ಶಿವರಾಜಕುಮಾರ್ ಅವರು ನಟಿಸಿರುವ ಒಟ್ಟು ಚಿತ್ರಗಳ ಸಂಖ್ಯೆ ಸುಮಾರು 120. ಕಂಗನಾ ರಣಾವತ್ ಅವರು ನಟಿಸಿರುವ ಚಿತ್ರಗಳು ಸುಮಾರು 30. ಆದರೆ ಇಂದು ಕೇವಲ ಕಂಗನಾ ರಣಾವತ್ ಅವರಿಗೆ ಮಾತ್ರ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. pic.twitter.com/UNILFiNibd
ನಮ್ಮ ಕರ್ನಾಟಕದ ಶಿವಣ್ಣ ಅವರಿಗೆ ಏಕೆ ಪ್ರಶಸ್ತಿ ಸಿಕ್ಕಿಲ್ಲ ಎಂದು ಯಾವ ಕನ್ನಡ ಹಾಗೂ ಅಭಿಮಾನಿ ಸಂಘ ಸಂಸ್ಥೆಗಳು ಪ್ರಶ್ನಿಸುತ್ತಿಲ್ಲ. ಈಗೆ ಮುಂದುವರಿದರೆ ಕನ್ನಡ ಚಿತ್ರರಂಗವು ಬೆಳೆಯುವುದು ಹೇಗೆ. ಎಲ್ಲಿಯವರೆಗೂ ಕನ್ನಡಿಗರು ಪ್ರಶ್ನೆ ಮಾಡುವುದಿಲ್ಲವೊ ಅಲ್ಲಿಯವರೆಗೂ ಕನ್ನಡಿಗರಿಗೆ ಯಾವ ಆದ್ಯತೆಗಳು ಸಿಗುವುದಿಲ್ಲ.
ಕೇವಲ ಶಿವಣ್ಣ ಮಾತ್ರ ಅಲ್ಲ. ವಿಷ್ಣುವರ್ಧನ್ ಅವರು, ಅಂಬರೀಷ್ ಅವರು , ಅನಂತನಾಗ್ ಅವರು ಇವರು ತಮ್ಮ ಜೀವಮಾನದಲ್ಲಿ ಚಿತ್ರರಂಗಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಇವರೆಲ್ಲ ಪ್ರಶಸ್ತಿಯಿಂದ ವಂಚಿತವಾಗಿರೋದು ಏಕೆ ಗೊತ್ತೆ ದಕ್ಷಿಣ ಭಾರತದ ವ್ಯಕ್ತಿಗಳೆಂಬ ತಾರತಮ್ಯದಿಂದ.