನದಲ್ಲಿಯೇ ಸಿದ್ಧಹಸ್ತರಾಗಿದ್ದು, ದಕ್ಷಿಣ ಭಾರತದಲ್ಲಿಯೇ ಹೆಸರಾಗಿದ್ದರು.</p>.<p>1948ರಲ್ಲಿ ಅಲಪ್ಪುಜಾ ಜಿಲ್ಲೆಯಲ್ಲಿ ಜನಿಸಿದ್ದ ನೆಡುಮುಡಿ ವೇಣು ಕಾಲೇಜು ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸಿದ್ದರು. ಆಗ ಅವರೊಂದಿಗೆ ನಟಿಸಿದ್ದ ಫಾಜಿಲ್ ಬಳಿಕ ಜನಪ್ರಿಯ ಚಿತ್ರನಿರ್ದೇಶಕರಾಗಿ ಹೊರಹೊಮ್ಮಿದ್ದರು.</p>.<p>ಹಲವು ರಾಷ್ಟ್ರೀಯ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪುರಸ್ಕೃತರಾಗಿದ್ದರು. ಮಲಯಾಳದ ಕಿರುತೆರೆ ಧಾರವಾಹಿ ಕೈರಾಳಿವಿಲಾಸಂ ಅನ್ನು ನಿರ್ದೇಶಿಸಿ, ಒಂದು ಪಾತ್ರವನ್ನೂ ನಿಭಾಯಿಸಿದ್ದರು. ದೂರದರ್ಶನ ಇದನ್ನು ನಿರ್ಮಾಣ ಮಾಡಿತ್ತು.</p>.<p>ಸುಬ್ರಹ್ಮಣ್ಯಂ ಅವರು ನಿರ್ದೇಶಿಸಿದ್ದ ‘ಎಂಟೆ ಮಳಾ’ ಅವರು ನಟಿಸಿದ್ದ ಕಡೆಯ ಚಿತ್ರ. ವೇಣು ಅಗಲಿಕೆಗೆ ಚಿತ್ರರಂಗ, ರಾಜಕೀಯ ರಂಗದ ಹಲವರು ಕಂಬನಿ ಮಿಡಿದಿದ್ದು, ಅವರ ನಟನಾ ಕೌಶಲವನ್ನು ಸ್ಮರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಮಲಯಾಳ ಚಿತ್ರರಂಗದ ಹೆಸರಾಂತ ನಟ ನೆಡುಮುಡಿ ವೇಣು ಅವರು ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಇದ್ದಾರೆ.</p>.<p>ಕೋವಿಡ್ನಿಂದ ಗುಣಮುಖರಾಗಿದ್ದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಆಯಾಸಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ನಿಧನರಾದರು ಎಂದು ಚಿತ್ರರಂಗದ ಮೂಲಗಳು ಹೇಳಿವೆ.</p>.<p>ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ. ನಟ ನೆಡುಮುಡಿ ವೇಣು ಅವರು ತಮ್ಮ 40 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.</p>.<p>ವೇಣು ಅವರು ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. 1978ರಲ್ಲಿ ಜಿ.ಅರವಿಂದನ್ ಅವರ ‘ತಂಬು’ ಚಿತ್ರದ ಮೂಲಕ ಮಲಯಾಳ ಚಿತ್ರರಂಗವನ್ನು ಪ್ರವೇಶಿಸಿದ್ದರು. ನಾಯಕ, ಖಳನಾಯಕ, ಹಾಸ್ಯಪ್ರಧಾನ ಪಾತ್ರಗಳು ಸೇರಿದಂತೆ ಹಲವು ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದ್ದು, ತಮ್ಮದೇ ಆದ ಛಾಪು ಮೂಡಿಸಿದ್ದರು.</p>.