ಈಗಾಗಲೇ, ಕಲರಿಂಗ್ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಈ ವರ್ಷದ ಅಂತ್ಯದವರೆಗೂ ಈ ಪ್ರಕ್ರಿಯೆ ನಡೆಯಲಿದೆಯಂತೆ. ‘ಕಸ್ತೂರಿ ನಿವಾಸ ಸಿನಿಮಾಕ್ಕೆ ಬಣ್ಣದ ಸ್ಪರ್ಶ ನೀಡಿ ಮರುಬಿಡುಗಡೆ ಮಾಡಿದಾಗ ಮಂತ್ರಾಲಯ ಮಹಾತ್ಮೆ ಸಿನಿಮಾವನ್ನೂ ಇದೇ ಮಾದರಿಯಲ್ಲಿ ಮಾಡಿ ಮರುಬಿಡುಗಡೆ ಮಾಡುವಂತೆ ಪಾರ್ವತಮ್ಮ ರಾಜ್ಕುಮಾರ್ ನನಗೆ ಕೋರಿದ್ದರು. ಅವರ ಆಸೆಯಂತೆ ಈಗ ಚಿತ್ರಕ್ಕೆ ಬಣ್ಣದ ಲೇಪನ ನೀಡಿ ಜನರ ಮುಂದಿಡಲು ನಿರ್ಧರಿಸಿದ್ದೇವೆ’ ಎಂದು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ‘ಪ್ರಜಾ ಪ್ಲಸ್’ಗೆ ವಿವರಿಸಿದರು.