<figcaption>""</figcaption>.<p><strong>ರಾಮನಗರ:</strong> ಏಪ್ರಿಲ್ 17ರಂದು ಜಾನಪದ ಲೋಕದ ಬಳಿ ನಿಖಿಲ್ ಕುಮಾರಸ್ವಾಮಿ–ರೇವತಿ ವಿವಾಹ ನಡೆಯಲಿದೆ. ಇವರಿಬ್ಬರ ವಿವಾಹದ್ದೆನ್ನಲಾದ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರೊಟ್ಟಿಗೆ ಎಚ್.ಡಿ. ಕುಮಾರಸ್ವಾಮಿ ಬರೆದಿದ್ದಾರೆ ಎನ್ನಲಾದ ಪತ್ರವೂ ಇದೆ.</p>.<p>ಎಚ್.ಡಿ. ದೇವೇಗೌಡರ ಕುಟುಂಬದವರ ಶುಭ ವಿವಾಹ ಎಂದು ಪತ್ರಿಕೆಯ ಮುಂಭಾಗದಲ್ಲಿದ್ದು, ಜೊತೆಗೆ ಅನಿತಾ ಹಾಗೂ ಕುಮಾರಸ್ವಾಮಿ ಅವರ ಹೆಸರುಗಳಿವೆ. ಪತ್ರಿಕೆಯ ಇನ್ನೊಂದು ಭಾಗದಲ್ಲಿ ಕುಮಾರಸ್ವಾಮಿ ಅವರ ಕೈಬರಹದ್ದು ಎನ್ನಲಾದ ಪತ್ರವಿದೆ. ಆದರೆ ಇದು ಅಧಿಕೃತ ಆಹ್ವಾನ ಪತ್ರವೇ ಎಂಬುದನ್ನು ಜೆಡಿಎಸ್ ಮುಖಂಡರು ಖಚಿತಪಡಿಸಿಲ್ಲ.</p>.<figcaption>ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಮಂತ್ರಣ ಪತ್ರ</figcaption>.<p>‘ನಿಖಿಲ್ ಮದುವೆ ಆಹ್ವಾನ ಪತ್ರಿಕೆಯನ್ನು ಇನ್ನೂ ದೇವರ ಪೂಜೆಗೆ ಇಟ್ಟಿಲ್ಲ. ಅಲ್ಲದೆ ಹಂಚಲು ನಮಗ್ಯಾರಿಗೂ ಕೊಟ್ಟಿಲ್ಲ. ಪತ್ರದಲ್ಲಿ ಇರುವ ಎಚ್ಡಿಕೆ ಸಹಿಯೂ ಅವರದ್ದು ಎಂಬಂತೆ ಇಲ್ಲ’ ಎಂದು ರಾಮನಗರದ ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.</p>.<p><strong>ಏನಿದೆ ಪತ್ರದಲ್ಲಿ?: </strong>‘ನನ್ನ ಪ್ರೀತಿಯ ಎಲ್ಲರಿಗೂ ಸ್ವಪ್ರೇಮ ನಮಸ್ತೆ, ನಿಮಗೊಂದು ಪ್ರೀತಿಯ ಕರೆಯೋಲೆ’ ಎಂಬ ಒಕ್ಕಣೆಯೊಂದಿಗೆ ಪತ್ರ ಆರಂಭವಾಗುತ್ತದೆ.</p>.<p>‘ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ರಾಜಕೀಯವಾಗಿ ಆಶೀರ್ವದಿಸಿ, ಪುನರ್ ಜನ್ಮ ನೀಡಿದ್ದು ನಾಡಿನ ಜನತೆ. ವಿಶೇಷವಾಗಿ ರಾಮನಗರ ಜಿಲ್ಲೆಯ ತಂದೆ-ತಾಯಂದಿರು. ರಾಜಕೀಯ ನನಗೊಂದು ಆಕಸ್ಮಿಕವಾಗಿ ಸಿಕ್ಕ ಬದುಕು. ಅದನ್ನು ಸಲಹುತ್ತಾ ಬಂದಿರುವ ನಿಮ್ಮ ಪ್ರೀತಿಗೆ ನಾನು ಸದಾ ಋಣಿ’ ಎಂದು ಎಚ್ಡಿಕೆ ನೆನೆದಿದ್ದಾರೆ.</p>.<p>ಬಳಿಕ ರಾಜಕೀಯ ಸ್ಥಿತ್ಯಂತರದಲ್ಲಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದನ್ನು ನೆನೆದಿದ್ದಾರೆ. ಜನರೊಂದಿಗಿನ ತಮ್ಮ ಒಡನಾಟವನ್ನು ಸುದೀರ್ಘವಾಗಿ ಸ್ಮರಿಸಿದ್ದಾರೆ. ‘ಏ.17ರಂದು ಮಗನ ಮದುವೆ. ತಪ್ಪದೇ ಬನ್ನಿ. ಮಗ–ಸೊಸೆಯನ್ನು ಹರಸಿ’ ಎನ್ನುವುದರೊಂದಿಗೆ ಪತ್ರ ಮುಗಿದಿದೆ. ಕೆಳಗೆ ಕುಮಾರಸ್ವಾಮಿ ಅವರದ್ದು ಎನ್ನಲಾದ ಸಹಿಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ರಾಮನಗರ:</strong> ಏಪ್ರಿಲ್ 17ರಂದು ಜಾನಪದ ಲೋಕದ ಬಳಿ ನಿಖಿಲ್ ಕುಮಾರಸ್ವಾಮಿ–ರೇವತಿ ವಿವಾಹ ನಡೆಯಲಿದೆ. ಇವರಿಬ್ಬರ ವಿವಾಹದ್ದೆನ್ನಲಾದ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರೊಟ್ಟಿಗೆ ಎಚ್.