<p>ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರು ಎಂದೇ ಗುರುತಿಸಲ್ಪಡುವ ವೇಣು ಅವರು, ಹೆಸರಾಂತ ರಂಗಕರ್ಮಿ ಕವಳಂ ನಾರಾಯಣಪಣಿಕ್ಕರ್ ಅವರ ಪ್ರಯೋಗಶೀಲ ರಂಗತಂಡದ ಮೂಲಕ ವೃತ್ತಿ ಬದುಕನ್ನು ಆರಂಭಿಸಿದ್ದರು.</p>.<p>ಅವರ ನಟನಾ ಸಾಮರ್ಥ್ಯ, ಪ್ರತಿಭೆಗೆ ಕನ್ನಡಿ ಹಿಡಿದಿದ್ದ ಚಿತ್ರ 1979ರಲ್ಲಿ ತೆರೆಕಂಡಿದ್ದ ‘ತಂಕರ’. ಪದ್ಮರಾಜನ್ ರಚನೆ, ಭರತನ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಮರಗೆಲಸದವನ ಪಾತ್ರ ನಿಭಾಯಿಸಿದ್ದರು. ತದನಂತರದ್ದು ಯಶೋಗಾಥೆ.</p>.<p>ಚಿತ್ರರಂಗದ ಪರಿಣತ ಎನ್.ಬಾಲಗೋಪಾಲ್ ಅವರ ಪ್ರಕಾರ, ವೇಣು ತಮ್ಮ ಸಹಜ ಅಭಿಯನದಿಂದ ಗಮನಸೆಳೆದಿದ್ದರು. ಪಿ.ಪದ್ಮರಾಜನ್ ರಚಿಸಿ, ನಿರ್ದೇಶಿಸಿದ್ದ ಚಿತ್ರಗಳಲ್ಲಿ ಅದ್ವಿತೀಯ ಅಭಿನಯವನ್ನು ನೀಡಿದ್ದರು. ಇವುಗಳಲ್ಲಿ ಮುಖ್ಯವಾಗಿ ಹೆಸರಿಸಬಹುದಾದ ಚಿತ್ರಗಳು: ಕಳ್ಳನ್ ಪವಿತ್ರನ್ ಮತ್ತು ಒರಿಡಾತೋರು ಫಯಲವನ್.</p>.<p>30 ಮತ್ತು 40ನೇ ವಯಸ್ಸಿನಲ್ಲಿಯೇ 70 ವರ್ಷದ ವ್ಯಕ್ತಿಯ ಪಾತ್ರಧಾರಿಯಾಗಿ ಅಭಿನಯಿಸಿಸಿ ಪಾತ್ರಕ್ಕೆ ಜೀವತುಂಬಿದ್ದರು. ಮಲಯಾಳ ಕಾವ್ಯಗಳ ವಾಚನದಲ್ಲಿಯೇ ಸಿದ್ಧಹಸ್ತರಾಗಿದ್ದು, ದಕ್ಷಿಣ ಭಾರತದಲ್ಲಿಯೇ ಹೆಸರಾಗಿದ್ದರು.</p>.<p>1948ರಲ್ಲಿ ಅಲಪ್ಪುಜಾ ಜಿಲ್ಲೆಯಲ್ಲಿ ಜನಿಸಿದ್ದ ನೆಡುಮುಡಿ ವೇಣು ಕಾಲೇಜು ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸಿದ್ದರು. ಆಗ ಅವರೊಂದಿಗೆ ನಟಿಸಿದ್ದ ಫಾಜಿಲ್ ಬಳಿಕ ಜನಪ್ರಿಯ ಚಿತ್ರನಿರ್ದೇಶಕರಾಗಿ ಹೊರಹೊಮ್ಮಿದ್ದರು.</p>.<p>ಹಲವು ರಾಷ್ಟ್ರೀಯ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪುರಸ್ಕೃತರಾಗಿದ್ದರು. ಮಲಯಾಳದ ಕಿರುತೆರೆ ಧಾರವಾಹಿ ಕೈರಾಳಿವಿಲಾಸಂ ಅನ್ನು ನಿರ್ದೇಶಿಸಿ, ಒಂದು ಪಾತ್ರವನ್ನೂ ನಿಭಾಯಿಸಿದ್ದರು. ದೂರದರ್ಶನ ಇದನ್ನು ನಿರ್ಮಾಣ ಮಾಡಿತ್ತು.</p>.<p>ಸುಬ್ರಹ್ಮಣ್ಯಂ ಅವರು ನಿರ್ದೇಶಿಸಿದ್ದ ‘ಎಂಟೆ ಮಳಾ’ ಅವರು ನಟಿಸಿದ್ದ ಕಡೆಯ ಚಿತ್ರ. ವೇಣು ಅಗಲಿಕೆಗೆ ಚಿತ್ರರಂಗ, ರಾಜಕೀಯ ರಂಗದ ಹಲವರು ಕಂಬನಿ ಮಿಡಿದಿದ್ದು, ಅವರ ನಟನಾ ಕೌಶಲವನ್ನು ಸ್ಮರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>