ಡಿ. ಕುಮಾರಸ್ವಾಮಿ ಬರೆದಿದ್ದಾರೆ ಎನ್ನಲಾದ ಪತ್ರವೂ ಇದೆ.</p>.<p>ಎಚ್.ಡಿ. ದೇವೇಗೌಡರ ಕುಟುಂಬದವರ ಶುಭ ವಿವಾಹ ಎಂದು ಪತ್ರಿಕೆಯ ಮುಂಭಾಗದಲ್ಲಿದ್ದು, ಜೊತೆಗೆ ಅನಿತಾ ಹಾಗೂ ಕುಮಾರಸ್ವಾಮಿ ಅವರ ಹೆಸರುಗಳಿವೆ. ಪತ್ರಿಕೆಯ ಇನ್ನೊಂದು ಭಾಗದಲ್ಲಿ ಕುಮಾರಸ್ವಾಮಿ ಅವರ ಕೈಬರಹದ್ದು ಎನ್ನಲಾದ ಪತ್ರವಿದೆ. ಆದರೆ ಇದು ಅಧಿಕೃತ ಆಹ್ವಾನ ಪತ್ರವೇ ಎಂಬುದನ್ನು ಜೆಡಿಎಸ್ ಮುಖಂಡರು ಖಚಿತಪಡಿಸಿಲ್ಲ.</p>.<figcaption>ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಮಂತ್ರಣ ಪತ್ರ</figcaption>.<p>‘ನಿಖಿಲ್ ಮದುವೆ ಆಹ್ವಾನ ಪತ್ರಿಕೆಯನ್ನು ಇನ್ನೂ ದೇವರ ಪೂಜೆಗೆ ಇಟ್ಟಿಲ್ಲ. ಅಲ್ಲದೆ ಹಂಚಲು ನಮಗ್ಯಾರಿಗೂ ಕೊಟ್ಟಿಲ್ಲ. ಪತ್ರದಲ್ಲಿ ಇರುವ ಎಚ್ಡಿಕೆ ಸಹಿಯೂ ಅವರದ್ದು ಎಂಬಂತೆ ಇಲ್ಲ’ ಎಂದು ರಾಮನಗರದ ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.</p>.<p><strong>ಏನಿದೆ ಪತ್ರದಲ್ಲಿ?: </strong>‘ನನ್ನ ಪ್ರೀತಿಯ ಎಲ್ಲರಿಗೂ ಸ್ವಪ್ರೇಮ ನಮಸ್ತೆ, ನಿಮಗೊಂದು ಪ್ರೀತಿಯ ಕರೆಯೋಲೆ’ ಎಂಬ ಒಕ್ಕಣೆಯೊಂದಿಗೆ ಪತ್ರ ಆರಂಭವಾಗುತ್ತದೆ.</p>.<p>‘ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ರಾಜಕೀಯವಾಗಿ ಆಶೀರ್ವದಿಸಿ, ಪುನರ್ ಜನ್ಮ ನೀಡಿದ್ದು ನಾಡಿನ ಜನತೆ. ವಿಶೇಷವಾಗಿ ರಾಮನಗರ ಜಿಲ್ಲೆಯ ತಂದೆ-ತಾಯಂದಿರು. ರಾಜಕೀಯ ನನಗೊಂದು ಆಕಸ್ಮಿಕವಾಗಿ ಸಿಕ್ಕ ಬದುಕು. ಅದನ್ನು ಸಲಹುತ್ತಾ ಬಂದಿರುವ ನಿಮ್ಮ ಪ್ರೀತಿಗೆ ನಾನು ಸದಾ ಋಣಿ’ ಎಂದು ಎಚ್ಡಿಕೆ ನೆನೆದಿದ್ದಾರೆ.</p>.<p>ಬಳಿಕ ರಾಜಕೀಯ ಸ್ಥಿತ್ಯಂತರದಲ್ಲಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದನ್ನು ನೆನೆದಿದ್ದಾರೆ. ಜನರೊಂದಿಗಿನ ತಮ್ಮ ಒಡನಾಟವನ್ನು ಸುದೀರ್ಘವಾಗಿ ಸ್ಮರಿಸಿದ್ದಾರೆ. ‘ಏ.17ರಂದು ಮಗನ ಮದುವೆ. ತಪ್ಪದೇ ಬನ್ನಿ. ಮಗ–ಸೊಸೆಯನ್ನು ಹರಸಿ’ ಎನ್ನುವುದರೊಂದಿಗೆ ಪತ್ರ ಮುಗಿದಿದೆ. ಕೆಳಗೆ ಕುಮಾರಸ್ವಾಮಿ ಅವರದ್ದು ಎನ್ನಲಾದ ಸಹಿಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>